ಚಳ್ಳಕೆರೆ ಫೆ.19 ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ದೂರು , ಮಾಧ್ಯಗಳಲ್ಲಿ ಸುದ್ದಿ ಬಂದರೆ ಆಯಾ ಅಧಿಕಾರಳೇ ನೇರೆ ಹೊಣೆ ಗಾರರು ಎಂದು ಶಾಸಕ ಹಾಗೂ ಸಣ್ಣ ಕೈಗಾರಿಗಳ ಅಭಿವೃದ್ಧಿನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿದ್ದ ಟಾಸ್ಕ್ ಪರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈಗಾಗಲೆ ಸರಕಾರ ಬರಗಾಲ ಎಂದು ಘೋಷಣೆ ಮಾಡಿದ್ದು ಕುಡಿಯುವ ನೀರಿನ ನಿgರ್ವಹಣೆಗೆ ೨೫ ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗೃತ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಕುಡಿಯುವ ನೀರು ಸರಬರಾಜು ಎಇಇ ದಯಾನಂದ್ ಮಾತನಾಡಿ ಈಗಾಗಲೆ ಕೊರೆದ ೧೭೫ ಕೊಳವೆ ಬಾವಿಗಳ ಹಣ ಬಿಡುಗಡೆ ಮಾಡದೆ ಇರುವುದರಿಂದ ಯಾರೂ ಬೋರು ಕೊರೆಯಲು ಮುಂದಾಗುತ್ತಿಲ್ಲ. ಜಲಜೀವನ್ ಮಿಷನ್ ಯೋಜನೆ ಜಾರಿಯಲ್ಲಿರುವುದರಿಂದ ಹೊಸ ಬೋರು ಕೊರೆಯಲು ಅವಕಾಶ ವಿಲ್ಲದೆ ಈಗಾಗಲೆ ಚಳ್ಳಕೆರೆ ವಿಧಾನ ಸಭಾ ಕ್ಷತ್ರ ವ್ಯಾಪ್ತಿಯ ಕಸಬ ಹಾಗೂ ಪರಶುರಾಂಪುರ ಹೋಬಳಿಯಲ್ಲಿ ೨೫ ಹಳ್ಳಿಗಳನ್ನು ಅಂತರ್ಜಲ ಬತ್ತಿ ಹೋಗಿ ನೀರಿನ ಸಮಸ್ಯೆ ಇರುವ ಹಳ್ಳಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಬರಗಾಲದ ಹಿನ್ನೆಯಲ್ಲೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎಂದು ವಿಧಾನ ಸಭಾ ಕಲಾಪಕ್ಕೆ ಒಂದು ಗೈರಾಗಿ ಕ್ಷೇತ್ರದ ಜನರಿಗೆ ನೀರಿನ ಕೊರತೆ ನೀಗಿಸಲು ಅಗತ್ಯ ಕ್ರಮ ಕೈಗಳ್ಳಲು ಅಧಿಕಾರಿಗಳ ಸಭೆ ಕರೆದಿದ್ದು ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಉತ್ತರ ನೀಡದೆ ಜನರಿಗೆ ನೀರನ್ನು ಒದಗಿಸ ಬೇಕು, ಖಾಸಗಿ ಬೋರ್ ವೆಲ್, ಪಡೆದು ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ನೀಡ ಬೇಕು ಹಣ ಇದ್ದರೂ ಕೆಲವು ಕಾನೂನು ತೊಡಕುಗಳನ್ನು ಮುಂದಿಟ್ಟು ಜನರಿಗೆ ನೀರಿನ ಸಮಸ್ಯೆಯಾಗಬಾರದು ಎಂದು ತಿಳಿಸಿದರುಸ.
ಜೆಇ ತಿಪ್ಪೇಸ್ವಾಮಿ ಮಾತನಾಡಿ ರೈತರು ಕೊಳವೆ ಬಾವಿ ನೀರು ಕೊಡಲು ಮುಂದಾಗುತಿಲ್ಲ ಅಡಿಗೆ ಬೆಳೆ ಹಾಕಿರುವುದರಿಂದ ಅದಕ್ಕೆ ಸಾಕಾಗುತ್ತಿಲ್ಲ ಎಂದು ರೈತರು ನೀರು ಕೊಡುವುದಿಲ್ಲ ಎನ್ನುತ್ತಾರೆ ಎಂದು ಉತ್ತರಿಸಿದರು.
ತಾಪಂ ಇಒ ಹನುಮಂತಪ್ಪ, ಶಶಿಧರ್ ಮಾತನಾಡಿ ಗ್ರಾಮಪಂಚಾಯಿಗಳಲ್ಲಿ ಕುಡಿಯುವ ನೀರು ನೈರ್ಲಲ್ಯಕ್ಕೆ ಅನುದಾನದ ಕೊರತೆಯಿದೆ ಒಂದೇ ಕಂತು ಅನುದಾನ ಬಿಡುಗಡೆ ಮಾಡಿರುವುದರಿಂದ ರೀಬೋರು ಮಾಡಲು ಅನುದಾನದ ಕೊರತೆಯಿದೆ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಜನರು ಹಣ ಇದೆ ಇಲ್ಲ ಎಂದು ಕೇಳುವುದಿಲ್ಲ ಬಿಡಿಗಡೆಯಾಗಿರುವ ೨೫ ಲಕ್ಷ ಆದರೂ ನೀರು ಕೊಡಬೇಕು ಎಂದು ಕೇಳುತ್ತಾರೆ ಗ್ರಾಮೀಣ ಜನರ ಮಸ್ಯೆಗಳನ್ನು ಅರಿತು ಅಧಿಕಾರಿಗಳು ಕರ್ತವ್ಯ ನಿರ್ವಹಿಸ ಬೇಕು ಜನರಿಗೆ ನೀರಿನ ಸಮಸ್ಯೆ ಉಲ್ಬಣವಾಗದಂತೆ ಅಗತ್ಯ ಮುಂಜಾಗೃತೆ ವಹಿಸುವಂತೆ ಸೂಚನೆ ನೀಡಿದರು.
ಆಶ್ರಯ, ಸ್ಮಶಾನ, ಸೇರಿಂತೆ ಅಗತ್ಯ ಮೂಲ ಭೂತ ಸೌಲಭ್ಯಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಕಾರ್ತೀಕ್, ಚಿತ್ರದುರ್ಗ ತಹಶೀಲ್ದಾರ್ ನಾಗವೇಣೀ, ಚಳ್ಳಕೆರೆ ತಹಶೀಲ್ದಾರ್ ರೇಹಾನ್ ಪಾಷ, ಚಳ್ಳಕೆರೆ ತಾಪಂ ಇಒ ಶಶಿಧರ್, ಚಿತ್ರದುರ್ಗ ತಾಪಂ ಇಒ ಹನುಮಂತಪ್ಪ, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ತುರುನೂರು, ಪರಶುರಾಂಪುರ, ಕಸಬಾ ಹೋಬಳಿ ವ್ಯಾಪ್ತಿಯ ಪಿಡಿಒಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments