ಚಳ್ಳಕೆರೆ: ದೇಶದಲ್ಲಿ ಪ್ರತಿನಿತ್ಯ ಹಲವು ರೀತಿಯ ಅಪಘಾತಗಳು ಸಂಭವಿಸಿ ರಕ್ತದ ಕೊರತೆಯಿಂದ ಅನೇಕ ಸಾವು ನೋವುಗಳು ಸಂಭವಿಸುತ್ತಿವೆ ಇಂತಹ ಘಟನೆಗಳು ನಮ್ಮ ಮನೆಗಳಲ್ಲಿ ಅಥವಾ ಸಂಬಂಧಿಕರಲ್ಲಿ ಸಂಭವಿಸಿದಾಗ ರಕ್ತದ ಮಹತ್ವ ಎಂತಹದು ಎಂದು ಅರಿವಿಗೆ ಬರುತ್ತದೆ ಎಂದು ಬೊಮ್ ಬೊಮ್ ಸಾನಿ ಆಧ್ಯಾತ್ಮಿಕ ಟ್ರಸ್ಟ್ ನ ಅಧ್ಯಕ್ಷ ಡಾ. ಸೈಯದ್ ಜುನೇದ್ ಖಾದರಿ ಅಭಿಪ್ರಾಯ ಪಟ್ಟರು.
ತಾಲೂಕಿನ ಡಿ ಸುಧಾಕರ್ ನಗರದ ಆಶ್ರಮದಲ್ಲಿ ಸೈಯದ್ ಹಯಾತ್ ಭಾಷಾ ಖಾದರಿ ರವರ 11ನೇ ಉರುಸ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮುಸ್ಲಿಂ ಸಮುದಾಯ ಹಬ್ಬ ಹರಿದಿನಗಳಲ್ಲಿ ದಾನ ಮಾಡುವುದು ಶ್ರೇಷ್ಠವೆಂದು ಭಾವಿಸಿದೆ ಹಾಗೆಯೇ ರಕ್ತದಾನ ಮಾಡುವುದು ಸಹ ದಾನಗಳಲ್ಲಿ ಶ್ರೇಷ್ಠದಾನವಾಗಿದೆ ಎಲ್ಲಾ ಜಾತಿ ಮತ ಧರ್ಮದ ಜನರಲ್ಲೂ ಸಹ ಒಂದೇ ರಕ್ತ ಹರಿಯುತ್ತಿದೆ ಒಬ್ಬ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಡುವ ಸಂದರ್ಭದಲ್ಲಿ ಜಾತಿ ಮತ ನೋಡದೆ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ ಯುವ ಜನತೆ ರಕ್ತದಾನ ಮಾಡುವುದರಿಂದ ಅಪಾಯ ಉಂಟಾಗುತ್ತದೆ ಎಂಬ ಮನೋಭಾವದಿಂದ ಹೊರಬಂದು ಪ್ರತಿ ಆರು ತಿಂಗಳಿಗೆ ಒಮ್ಮೆಯಾದರೂ ರಕ್ತದಾನ ಮಾಡಿದರೆ, ದೇಹವು ಉತ್ತಮ ಸ್ಥಿತಿಯಲ್ಲಿ ರೂಪುಗೊಳ್ಳುವುದಲ್ಲದೆ ಸಾಮಾಜಿಕ ಕಾರ್ಯ ಮಾಡಿದ ಸಾರ್ಥಕತೆ ಮೂಡುತ್ತದೆ ಗ್ರಾಮೀಣ ಭಾಗದ ಅನಕ್ಷರಸ್ಥರಲ್ಲಿ ರಕ್ತದಾನದ ಮಹತ್ವವನ್ನು ತಿಳಿಸುವ ಮೂಲಕ ಇಂತಹ ಕಾರ್ಯಕ್ರಮಗಳು ಹೆಚ್ಚು ನೆರವೇರಲು ಉತ್ತೇಜಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಯುವಕರಾದ ಅಮ್ರಾಜ್, ನೂರ್ ಅಹಮದ್ ನಯಾಜ್ ಅಹಮದ್ ರಿಯಾಜ್ ಅಹಮದ್ ಸಮೀರ್ ಬಾಷಾ ಯೂನಿಸ್ ಇಮ್ರಾನ್ ಮುಬಾರಕ್ ಜಬಿವುಲ್ಲಾ ಹನೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments