:
ಹಿರಿಯೂರು, ಡಿಸೆಂಬರ್ 07 ಸಂಬಂಧಿಕರ ಮದುವೆ ಮುಗಿಸಿಕೊಂಡು ಊರಿಗೆ ಮರಳುವಾಗ ರಸ್ಹಿತೆ ಬದಿಯಲ್ಲಿದ್ದ ಸೇತುವೆಗೆ ಡಿಕ್ಕಿಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಅಬ್ರುಬಿನಹೊಳೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಹೂವಿನಹೊಳೆ ಗ್ರಾಮದ ರಾಜಣ್ಣ( 40) ಪಲ್ಸರ್ ಮೋಟಾರ್ ಸೈಕಲ್ ನಲ್ಲಿ ಮಂಜಣ್ಣನ ಮಗಳ ಮದುವೆ ಶಿರಾ ಟೌನ್ ನಲ್ಲಿ ಇದ್ದು ರಾತ್ರಿ
ಕಾರ್ಯಕ್ರಮ ಮುಗಿಸಿಕೊಂಡು ಮ್ಯಾದನಹೊಳೆ ಕಡೆಯಿಂದ ಹೂವಿನಹೊಳೆ ಕಡೆ ಬರಲು ತನ್ನ ಮೋಟಾರ್
ಸೈಕಲ್ ನ್ನು ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ ನಿಯಂತ್ರಣ
ತಪ್ಪಿ ಮ್ಯಾದನಹೊಳೆ-ಹೂವಿನಹೊಳೆ ರಸ್ತೆಯಲ್ಲಿ ರಾಗಿ ರಾಮಣ್ಣ ಇವರ ಜಮೀನು ಹತ್ತಿರ ಇರುವ ಸೇತುವೆ ಗೆ
ಮೋಟಾರ್ ಬೈಕ್ ಡಿಕ್ಕಿ ಪಡಿಸಿದ ಪರಿಣಾಮ ಚಾಲಕ ರಾಜಣ್ಣ ರವರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದು
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments