ಚಳ್ಳಕೆರೆ ಜನಧ್ವನಿ ವಾರ್ತೆ ಜ.11 ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ ಐದು ಗ್ಯಾರೆಂಟಿ ಗಳಲ್ಲಿ ನಾಲ್ಕು ನೀಡಲಾಗಿದ್ದು ಮತ್ತೊಂದು ಯುವ ನಿಧಿ ಗ್ಯಾರೆಂಟ್ ಶುಕ್ರವಾರ ಶಿವಮೊಬ್ಬದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಧಿಕಾರಿಗಳಿಗೆ ಹಾಗೂ ಉಪನ್ಯಾಸಕರಿಗೆ ಆಯೋಜಿಸಿದ್ದ ಯುವನಿಧಿ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಗೆ ಯುವಕರನ್ನು ಕರೆದುಕೊಂಡು ಹೋಗಲು 110 ಸರಕಾರಿ ಬಸ್ ಗಳ ವ್ಯವಸ್ಥೆ ಮಾಡಿದ್ದು ಅದರಲ್ಲಿ ಚಳ್ಳಕೆರೆ ತಾಲೂಕಿಗೆ 30 ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು ಉಪನ್ಯಾಸಕರು ಹಾಗೂ ಅಧಿಕಾರಿಗಳು ಯುವಕರಿಗೆ ಯಾವುದೇ ಸದಸ್ಯೆಯಾಗದಂತೆ ಕರೆದುಕೊಂಡು ಹೋಗಿ ಕರೆ ತರಬೇಕು ಇದು ರಾಜಕೀಯ ಕಾರ್ಯಕ್ರಮವಲ್ಲ ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯಕ್ರವನ್ನು ಯಶಸ್ವಿಗೊಳಸಲು ಮುಂದಾಗ ಬೇಕು ಎಂದರು.
ಜಿಪಂ ಯೋಜನಾಧಿಕಾರಿ ಹಾಗೂ ಯುವನಿಧಿ ಜಿಲ್ಲಾ ನೋಡೆಲ್ ಅಧಿಕಾರಿ ಸತೀಶ್ ರೆಡ್ಡಿ ಮಾತನಾಡಿ
ಚಳ್ಳಕೆರೆ ತಾಲೂಕಿಗೆ 30 ಬಸ್ ಗಳ ವ್ಯವವಸ್ಥೆ ಮಾಡಿದ್ದು ಕಾರ್ಯಕ್ರಮದ ಸಮಯ ಸ್ಥಳ ಹಾಗೂ ಮಾರ್ಗ ಸೂಚಿಯನ್ನು ಸಾರಿಗ ಇಲಾಖೆ ಅಧಿಕಾರಿಗಳ ಗಮನಸೆಳೆದಿದ್ದು. ಮಹಿಳೆಯರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಯುವಕರ ಬಸ್ ನಲ್ಲಿ ಕುಳಿತರ ತಕ್ಷಣ ಆಯಾ ಬಸ್ಸಿನಲ್ಲಿರುವ ಯುವಕರ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು ಕಾರ್ಯಕ್ರಮಕ್ಕೆ ಹೋಗುವಾಗ ಮುಗಿದ ನಂತರ ಅವರನ್ನು ಕರೆತರಲು ಕಾಲ ಕಾಲಕ್ಕೆ ಮಾಹಿತಿ ಸೂಚನೆಗಳನ್ನು ನೀಡಬೇಕು.
ಕಾರ್ಯಕ್ರಮಕ್ಕೆ ಬರುವ ಯುವಕರಿಗೆ ಆಯಾ ಕಾಲೇಜಿನ ಉಪನ್ಯಾಸಕರೆ ಉಪಹಾರದ ವ್ಯವಸ್ಥೆ ಮಾಡಬೇಕು ಪ್ಲಾಸ್ಟಿಕ್ ಕವರ್ ನಲ್ಲಿ ಕೊಡುವಂತಿಲ್ಲ ಬಾಕ್ಸ್ ನಲ್ಲೇ ತಿಂಡಿ ಕೊಡಬೇಕು, ತಾಲೂಕು ಪಂಚಾಯತ್ ಇಒ ಹಾಗೂ ತಹಶೀಲ್ದಾರ್ ಇಬ್ಬರಿಗೂ ಸಮಾನ ಅಧಿಕಾರ ಹಾಗೂ ಜವಾಬ್ದಾರಿ ಇರುತ್ತದೆ. ಉಳಿತ ನೋಡೆಲ್ ಅಧಿಕಾರಿಗಳು ಹಾಗೂ ಉಪನ್ಯಾಸಕರು ಯುವಕರಿಗೆ ಯಾವುದೆ ಅಹಿತಕರ ಘಟನೆಗಳು ನಡೆಯುದಂತೆ ಬಹಳ ಜವಾಬ್ದಾರಿಯಿಂದ ಯುವಕರನ್ನು ಕರೆದುಕೊಂಡು ಹೋಗಿ ಕರೆತರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ತಾಂಪಂ ಶಶಿಧರ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ವಿವಿಧ ಕಾಲೇಜುಗಳ ಉಪನ್ಯಾಸಕರು ಉಪಸ್ಥಿತರಿದ್ದರು.
0 Comments