ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಎಲ್ಲೆಂದರೆಲ್ಲಿ ತ್ಯಾಜ್ಯವನ್ನು ಹಾಕುವುದನ್ನು ತಡೆಗಟ್ಟಲು ನಗರಸಭೆ ಸ್ಟೈನ್‌ಲೆಸ್ ಸ್ಟೀಲ್ ಡಸ್ಟ್ಬಿನ್‌ಗಳ ಅಳವಡಿಕೆ

by | 13/03/23 | ಜನಧ್ವನಿ


ಚಳ್ಳಕೆರೆ ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಆಯ್ದ ಪ್ರಮುಖ ಸ್ಥಳಗಲ್ಲಿ ಹಣ ಕಾಸು ಯೋಜನೆಯಡಿಯಲ್ಲಿ ಸುಮಾರು 65ಸೈನ್ ಲೆಸ್ ಸ್ಟೀಲ್ ಟ್ವಿನ್ ಲಿಟರ್‌ಬಿನ್‌ಗಳ (ಕಸದ ಬುಟ್ಟಿಗಳು) ನಗರಸಭೆ ಅಳವಡಿಸಿರುವುದು.
ಚಳ್ಳಕೆರೆ ಜನಧ್ವನಿ ವಾರ್ತೆ ಮಾ.13.
ಮನೆಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸುತ್ತಿರುವ ನಗರಸಭೆ ಇದೀಗ ರಸ್ತೆಗಳ ಸ್ವಚ್ಛತೆಗಾಗಿ ನಗರದ ಆಯ್ದ ಸ್ಥಳಗಳಲ್ಲಿ ಸೈನ್ ಲೆಸ್ ಸ್ಟೀಲ್ ಟ್ವಿನ್ ಲಿಟರ್‌ಬಿನ್‌ಗಳ (ಕಸದ ಬುಟ್ಟಿಗಳು) ಅಳವಡಿಕೆಗೆ ಮುಂದಾಗಿದೆ.
ಹೌದು ಚಳ್ಳಕೆರೆ ನಗರಸಭೆ ವ್ಯಾಪ್ತಿ ದಿನದಿಂದ ದಿನಕ್ಕೆ ತನ್ನ ವಿಸ್ತೀಣವನ್ನು ಹೆಚ್ಚಿಸಿಕೊಳ್ಳುತ್ತಿದ್ದು ದಿನಕ್ಕೆ ಸುಮಾರು ಟನ್ ಲೆಕ್ಕದಲ್ಲಿ ಪ್ರತಿ ನಿತ್ಯ ಕಸದ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು ಜನ ಸಂಖ್ಯೆ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ ಪೌರಕಾರ್ಮಿರ ಕೊರತೆಯ ನಡುವೆಯೂ ದಿನ ನಿತ್ಯ ನಗರದ ಮುಖ್ಯ ರಸ್ತೆ, ತರಕಾರಿ ಮಾರುಟ್ಟೆ, ಸಂತೆ ಮೈದಾನ ಸೇರಿದಂತೆ ವಿವಿಧ ವಾರ್ಡ್ಗಳಲ್ಲಿನ ಕಸವನ್ನು ಎತ್ತುವಳಿಗೆ ಮಾಡಲು ನಗರಸಭೆ ಅಧ್ಯಕ್ಷೆ ಉಪಾಧ್ಯಕ್ಷೆ , ಆರೋಗ್ಯಾಧಿಕಾರಿಗಳು, ಸಿಬ್ಬಂದಿಗಳು ಸಿಟಿ ರೌಂಡ್ ಮಾಡುತ್ತಿದ್ದಾರೆ.
ನಗರದ ಸಾರ್ವಜನಿಕ ಆಯ್ದ ಪ್ರಮುಖ ಸ್ಥಳಗಲ್ಲಿ ಹಣ ಕಾಸು ಯೋಜನೆಯಡಿಯಲ್ಲಿ ಸುಮಾರು ೬೫ ಸೈನ್ ಲೆಸ್ ಸ್ಟೀಲ್ ಟ್ವಿನ್ ಲಿಟರ್‌ಬಿನ್‌ಗಳ (ಕಸದ ಬುಟ್ಟಿಗಳು) ಅಳವಡಿಕೆ ಮಾಡಲಾಗಿದ್ದು ಸಾರ್ವಜನಿಕರಮ ಅಂಗಡಿ ಮುಂಗಟ್ಟುಗಳ ಮಾಲೀಕರು ಕಡ್ಡಾಯವಾಗಿ ನಗರಸಭೆಯ ಕಸದ ವಾಹನಗಳಿಗೆ ಅಂಗಡಿಗಳ ತ್ಯಾಜ್ಯ, ಕಸವನ್ನು ನೀಡುವಂತೆ ನಗರಸಭೆ ಜಾಗೃತಿ ಮೂಡಿಸಲಾಗುತ್ತಿದೆ.

ಪುಟ್ಟ ಕಂದಮ್ಮ ಒಂದು ಮನೆಯಲ್ಲಿನ ಕಸವನ್ನು ಸಂಗ್ರಹಿಸಿ ಕಸದ ವಾಹನ ಬಂದಾಗ ಕಸದೊಂದಿಗೆ ಕಾಯುತ್ತಿರುವುದು.

ನಗರಸಭೆಇಷ್ಟೆಯಲ್ಲಿ ಅಳವಡಿ ಜಾಗೃತಿ ಮೂಡಿಸಿದರೂ ಸಹ ಬೀಊದಿ ಬದಿ ವ್ಯಾಪಾರಿಗಳು ತ್ಯಾಜ್ಯವನ್ನು ರಸ್ತೆ ಹಾಗೂ ಚರಮಡಿಯಲ್ಲಿ ಕಸ, ಘನತ್ಯಾಜ್ಯ ಹಾಕುವುದು, ಸಾರ್ವಜನಿಕರು ಓಡಾಡುವಾಗ ತಿಂಡಿ ತಿನಿಸುಗಳ ತ್ಯಾಜ್ಯ, ಕವರ್‌ಗಳನ್ನು ರಸ್ತೆಗಳಲ್ಲೇ ಬಿಸಾಡುತ್ತಿರುವುದರಿಂದ ರಸ್ತೆ ಬದಿಯಲ್ಲಿ
ಕಸದ ರಾಶಿ ಸೃಷ್ಟಿಯಾಗುತ್ತಿದೆ. ಹೀಗಾಗಿ ಪಾದಚಾರಿಗಳು, ದಾರಿಹೋಕರು ತಿಂಡಿ ತಿನಿಸುಗಳ ತ್ಯಾಜ್ಯ, ಕವರ್‌ಗಳನ್ನು ರಸ್ತೆ ಬದಿಯಲ್ಲಿ ಬಿಸಾಡುವ ಬದಲು ಡಸ್ಟ್ಬಿನ್‌ಗಳಿಗೆ ಹಾಕಲೆಂಬ ಕಾರಣಕ್ಕೆ ಜೋಡಿ ಲಿಟರ್ ಬಿನ್‌ಗಳನ್ನು ಅಳವಡಿಸಲಾಗಿದೆ ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಂಡು ನಗರದ ಸ್ವಚ್ಚತೆಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ನಗರಸಭೆ ಪರಿಸರ ಇಂಜಿನಿಯರ್ ನರೇಂದ್ರಬಾಬು ಮಾತನಾಡಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಎಲ್ಲೆಂದರೆಲ್ಲಿ ತ್ಯಾಜ್ಯವನ್ನು ಹಾಕುವುದನ್ನು ತಡೆಗಟ್ಟುವ ನಿಟ್ಟಿಯಲ್ಲಿ ಸ್ಟೈನ್‌ಲೆಸ್ ಸ್ಟೀಲ್ ಡಸ್ಟ್ಬಿನ್‌ಗಳನ್ನು ಗಳನ್ನು ಪೈಪ್‌ಗಳನ್ನು ಭೂಮಿಯಲ್ಲಿ ನೆಟ್ಟು ಆಗಿರುವುದರಿಂದ ಮಳೆ, ಗಾಳಿ, ಬಿಸಿಲಿನಿಂದ ಹಾಳಾಗುವ ಪ್ರಮಾಣ ಕಡಿಮೆ ಎರಡು ಒಂದು ಸಥಳದಲ್ಲಿ ಎರಡು ಡಸ್ಟ್ ಬಿನ್‌ಗಳನ್ನು ಅಳಡಿಸಿರುವುದರಿಂದ ಒಂದನ್ನು ಹಸಿ ಕಸ ಮತ್ತೊಂದನ್ನು ಒಣ ಕಸ ಸಂಗ್ರಹಕ್ಕೆ ಮೀಸಲಿಡಲಾಗಿದೆ. ಪ್ರತಿ ಲಿಟರ್ ಬಿನ್‌ಗಳು ೧೦೦ ಲೀಟರ್ ಸಾಮರ್ಥ್ಯ ಹೊಂದಿವೆ ಇದನ್ನು ನಗರಸಭೆ ಪೌರಕಾರ್ಮಿಕರು ಕಸ ಸಂಗ್ರಹ ವಾಹನದಲ್ಲಿ ಪ್ರತಿನಿತ್ಯ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.


ಆರೋಗ್ಯಾಧಿಕಾರಿ ಗೀತಾ ಮಾತನಾಡಿ ಪ್ರತಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ರಸ್ತೆ ಬದಿಯಲ್ಲಿನ ಕಸ ಸಂಗ್ರಹಣೆ ಮಾಡಲಾಗುವುದು ರಸ್ತೆ ಬದಿಯ ಎಲ್ಲೆಂದರೆಲ್ಲಿ ಸಕವನ್ನು ಹಾಕಿ ನಗರದ ಪರಿಸವನ್ನು ಹಾಳು ಮಾಡುತ್ತಿದ್ದರು ವರ್ತಕರಿಗೆ ಕಸವನ್ನ ರಸ್ತೆ ಹಾಗೂ ಚರಮಡಿಗಳಲ್ಲಿ ಹಾಕ ಬಾರದು ಎಂದು ಸೂಚನೆ ನೀಡಿದ ಮೇರೆಗೆ ಕಸವನ್ನು ಸಂಗ್ರಹಣೆ ಮಾಡಿ ವಾಹನ ಬಂದಾಗ ಕಸವನ್ನು ಹಾಕುತ್ತಾರೆ ಈಗ ಜನರಲ್ಲಿಯೂ ಸಹ ಜಾಗೃತಿ ಮೂಡಿದೆ ಎಂದು ತಿಳಿಸಿದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page