ರಸ್ತೆ ಅಗೆಯಲು ಯಾರ ಗಮನಕ್ಕೂ ತಾರದೆ ಪರವಾಗೆ ಪಡೆಯದೆ ರಸ್ತೆ ಅಗೆದರೆ ನಿಮ್ಮ ಮೇಲೆ ದೂರು ನೀಡಲಾಗುವುದು ಪಿ ಡಿ ಒ ರಾಮಚಂದ್ರಪ್ಪ.
by ಗೋಪನಹಳ್ಳಿಶಿವಣ್ಣ | 12/10/23 | ಜನಧ್ವನಿ
ಚಳ್ಳಕೆರೆ ಅ.12. ಗ್ರಾಮಪಂಚಾಯಿತಿ ಪರವಾನಿಗೆ ಪಡೆಯದೆ ಯಾರ ಗಮಕ್ಕೂ ತಾರದೆ ನಿಮ್ಮ ಪಾಡಿಗಿ ನೀವು ರಸ್ತೆ ಅಗೆದು ಗುಂಡಿ ತೋಡಿ ಹೋದರೆ ಯಾರೂ ಹೊಣೆ ನಿಮ್ಮ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಗುತ್ತಿಗೆದಾರರಿಗೆ ಪಿ ಡಿ ಒ ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ. ಹೌದು ಇದು ಚಳ್ಳಕೆರೆ ತಾಲೂಕಿ ನಗರಂಗರೆ ಗ್ರಾಮದಲ್ಲಿ ಜಿಯೋ ಸಂಸ್ಥೆಯವರು ಕೆಬಲ್ ಅಳವಡಿಕೆ ಮಾಡಲು ಜೆಸಿಬಿ ಯಂತ್ರದಿಂದ ಡಾಂಬರ್ ರಸ್ತೆ ಅಗೆಯುತ್ತಿರುವುದನ್ನು ಕೆಆರ್ ಎಸ್ ಪಕ್ಷದ ಸೈನಿಕರು ಲೈವ್ ವೀಡಿಯೋ ಮಾಡುವ ಮೂಲಕ ಸಂಬಂಧ ಪಟ್ಟ. ಅಧಿಕಾರಿಗಳಿಗೆ ಸಾಮಾಜಿಕ ಜಾಲ ತಾಣದಲ್ಲಿ ಪ್ರಶ್ನೆ ಮಾಡಿದಾಗ ತಕ್ಷಣವೇ ಸ್ಥಳಕ್ಕೆ ದಾವಿಸಿದ ಪಿಡಿಒ ರಾಮಚಂದ್ರಪ್ಪ ಕಾಮಗಾರಿಯನ್ನು ನಿಲ್ಲಿ ಗುತ್ತಿಗೆ ದಾರರಿಗೆ ದೂರವಣಿ ಮೂಲಕ ಕರೆಮಾಡಿ ಇದು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಯಾಗಿದ್ದರಿಂದ ಸುಮ್ಮನಿದ್ದೆ ಆದರೆ ನೀವು ಯಾವ ಇಲಾಖೆಯಿಂದಲೂ ರಸ್ತೆ ಅಗೆಯಲು ಪರವಾನಿಗೆ ಪಡೆದಿಲ್ಲ ರಸ್ತೆ ಹಾಳದರೆ ಯಾರು ಹೊಣೆ?.ಪೈಪ್ ಲೈನ್ ತೋಡುವಾಗ ಕುಡಿಯುವ ನೀರಿನ ಪೈಪ್ ಹೊಡೆದು ಹೋದರೆ ಯಾರೂ ?.ಹೊಣೆ ಅಗತ್ಯ ದಾಖಲೆಗಳೊಂದಿಗೆ ಪರವಾನಿಗೆ ಪಡೆಯ ಬೇಕು ಕಿತ್ತು ಹೋದ ರಸ್ತೆ ದುರಸ್ಥಿ ಮಾಡಿಸುವವರು ಯಾರೂ.? ಪರವಾನಿ ಪಡೆಯದೆ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಅಗೆಯಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಆರ್ ಎಸ್ ಪಕ್ಷದ ಸೈನಿಕ ಮಹೇಶ್ ಮಾತನಾಡಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೇಬಲ್.ಕುಡಿಯುವ ನೀರಿನ ಪೈಪ್ ಅಳವಡಿಕೆಗೆಂದು ಡಾಂಬರ್ ಹಾಗೂ ಸಿ ಸಿ ರಸ್ತೆಗಳನ್ನು ಅಗೆದು ಗುಂಡಿಗಳನ್ನು ಮಾಡಿ ದುರಸ್ಥಿ ಮಾಡದೆ ಮಣ್ಣು ಮುಚ್ಚಿ ಹೋಗುತ್ತಾರೆ . ಯಾವುದೇ ರಸ್ತೆ ಅಗೆಯುವಾಗ ಸಂಬಂಧ ಪಟ್ಟ ಇಕಾಖೆಯ ಪರವಾನಿಗೆ ಹಾಗೂ ಸ್ಥಳೀಯ ಸಂಸ್ಥೆಗಳ ಗಮನಹರಿಸದೆ ಎಲ್ಲಾ ನಿಯಮಗಳನ್ನು ಗಾಳಿ ತೂರಿ ಸಾರ್ವಜನಿಕ ತೆರಿಯಲ್ಲಿ ನಿರ್ಮಿಸಿದ ರಸ್ತೆಗಳನ್ನು ಅಗೆಯುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತಹವರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.
0 Comments