ಹೊಸದುರ್ಗ, ನವೆಂಬರ್ 30 : ಹೊಸದುರ್ಗ ತಾಲ್ಲೂಕಿನ ನೆಲ್ಲಿಕಟ್ಟೆ ಗ್ರಾಮದ ನಿವಾಸಿ ತಿಪ್ಪೇಸ್ವಾಮಿ ತಂದೆ
ತಿಮ್ಮಪ್ಪ ರವರು ದಿನಾಂಕ: 30.11.2023 ರಂದು ಬೆಳಗಿನ ಜಾವ 04.02 ಎ.ಎಂ ರ ಸಮಯದಲ್ಲಿ ತನ್ನ
ಮೋಟಾರ್ ಸೈಕಲ್ ನಂ: ಕೆಎ-16 ಈಆರ್-3923 ನೇ ಚಾಲಕ ತಿಪ್ಪೇಸ್ವಾಮಿ ತಂದೆ ತಿಮ್ಮಪ್ಪ ರವರು ಜ್ಯೋತಿ
ಸುಮಾರು 40 ವರ್ಷ ವಯಸ್ಸು, ವಿನಾಯಕ ಬಡಾವಣೆ ಹೊಸದುರ್ಗ ತಾಲ್ಲೂಕು ಇವರನ್ನು ಬೈಕಿನ
ಹಿಂಬದಿಯಲ್ಲಿ ಕೂರಿಸಿಕೊಂಡು ಹೊಸದುರ್ಗ ಹುಳಿಯಾರು ಟಾರ್ ರಸ್ತೆಯಲ್ಲಿ ಹಾಗಲಕೆರೆ ಹ್ಯಾಂಡ್ ಪೋಸ್ಟ್
ಹತ್ತಿರ ಹುಳಿಯಾರು ಗ್ರಾಮಕ್ಕೆ ಹೋಗುತ್ತಿರುವಾಗ ಮೋಟಾರ್ ಸೈಕಲ್ ಚಾಲಕ ತಿಪ್ಪೇಸ್ವಾಮಿ ಯವರು ತನ್ನ
ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದ
ರಸ್ತೆಯಲ್ಲಿ ಯಾವುದೋ ಒಂದು ಎಮ್ಮೆ ಅಡ್ಡ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಏಕಾಏಕಿ ಬ್ರೇಕ್ ಹಾಕಿದರ
ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಜ್ಯೋತಿಯು ರಸ್ತೆಯ ಕೆಳಗೆ ಬಿದ್ದು, ಅವರ ತಲೆಗೆ ಬಲವಾದ ಪೆಟ್ಟು ಬಿದ್ದು
ರಕ್ತಗಾಯಗಳಾಗಿರುತ್ತದೆ. ಯಾವುದೋ ಒಂದು ವಾಹನದಲ್ಲಿ ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ
ದಾಖಲಿಸಿದಾಗ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ
ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ವೈದ್ಯರು ಪರೀಕ್ಷಿಸಿ ನೋಡಲಾಗಿ ಜ್ಯೋತಿ (40) ರವರು
ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ. ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಕೇಸು
ದಾಖಲಾಗಿರುತ್ತದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments