ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳ ತೆರವಿಗಾಗಿ ದೊಡ್ಡ ಉಳ್ಳಾರ್ತಿ ಗ್ರಾಮಸ್ಥರ ಆಗ್ರಹ.
by ಗೋಪನಹಳ್ಳಿಶಿವಣ್ಣ | 28/09/23 | ಜನಧ್ವನಿ
ಚಳ್ಳಕೆರೆ ಸೆ.28. ವಾಹನ ಸವಾರರೆ ಎಚ್ಚರ ನಾನು ರಸ್ತೆಯಲ್ಲೇ ನಿಂತಿದ್ದೇನೆ ನನಗೆ ಟಚ್ ಮಾಡಿದರೆ ಶಾಕ್ ಹೊಡೆಯುತ್ತೇನೆ ಹುಷಾರ್ ಸ್ವಲ್ಪ ಯ್ಯಾಮರಿದರೆ ಬಾರದೂರಿಗೆ ಪಯಣ . ಹೌದು ಇದು ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಮುಖ್ಯ ರಸ್ತೆ ಅಗಲೀಕರಣ ಮಾಡಿದರೂ ರಸ್ತೆ ಪಕ್ಕದ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಇರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸ್ವಲ್ಪ ಯ್ಯಾಮಾರಿದರೂ ವಿದ್ಯುತ್ ಅವಘಡ ಗ್ಯಾರೆಂಟಿ.
ರಸ್ತೆಗೆ ಹೊಂದಿಕೊಂಡಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಅನೇಕ ಬಾರಿ ಬೆಸ್ಕಾಂ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ವಿದ್ಯುತ್ ಅವಗಡ ಸಂಭವಿಸಿದರೆ ಯಾರು ಹೊಣೆ ಎಂಬಂತಾಗಿದೆ.
![](https://janadhwani.in/wp-content/uploads/2023/09/IMG-20230903-WA0133.jpg)
ಚಳ್ಳಕೆರೆ ನಗರದಿಂದ ಆಂದ್ರೇಶಕ್ಕೆ ಹೋಗುವ ರಸ್ತೆಯಾಗಿದ್ದು ಅನೇಕ ವಾಹನಗಳು ಸಂಚರಿಸುತ್ತಿವೆ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡರೂ ಸಹ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಇರುವುರಿಂದ ವಾಹನ ಸವಾರರು ಜೀವ ಭಯದಲ್ಲಿ ವಾಹನ ಸಂಚಾರ ಮಾಡುವಂತಾಗಿದೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ
0 Comments