ಚಳ್ಳಕೆರೆ ಏ11 ಯುಗಾದಿ ಹಬ್ಬ ಮುಗಿಸಿಕೊಂಡು ಮತ್ತೆ ಬೆಂಗಳೂರಿಗೆ ತೆರಳಲು ಸಾರಿಗೆ ಬಸ್ಸುಗಳ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಹೌದು ಇದು ಚಳ್ಳಕೆರೆ ನಗರದ ಸಾರಿಗೆ ಬಸ್ಸು ನಿಲ್ದಾಣದಲ್ಲಿ ಬೆಂಗಳೂರಿಗೆ ವಿವಿಧ ಹುದ್ಯೋಗಕ್ಕೆ ತೆರಳಲು ಯುಗಾದಿ ಹಬ್ಬಕ್ಕೆಂದ ಬಂದವರಿಗೆ ಸಾರಿಗೆ ಬಸ್ಸು ಗಳ ವ್ಯವಸ್ಥೆಯಿಲ್ಲದೆ ಇತ್ತ ಖಾಸಗಿ ಬಸ್ಸುಗಳಿಲ್ಲದೆ ಇವತ್ತು ಬೆಂಗಳೂರಿಗೆ ಹೋಗಿ ರಾತ್ರಿ ಪಾಳಿ ಅಥವಾ ಮುಂಜಾನೆಯೇ ಕರ್ತವ್ಯಕ್ಕೆ ಹಾಜರಿಯಾಗದಿದ್ದರೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ನಗರ ಸೇರಿದಂತೆ ವಿವಿಧ ಗ್ರಾಮಗಳಿಗೆ ನೂರಾರು ಸಂಖ್ಯಡಯಲ್ಲಿ ಯುಗಾದಿ ಹಬ್ಬಕ್ಕೆ ಕರೆತರಲು ಪ್ರತಿ ವರ್ಷ ಸಾರಿಗೆ ಇಲಾಖೆ ವಿಶೇಷ ಬಸ್ ವ್ಯವಸ್ಥೆ ಮಾಡುತ್ತಿದ್ದರು ಈ. ಬಾರಿ ವ್ಯವಸ್ಥೆ ಯಿಲ್ಲದೆ ಇರುವ ಬೆರಳೆಣಿಕೆಯಷ್ಟು ಬಸ್ಸುಗಳಲ್ಲಿ ಕಾದು ಸುಸ್ತಾಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಬಸ್ಸಿನ ಸಿಬ್ಬಂದಿಗಳನ್ನು ಕೇಳಿದರೆ ಯುಗಾದಿ ಹಾಗೂ ರಂಜಾನ್ ಎರಡು ಹಬ್ಬಗಳು ಒಟ್ಟಿ ಬಂದಿರುವುದರಿಂದ ಚಾಲಕರು .ನಿರ್ವಾಹಕರು ಹಬ್ಬಕ್ಕೆ ರಜೆ ಹಾಕಿರುವುದರಿಂದ ಬಸ್ಸುಗಳನ್ನು ಓಡಿಸಲು ಸಿಬ್ಬಂದಿಯಿಲ್ಲದೆ ನಿಲ್ಲಿಸಲಾಗಿದೆ ಇರುವ ಕಡಿಮೆ ಬಸ್ಸುಗಳಲ್ಲೆ ಅರ್ಜೆಸ್ಟ್ ಮಾಡಿಕೊಂಡು ಹೋಗುವಂತೆ ಸಲಹೆ ನೀಡುತ್ತಾರೆ ಎಂದು ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಜನಧ್ವನಿಗೆ ಮಾಹಿತಿ ನೀಡಿದ್ದಾರೆ.
0 Comments