ಚಳ್ಳಕೆರೆ ಸೆ.11. ರಾಷ್ಟ್ರೀಯ ಹೆದ್ದಾರಿ ನಂದಾಪುರ ಬಳಿ ಕಾರು ಹರಿದು ಮಹಿಳೆಯೊರ್ವಳು ಸ್ಥಳದಲ್ಲೇ ಮೃತ ಪಟ್ಟ ಘಟನೆ ಸೋಮವಾರ ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಮಂಗೇರ ಕೆಂಚಮ್ಮ(52) ರಸ್ತೆ ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಯಾಗಿದ್ದು. ಗಂಡ ನಾಗರಾಜ್ ಜೊತೆ ಕೆಂಚಮ್ಮ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಿ ಬೆಂಗಳೂರಿನಿಂದ ಚಳ್ಳಕೆರೆಗೆ ಬರುವ ಖಾಗಸಿ ಬಸ್ ಹತ್ತಿದ್ದಾರೆ. ಗಂಡ ಸಾಣೀಕೆರೆ ಗ್ರಾಮದಲ್ಲಿ ಇಳಿದುಕೊಂಡರೆ ಹೆಂಡತಿ ಕೆಂಚಮ್ಮ ಗೋಪನಹಳ್ಖಿ ಗೇಟ್ ಬಳಿ ಇಳಿಯುವ ಬದಲು ಹೊಟ್ಟೆಪ್ಪನಹಳ್ಳಿ ಗೇಟ್ ಮೇಲ್ಸೇತವೆ ಬಳಿ ಮಿಸ್ಸಾಗಿ ಇಳಿದುಕೊಂಡು ಗೋಪನಹಳ್ಳಿಗೆ ಹೋಗುವವರು ಯಾರಾದರೂ ಸಿಗ ಬಹುದು ಎಂದು ಕೊಂಡು ನಂದಾಪುರ ಗೇಟ್ ಕಡೆ ರಸ್ತೆ ದಾಟುವಾಗ ಚಳ್ಳಕೆರೆ ಕಡೆಯಿಂದ ಹಿರಿಯೂರು ಕಡೆಗೆ ಹೋಗುವ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕೆಂಚಮ್ಮ ಸ್ಥಳದಲ್ಲೇ ಮೃತ ಪಟ್ಟಿರುತ್ತಾಳೆ ವಿಷಯ ತಿಳಿದ ಪೋಲಿಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕಾರು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತೆ ಕೆಂಚಮ್ಮನ ಮಗ ಧನಂಜಯ್ ಡಿಜಿಟಲ್ ಮೀಡಿಯಾದೊಂದಿ ಗೆ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಿರುವುದರಿಂದ ಊರುಗಳ ಗೇಟ್ ಗಳು ತಿಳಿಯದಂತಾಗಿದೆ ಖಾಸಗಿ ಬಸ್ಸಿನವರು ಹಳ್ಖಿಗಳ ಸರ್ವೀಸ್ ರಸ್ತೆ ಬುಟ್ಟು ಮೇಲ್ಸೇತುವೆ ಮೇಲೆ ಹೋಗುವುದರಿಂದ ಬೆಂಗಳೂರು ಸೇರಿದಂತೆ ವಿವುಧ ಕಡೆ ಹೋದವರು ಊರುಗಳಿಗೆ ಮರಳಿ ಬರುವಾಗ ಮಿಸ್ಸಾಗುತ್ತದೆ ಆದರೆ ಬಸ್ಸಿವರು ನಮ್ಮ ತಾಯಿಯನ್ನು ಗೋಪನಹಳ್ಳಿ ಗೇಟ್ ಬಳಿ ಇಳಿಸಿದ್ದರೆ ನಮ್ಮ ತಾಯಿ ರಸ್ತೆ ಅಪಘಾತದಲ್ಲಿ ಮೃತ ಪಡುತ್ತಿರಲಿಲ್ಲ ಹೊಟ್ಟಪ್ಪನಹಳ್ಳಿ ಗೇಟ್ ಮೇಲ್ಸೇವೆ ಬಳಿ ಇಳಿಸಿದದರಿಂದ ರಾತ್ರಿ ಕತ್ತಲಲ್ಲಿ ರಸ್ತೆ ಮಿಸ್ಸಾಗಿ ರಸ್ತೆ ದಾಟುವಾಗ ಅಪಘಾತಕ್ಕೀಡಾಗುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments