ಚಳ್ಳಕೆರೆ ಜನಧ್ವನಿ ವಾರ್ತೆ ಮೇ 9 ಕಳೆದ ವರ್ಷ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದು ಚಿತ್ರದುರ್ಗ ಈ ಬಾರಿ 21 ಸ್ಥಾನ ಪಡೆದೆ , ಜಿಲ್ಲೆಗೆ ಮೊದಲಸ್ಥಾನ ಪಡೆದ ಚಳ್ಳಕೆರೆ ಗ ಮೂರನೇ ಸ್ಥಾನ ಕುಸಿದಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕಳೆದ ವರ್ಷ 2 ನೇ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆದ ಬೆನ್ನಲ್ಲಿ ಈ ಬಾರಿ ಚಿತ್ರದುರ್ಗ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳನ್ನು ತಡೆಯಲು ಕಡ್ಡಾಯವಾಗಿ ಸಿಸಿ, ಕ್ಯಾಮರ ಅಳವಡಿಕೆ ಪರೀಕ್ಷಾ ಕೇಂದ್ರಗಳಿಗೆ ವೀಕ್ಷರ ನೇಮಕ ಸೇರಿದಂತೆ ಶಿಕ್ಷಣ ಇಲಾಖೆಯ ಆಯುಕ್ತರೇ ಚಳ್ಳಕೆರೆ ಪರೀಕ್ಷ ಕೇಂದ್ರಗಳಿಗೆ ಭೇಟಿ, ನಕಲು ಮಾಡಲು ಸಹಕರಿಸಿದ ಶಿಕ್ಷರ ಅಮಾನತು ಸೇರಿದಂತೆ ಬಿಗಿ ಭದ್ರತೆ ವ್ಯವಸ್ಥೆ ಮಾಡಿದ್ದರಿಂದ ಈ ಬಾರಿ ಶ್ರಮ ಪಟ್ಟು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಳೆದ ವರ್ಷ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯದಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದ್ದರು. ಈ ವರ್ಷ ಚಿತ್ರದುರ್ಗ ಜಿಲ್ಲೆ 21ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಕಳೆದ ವರ್ಷದ ಫಲಿತಾಂಶ ಉಳಿಸಿಕೊಳ್ಳಲು ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಹರಸಾಹಸ ಮಾಡಿದರೂ, ಫಲಿತಾಂಶ 21 ಸ್ಥಾನ ಕೆಳಕ್ಕೆ ಜಿಗಿದಿದೆ.
ಕಳೆದ ವರ್ಷ 14ನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಈ ವರ್ಷ 1ನೇ ಸ್ಥಾನ ಮುಡಿಗೇರಿಸಿಕೊಂಡಿದೆ. ಈ ವರ್ಷ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಬಾರಿ ಸಿ.ಸಿ.ಕ್ಯಾಮರಾ ಅಳವಡಿಸಿ ಪರೀಕ್ಷೆಗಳನ್ನು ಕಠಿಣವಾಗಿ ನಡೆಸಿರುವು ಫಲಿತಾಂಶದಲ್ಲಿ ಕುಂಠಿತವಾಗಲು ಕಾರಣವಾಗಿದೆ ಎಂಬುದು ಪ್ರಜ್ಞಾನವಂತರಿಂದ ಕೇಳಿ ಬರುವ ಮಾತುಗಳು.
0 Comments