*
ನಾಯಕನಹಟ್ಟಿ:: ಬರದ ನಾಡು ಎದ್ದೆ ಅಣೆಪಟ್ಟಿ ಕಟ್ಟಿಕೊಂಡ ನಾಯಕನಹಟ್ಟಿ ಹೋಬಳಿಯಲ್ಲಿ ಬುಡಕಟ್ಟು ಸಂಸ್ಕೃತಿ ಇನ್ನೂ ಜೀವಂತವಾಗಿದೆ
ಸಮೀಪದ
ನಲಗೇತನಹಟ್ಟಿ ಹಾಗೂ ಸರವಜ್ವನಹಳ್ಳಿ ಗ್ರಾಮಸ್ಥರ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀ ದಡ್ಲು ಮಾರಿಕಾಂಬ ದೇವಿ ಜಾತ್ರೆಯು ಮಂಗಳವಾರ ಅದ್ದೂರಿಯಾಗಿ ಜರುಗಿತು.
ಪ್ರತಿವರ್ಷದಂತೆ ಮ್ಯಾಸನಾಯಕರ ಬುಡಕಟ್ಟು ಸಂಪ್ರದಾಯ ಆಚಾರ ವಿಚಾರಗಳಂತೆ.
ದಡ್ಲು ಎಂದರೆ ತೆಲುಗು ಭಾಷೆಯಲ್ಲಿ ಹಟ್ಟಿ ಎಂಬ ಅರ್ಥವಿದೆ.
ಹಟ್ಟಿಯ ಗ್ರಾಮದೇವತೆಯನ್ನು ದಡ್ಲು ಮಾರಮ್ಮ ದೇವಿ ಎಂದು ಕರೆಯುವ ಪ್ರವೃತ್ತಿ ಇದೆ
ಸಮೀಪದ ನಲಗೇತನಹಟ್ಟಿ ಮತ್ತು ಸರವಜ್ವನಹಳ್ಳಿ ಗ್ರಾಮಸ್ಥರ ಸಮ್ಮುಖದಲ್ಲಿ ಮಂಗಳವಾರ ಶ್ರೀ ದಡ್ಲು ಮಾರಿಕಾಂಬ ದೇವಿ ಜಾತ್ರೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಜರುಗಿತು.
ಮಂಗಳವಾರ ಶ್ರೀ ದಡ್ಲು ಮಾರಿಕಾಂಬ ದೇವಿ ಸಕಲ ಬಿರುದಾವಳಿಗಳೊಂದಿಗೆ ಸಮೀಪದ ಗೋಕಟ್ಟಿಗೆ ಗಂಗೆ ಪೂಜೆಗೆ ಆಗಮಿಸಿತು ಅಲ್ಲಿ ಬುಡಕಟ್ಟು ಸಂಸ್ಕೃತಿ ಆಚಾರ-ವಿಚಾರಗಳಂತೆ ಶ್ರೀದೇವಿಗೆ ಪೂಜಾ ಕಾರ್ಯಗಳನ್ನು ನೆರವೇರಿಸಿದ ಗ್ರಾಮಸ್ಥರು. ಅಲ್ಲಿಂದ ನಂತರ ಶ್ರೀ ನಲಗೇತು ಮುತ್ತೈಗಳ ಪದ್ದಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಶ್ರೀದೇವಿಯನ್ನು ಸ್ವಗುಡಿಯ ದೇವಸ್ಥಾನಕ್ಕೆ ಕರೆ ತರಲಾಯಿತು. ವಿವಿಧ ಬೇಡಿಕೆ ಅರಿಕೆ ಒತ್ತ ಭಕ್ತರು ತಮ್ಮ ತಮ್ಮ ಹರಿಕೆ ಬೇಡಿಕೆ ಈಡೇರಿಸುವಂತೆ ಶ್ರೀದೇವಿಯಲ್ಲಿ ಬೇಡಿಕೊಂಡರು ಹೂವು ಹಣ್ಣು ಕಾಯಿ ನೀಡಿ ದೇವರಿಗೆ ಭಕ್ತಿಯ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ದಡ್ಲು ಮಾರಿಕಾಂಬ ದೇವಿ ದೇವಸ್ಥಾನದ ಗುಡಿಕಟ್ಟಿನ ಅಣ್ಣತಮ್ಮಂದಿರು ನಲಗೇತನಹಟ್ಟಿ ಮತ್ತು ಸರವಜ್ವನಹಳ್ಳಿಯ ಸಮಸ್ತ ಗೌಡ್ರು ವಂಶಸ್ಥರು. ಹಾಗೂ ನಲಗೇತನಹಟ್ಟಿ ಮತ್ತು ಸರವಜ್ವನಹಳ್ಳಿ ಎರಡು ಗ್ರಾಮದ ಸಮಸ್ತ ಊರುಗಳ ಗ್ರಾಮಸ್ಥರು ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಇದ್ದರು
0 Comments