ಚಿತ್ರದುರ್ಗ: ರಕ್ತದಾನ ಮಹಾದಾನ,ಇದರಿಂದ ಒಂದು ಜೀವ ಉಳಿಯಲು ಸಾಧ್ಯ ರಕ್ತದಾನದಿಂದ ಯಾವುದೇ ತೊಂದರೆ ಇಲ್ಲ ಆರೋಗ್ಯ ಚೇತರಿಕೆಗೆ ಸಾಧ್ಯ ಯುವ ಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕೆಂದು ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪ್ರೊ:ಎಸ್.ಸಂದೀಪ್ ಕರೆ ನೀಡಿದರು. ನಗರದ ಕುಂಚಿಗನಾಳ್ ಗ್ರಾಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ(ರಿ) ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು ಚಿತ್ರದುರ್ಗ ಹಾಗೂ ಯುವ ರೆಡ್ಕ್ರಾಸ್ ಘಟಕದ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ವಿಶೇಷ ಶಿಬಿರದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದ ಅವರು ಆರೋಗ್ಯವಂತ ಯುವಕರು ಪ್ರತಿ ಮೂರು ತಿಂಗಳೊಗೊಮ್ಮೆ ರಕ್ತದಾನ ಮಾಡಬಹುದು ಇದರಿಂದ ಆರೋಗ್ಯ ಮೇಲೆ ಯಾವುದೇ ತೊಂದರೆಯಾಗದು ಹೊಸ ಚೈತನ್ಯ ಹೊಂದಲು ಸಾಧ್ಯ ಯುವಕರ ರಕ್ತದಲ್ಲಿ ಹೆಚ್ಚು ಪೌಷ್ಠಿಕತೆ ಇರುವುದರಿಂದ ಇದನ್ನು ಹೆಚ್ಚು ಕಾಲ ಶೇಖರಿಸಿಟ್ಟು ಅಗತ್ಯತೆಗೆ ಅನುಗುಣವಾಗಿ ಬಳಸುವುದರಿಂದ ರಕ್ತದ ಅವಶ್ಯಕತೆ ಇರುವವರಿಗೆ ಸಹಾಯ ಮಾಡಿದಂತಾಗುತ್ತದೆ ಯುವಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಮುಖ ಉದ್ದೇಶವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ:ಧನಂಜಯ ಆರ್.ಜಿ.ಸಹಾಯಕ ಪ್ರಾಧ್ಯಾಪಕರು ಮತ್ತು ರೆಡ್ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಗಳು ಮಾತನಾಡಿ ಮನುಷ್ಯನಿಗೆ ಅಪಘಾತ ಇಲ್ಲವೇ ಅನಾರೋಗ್ಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಆರೋಗ್ಯವಂತ ವಯಸ್ಕಾರು ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಉಳಿಸಿದ ಪೂಣ್ಯ ಕಟ್ಟಿಕೊಳ್ಳಬೇಕು ರಕ್ತದಾನ ಮಾಡಿ ಜೀವ ಉಳಿಸಿ ಹಾಗೂ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ:ಡಿ.ಆರ್.ರಂಗಸ್ವಾಮಿ ಪ್ರಾಂಶುಪಾಲರು, ಮಹಾರಾಜ ಮದಕರಿನಾಯಕ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜು ಚಿತ್ರದುರ್ಗ ಇವರು ವಹಿಸಿದ್ದರು ಕಾರ್ಯಕ್ರಮದಲ್ಲಿ ಕುಂಚಿಗನಾಳ್ ಗಾ.ಪಂ.ಸದಸ್ಯರಾದ ಶ್ರೀಮತಿ ಚೈತ್ರ ಲಕ್ಷೀಕಾಂತ್ ಪ್ರೊ: ಶ್ರೀಮತಿ ಎನ್.ಗಂಗಮ್ಮ, ಪ್ರೊ:ಎನ್.ಶ್ರೀನಿವಾಸ ಶಿಬಿರ ಸಂಪರ್ಕಾಧಿಕಾರಿಗಳಾದ ಡಾ: ಶ್ರೀಮತಿ ಹೇಮಲತಾ ಪ್ರೊ:ಲಕ್ಷೀಕಾಂತ್ ಎಸ್ ಜಿಲ್ಲಾ ಆರೋಗಾಧಿಕಾರಿಗಳು ಹಾಗೂ ಕುಂಚಿಗನಾಳ್ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಮುಖೋಪಾಧ್ಯಯರಾದ ಶ್ರೀಮತಿ ವೀರಮಂಜುಳದೇವಿ ಹಾಗೂ ಗ್ರಾಮಸ್ಥರು ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ಗ್ರಾಮದ ಯುವಕರು ರಕ್ತದಾನ ಶಿಬಿರದಲ್ಲಿ 15 ಯುವಕರು ಜನರು ರಕ್ತದಾನ ಮಾಡಿದರು. ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಜನಧ್ವನಿ ಡಿಜಿಟಲ್ ಮೀಡಿಯಾ ಗೆ ಶುಭ ಕೋರಿದ ಸ್ವಾಮೀಜಿ.
. ಆತ್ಮೀಯ ಗೋಪಣ್ಣನವರಿಗೆ ಭಗವಂತನ ಕೃಪ ಆಶೀರ್ವಾದಗಳು . ತಾವು ಅತ್ಯಂತ ಅರ್ಥಗರ್ಭಿತವಾದ ಹಾಗೂ ಸಮಯೋಚಿತವಾದ ವರದಿಯನ್ನು ತಮ್ಮ ಜನ ಧ್ವನಿ ಮೂಲಕ ಜನರಿಗೆ ತಲುಪಿಸಿರುವಿರಿ .ಈ ನಿಮ್ಮ ಕಾರ್ಯಕ್ಕೆ ನಮ್ಮ ಕಡೆಯಿಂದ ಅಭಿನಂದನೆಗಳು
ಕರ್ನಾಟಕ ಭೀಮಸೇನೆಯ ರಾಜ್ಯಾಧ್ಯಕ್ಷ ಶಂಕರ್ ರಾಮ ಲಿಂಗಯ್ಯನವರ ಆದೇಶದ ಮೇರೆಗೆ ಜಿಲ್ಲಾಪದಾಧಿಕಾರಿಗಳ ಹಾಗೂ ಕಾರ್ಯಕಾರಣಿ ಸಭೆಯ ಉದ್ಘಾಟನೆ ಕಾರ್ಯಕ್ರಮ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ನಾಟಕ ಭೀಮ ಸೇನೆ ಸಂಘಟನೆಯನ್ನು ಬಲಪಡಿಸುವ ಮೂಲಕ ಬಡವರಿಗೆ, ನೊಂದವರಿಗೆ, ಶೋಷಿತರಿಗೆ, ಸಮಾಜದ...
0 Comments