ಹಿರಿಯೂರು :
ಉತ್ತರಪ್ರದೇಶ ರಾಜ್ಯದಿಂದ ಹಿರಿಯೂರು ನಗರಕ್ಕೆ ಬಂದು ಅನಧಿಕೃತವಾಗಿ ಸೆಲೂನ್ ಅಂಗಡಿ ಪ್ರಾರಂಭಿಸುತ್ತಿರುವ ವ್ಯಕ್ತಿಗಳಿಗೆ ಅಂಗಡಿ ಪ್ರಾರಂಭಿಸಲು ಪರವಾನಗಿ ನೀಡಬಾರದು ಎಂಬುದಾಗಿ ಸವಿತಾ ಸಮಾಜದ ಮುಖಂಡರು ನಗರಸಭೆಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಇತ್ತೀಚಿಗೆ ಯುಪಿಯಿಂದ ಬಂದ ಜನರು ನಗರದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದು ಸ್ಥಳೀಯ ಜನರ ಉದ್ಯೋಗಗಳನ್ನು ಕಸಿದುಕೊಂಡು ಸ್ಥಳೀಯರಿಗೆ ಜೀವನ ನಿರ್ವಹಣೆಗೆ ತೊಂದರೆ ಮಾಡುತ್ತಿದ್ದಾರೆ.ಏನಾದರೂ ಹೇಳಲು ಹೋದರೆ ದೌರ್ಜನ್ಯ ನಡೆಸಲು ಬರುತ್ತಾರೆ.
ನಮ್ಮ ಸವಿತಾ ಸಮಾಜದ ಬಂಧುಗಳು ಕ್ಷೌರಿಕಾ ಅಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಉತ್ತರ ಪ್ರದೇಶದಿಂದ ಬಂದ ಸವಿತಾ ಸಮಾಜದವರೇ ಅಲ್ಲದ ಜನರು ಸಲೂನ್ ಗಳನ್ನು ಅನಧಿಕೃತವಾಗಿ ಪ್ರಾರಂಭಿಸಿ ಸ್ಥಳೀಯ ಸವಿತಾ ಸಮಾಜದ ಬಂಧುಗಳಿಗೆ ತೊಂದರೆ ಮಾಡುತ್ತಿದ್ದಾರೆ.
ಇವರು ಉತ್ತರಪ್ರದೇಶದಿಂದ ಬಂದವರಾಗಿರುವುದರಿಂದ ಈ ಪ್ರದೇಶಕ್ಕೆ ಅಪರಿಚಿತರಾಗಿದ್ದು, ಅಪರಾಧ ಹಿನ್ನೆಲೆಯನ್ನು ಉಳ್ಳವರಾಗಿದ್ದು, ಸಮಾಜಘಾತಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವುದರಿಂದ ನಗರದಲ್ಲಿ ಇವರಿಂದ ಏನಾದರೂ ಅನಾಹುತಗಳು ದೊಂಬಿ ಗಲಾಟೆಗಳು ನಡೆಯುವ ಸಂಭವವಿರುತ್ತದೆ.
ಪ್ರಯುಕ್ತ ಇವರ ಅನಧಿಕೃತ ಅಂಗಡಿಗಳಿಗೆ ನಗರಸಭೆ ವತಿಯಿಂದ ಪರವಾನಗಿ ನೀಡಬಾರದೆಂದು ಮನವಿ ಮಾಡಿಕೊಳ್ಳುತ್ತೇವೆ. ನಮ್ಮ ಸಮಾಜದ ಜನರ ಬವಣೆಯನ್ನು ತಪ್ಪಿಸಲು ಹಾಗೂ ನಗರದಲ್ಲಿ ಅನಗತ್ಯವಾಗಿ ಇವರಿಂದ ಆಗುತ್ತಿರುವ ದೊಂಬಿ ಗಲಾಟೆಗಳನ್ನು ತಪ್ಪಿಸುವುದರ ಮೂಲಕ ನಗರದ ಶಾಂತಿಯನ್ನು ಕಾಪಾಡಲು ಕೋರುತ್ತೇವೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments