ಚಳ್ಳಕೆರೆ ಚಳ್ಳಕೆರೆ ಏ.8 ಅಗತ್ಯ ವಸ್ತುಗಳ ಬೆಳೆ ಏರಿಕೆ , ಬಿಸಿಲಿನ ತಾಪ ಹಾಗೂ ಬರಗಾಲದ ನಡುವೆಯೂ ರಂಜಾನ್ ಹಾಗೂ ಯುಗಾದಿ ಹಬ್ಬದ ಖರೀದಿ ಭರಾಟೆ ಬಲು ಜೋರು ಎಲ್ಲೆಡೆ ಜನ ಹಾಗೂ ವಾಹನ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ ವಾಹನ ಸವಾರರು ಹೈರಾಣು.
ಮುಂಗಾರು ,ಹಿಂಗಾರು ಬೆಳೆ ವೈಪಲ್ಯ, ಹಾಕಿದ ಬಂಡವಳಾ ಕೈಸೇರಿಲ್ಲ ಯುಗಾದಿ ಹಬ್ಬ ಬಂತು ಬಳಿ ಹಣವಿಲ್ಲ ಹೇಗಾಪ್ಪ ಹಬ್ಬ ಮಾಡುವುದು ಎಂಬ ಚಿಂತೆಯಲ್ಲಿರುವಾಗಲಿ ರೈತರ ಖಾತೆ ಬಂತು ಬೆಳೆ ವಿಮೆ ಹಣ ರೈತರು ಪುಲ್ ಖುಷಿಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಲೆಕ್ಕಿಸದೆ ಹೊಸ ಬಟ್ಟೆ, ಬೆಲ್ಲ, ಭೇಟಿ , ಹೂವು ಹಣ್ಣ, ತರಕಾರಿ ಖರೀದಿ ಮಾಡಲು ಮುಂದಾಗಿದ್ದಾರೆ.
ಒಂದು ನಿಂಬೆ ಹಣ್ಣಿನ ಬೆಲೆ 10 ರೂ, ಒಂದು ಮಾರು ಹೂವು 100 ರಿಂದ 150 ರೂ, ತರಕಾರು ಬೆಲೆಯೂ ದುಬಾರಿಯಾದರೂ ನಗರದ ನೆಹರು ವೃತ್ತ, ಪಾವಗಡ ರಸ್ತೆ,ಇಂದಿರಾ ದಿನವಹಿ ತರಕಾರಿ ಮಾರುಕಟ್ಟೆ,ಸಂತೆ ಮೈದಾನದಲ್ಲಿ ಜನರು ಹಬ್ಬಕ್ಕೆ ಬೇಕಾದಂತಹ ಅಗತ್ಯ ವಸ್ತುಗಳ ಖರೀದಿಯಲ್ಲಿ ಮಗ್ನರಾಗಿ ಬೆಲೆ ಏರಿಕೆ ಲೆಕ್ಕಿಸದೆ ವಸ್ತುಗಳನ್ನು ಖರೀಸಿದರು.ಜವಳಿ ಅಂಗಡಿಗಳಲ್ಲಿ ಯುವಕ ಯುವತಿಯರು ಉತ್ಸಾಹದಿಂದ ಹೊಸ ಉಡುಪುಗಳನ್ನು ಕೊಳ್ಳಲು ಮುಗಿಬಿದ್ದರು.ಆದರೆ ವ್ಯಾಪಾರದಲ್ಲಿ ಯಾವುದೇ ಲಾಭ ಕಂಡು ಬರುತ್ತಿಲ್ಲ. ಎಲ್ಲಾ ವಸ್ತುಗಳ ಬೆಲೆ ಏರಿಕೆ ದುಪ್ಪಟ್ಟು. ಹೀಗಾಗಿ ಭರ್ಜರಿ ವ್ಯಾಪಾರವೂ, ನಿರೀಕ್ಷಿತ ಲಾಭವೂ ಇಲ್ಲವೆಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಹಬ್ಬದ ಹಿನ್ನೆಲೆಯಲ್ಲಿ ಹಳದಿ ಸೇವಂತಿಗೆ, ಬಣ್ಣದ ಸೇವಂತಿಗೆ, ಮಲ್ಲಿಗೆ ಹೂವು, ಕಾಕಡ ಹೂವು, ಕನಕಾಂಬರ ಬೆಲೆ200ರ ಗಡಿದಾಟಿದೆ ಬೇವು ಒಂದು ಕಟ್ಟಿಗೆ 50 ರೂ ಆಗಿದೆ. ಮಾವು, ಸೊಪ್ಪು ಬೆಲೆ ಹೆಚ್ಚಾಗಿದೆ. ಸಾರ್ವಜನಿಕರು ವಿಧಿ ಇಲ್ಲದೆ ಅಗತ್ಯವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ.
ಮಹಿಳೆಯರಿಗೆ ರೈತರಿಗೆ ಬಂಪರ್: ತಾಲೂಕಿನಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಬೆಳೆ ವಿಮೆ ಪರಿಹಾರ ನೇರವಾಗಿ ರೈತರ ಖಾತೆಗೆ ಜಮೆಯಾಗಿದ್ದು ಇತ್ತ ಮಹಿಳೆಯರಿಗೂ ಸಹ ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಹಣ ನಾಲ್ಕು ಸಾವಿರ ರೂಗಳು ಜನೆಯಾಗಿರುವುದರಿಂದ ರೈತರ ಹಾಗೂ ಮಹಿಳೆಯರ ಮೊಗದಲ್ಲಿ ಮಂದಹಾಸ ಮೂಡಿದ್ದು ಬೆಳೆ ವಿಮೆ ಹಾಗೂ ಗೃಹಲಕ್ಷ್ಮಿ ಹಣ ಸರಕಾರ ವಿಳಂಬ ಮಾಡಿದ್ದರೂ ಸಹ ಹಬ್ಬದ ಸಮಯಕ್ಕೆ ಸರಿಯಾಗಿ ಹಣ ನೀಡಿರುವುದು ಯುಗಾದಿ ಹಾಗೂ ರಂಜಾನ್ ಹಬ್ಬ ಸಗಡಗರ ಸಂಭ್ರಮದಿಂದ ಆಚರಣೆಗೆ ಬೆಲೆ ಏರಿಕೆ ಹಾಗೂ ಬಿಸಿಲು ಬರಗಾಲ ಲೆಕ್ಕಿಸಲ ಹಬ್ಬದ ಅಗತ್ಯ ವಸ್ತುಗಳ ಖರೀದಯಲ್ಲಿ ಮುಗಿದ್ದಿರುವ ದೃಶ್ಯ ಕಂಡು ಬಂತು.
ಬಂದಿದ್ದು ಹಬ್ಬದ ಖರೀದಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ತುಸು ಹೆಚ್ಚು ಕಂಡುಬಂತು.
0 Comments