ಚಳ್ಳಕೆರೆ ಜನಧ್ವನಿ ವಾರ್ತೆ ಜ.3. ಕಂದಾಯ ಇಲಾಖೆಯ ಮೋಜಣಿ ತಂತ್ರಾಂಶದಲ್ಲಿನ ಲೋಪ, ಸರ್ವರ್ ಸಮಸ್ಯೆಯಿಂದ ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಚೇರಿಗೆ ಅಲೆದರೂ ಬಗೆಹರಿಯದ ಸಮಸ್ಯೆ ಯಾರಿಗೇಳಬೇಕು ನಮ್ಮ ಪ್ರಾ ಬ್ಲಮ್ ಎಂಬಂತಾಗಿದೆ ರೈತರ ಗೋಳು.
ಹೌದು ಇದು ಚಳ್ಳಕೆರೆ ತಾಲೂಕಿನ ಕಂದಾಯ ಇಲಾಖೆಯಲ್ಲಿ ಸೇವೆ ಪಡೆಯಲು ಆಗುವ ವಿಳಂಬ ತಪ್ಪಿಸಲು ಸರಕಾರ ಹಲವು ತಂತ್ರಾಂಶಗಳನ್ನು ಅಳವಡಿಸಲಾಗುತ್ತಿದೆ ತಂತ್ರಾಂಶ ಕೈಕೊಟ್ಟಾಗ ಸರಿಪಡಿಸಲು ವಿಳಂಬದೋರಣೆ ಮಾಡುತ್ತಿದ್ದು ಇಲಾಖೆ ವಿರುದ್ದ ರೈತರು ಹಿಡಿ ಶಾಪ ಹಾಕುತ್ತಾರೆ. ರೈತರ ಪಹಣಿ ತಪ್ಪಾಗಿದ್ದರೆ ಜಮೀನಿನ ಹದ್ದುಬಸ್ತು, ಇ–ಪೋಡಿ, ಇ–ಸ್ವತ್ತು ಸೇವೆ ಪಡೆಯಲು ಮೋಜಣಿ ತಂತ್ರಾಂಶದ ಮೂಲಕ ಆಯಾ ಹೋಬಳಿಯ ನಾಡಕಚೇರಿಗಳಲ್ಲಿ ನಿಗಧಿತ ಶುಲ್ಕ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಈ ತಂತ್ರಾಂಶ ಪದೇ ಪದೇ ಕೈಕೊಡುವುದರಿಂದ ರೈತರು ತಾಲ್ಲೂಕು ಕಚೇರಿ, ನಾಡ ಕಚೇರಿಗಳಿಗೆ ಅಲೆದಾಡುವುದು ಒಂದಾದರೆ ಮತ್ತೊಂದು ಸಮಸ್ಯೆಯಾಗಿದ್ದು ಆಕಾರ ಬಂದು. ತತ್ಕಾಲಿಕ ಪೋಡಿ.11ಎ.11ಬಿ ಸೇರಿದಂತೆ ತಪ್ಪಾಗಿರುವ ಜಮೀನು ದಾಖಲೆ ಸರಿಪಡಿಸಲು ಅರ್ಜಿ ಸಲ್ಲಿಸಿದರೆ ಸರ್ವೆ ಇಲಾಖೆಗೆ ಹೋಗುವ ಬದಲು ಕಂದಾಯ ಇಲಾಖೆ ಆರ್ ಆರ್ ಟಿ ವಿಭಾಗಕ್ಕೆ ಹೋಗುತ್ತವೆ ಅಲ್ಲಿ ಇವು ಏಕೆ ಬಂದಿವೆ ಎಂದು ಪರಿಶೀಲನೆ ಮಾಡ ಬೇಕೆಂದರೆ ಆರ್ ಆರ್ ಟಿ ಶಾಖೆಯ ಶಿರಸ್ತೆದಾರ್ ಲಾಗಿನ್ ಡೆಡ್ಡಾಗಿದೆ ಎನ್ನಲಾಗಿದೆ. ಸರಕಾರಿ ಖರಾಬು. ಸರಕಾರಿ ಪಹಣಿಯಾಗಿದ್ದಾರೆ ಮಾತ್ರ ಆರ್ ಆರ್ ಟಿ ಶಾಖೆಯ ಶಿರಸ್ತೆದಾರ್ ಲಾಗಿನ್ ಗೆ ಹೋಗ ಬೇಕು ಆದರೆ ಮೋಜಿಣಿ ತಂತ್ರಾಂಶದ ಲೋಪದಿಂದಾಗಿ ಸರ್ವೆ ಇಲಾಖೆ ಅಧಿಕಾರಿಗಳ ಲಾಗಿನ್ ಬದಲಾಗಿ ಕಂದಾಯ ಇಲಾಖೆ ಶಿರಸ್ತೆದಾರ್ ಲಾಗಿನ್ ಗೆ ಹೋಗುತ್ತವೆ ಎನ್ನಲಾಗಿದೆ.
![](https://janadhwani.in/wp-content/uploads/2024/01/IMG-20240103-WA0004.jpg)
![](https://janadhwani.in/wp-content/uploads/2024/01/IMG-20240103-WA00071.jpg)
![](https://janadhwani.in/wp-content/uploads/2024/01/IMG_20240103_165548.jpg)
ಪ್ರತಿದಿನವೂ ಮೋಜಣಿ ತಂತ್ರಾಂಶದಲ್ಲಿ ಸರ್ವರ್ ಲಾಗಿನ್ ಎರರ್ ಎಂಬ ಸಂದೇಶ ತೋರಿಸುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಮೇಲಧಿಕಾರಿಗಳಿಗೆ ತಿಳಿಸಿ ಎಂಬ ಉತ್ತರವನ್ನು ಸಿಬ್ಬಂದಿ ನೀಡುತ್ತಿದ್ದಾರೆ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದ
ರೈತರು ಇಂದು ಸರಿಯಾಗಬಹುದು ನಾಳೆ ಸರಯಾಗ ಬಹುದು ಎಂದು ಕಚೇರಿಗಳ ಬಳಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅರ್ಜಿ ಸಲ್ಲಿಕೆಯಾಗಿದೆ. ಒಬ್ಬ ರೈತ ಅರ್ಜಿ ಸಲ್ಲಿಸಲು ವಾರಗಟ್ಟಲೆ ಕಾಯಬೇಕು ಅರ್ಜಿ ಸಲ್ಲಿಸಿದ ನಂತರವೂ ಯಾರ ಲಾಗಿನ್ ಗೆ ಹೋಗಿದೆ ಎಂದು ತಿಂಗಳು ಕಳೆದರೂ ಕೆಲಸ ಆಗದೆ ಕಚೇರಿಗಳ ಸುತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರ ಅಳಲಾಗಿದೆ. ಇದೆ’ ಎಂದರು.
![](https://janadhwani.in/wp-content/uploads/2024/01/IMG-20240103-WA0005.jpg)
![](https://janadhwani.in/wp-content/uploads/2024/01/IMG-20240103-WA0006.jpg)
ಜನರ ಬಳಿ ಸರಕಾರ ಎಂದು ಹೇಳುವ ಸರಕಾರ ಸರಕಾರಿ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲು ಜನರಾ ದರ್ಶನ. ಜನಸಂಪರ್ಕ ಸಭೆ. ಜನಸ್ಪಂದನಾ ಸಭೆ . ಸೇರಿದಂತೆ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ ಆದರೆ ತಂತ್ರಾಂಶ ಕೈಕೊಟ್ಟಾಗ ಸರಿಪಡಿಸಲು ವಿಳಂಭ ದೋರಣೆಯಿಂದ ಸಾರ್ವಜನಿಕರು. ರೈತರು ಸರಕಾರಿ ಕಚೇರಿಗಳಿಗೆ ತಿಂಗಳು ಗಟ್ಟಲೆ ಅಲೆದಾಡುವಂತಾದರೂ ದುರಸ್ಥಿ ಪಡಿಸಲು ಮಾತ್ರ ಅಧಿಕಾರಿಗಳು ಇಚ್ವಾ ಶಕ್ತಿ ತೋರುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತವೆ. ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಮೋಜಿಣಿ ತಂತ್ರಾಂಶದಲ್ಲಿ ಲೋಪದೋಷಗಳನ್ನು ಸರಿಪಡಿಸಿ ರೈತರ ಅಲೆದಾಟ ತಪ್ಪಿಸುವರೇ ಕಾದು ನೋಡ ಬೇಕಿದೆ..
ಚೌಳೂರು ಗ್ರಾಮದ ರೈತ ರೇಣುಕಾ ಪ್ರಸಾದ್ ಜನಧ್ವನಿ ಡಿಜಿಟಲ್ ಮೀಡಿಯಾ ದೊಂದಿಗೆ ಅಳಲು ತೋಡಿಕೊಂಡಿರುವುದು.
0 Comments