ಮೊಳಕಾಲ್ಮುರು:- ಮೊಳಕಾಲ್ಮುರಿನ ಆರಾಧ್ಯ ದೈವ ನುಂಕೇಮಲೆ ಸ್ವಾಮಿಯ ತೇರು ವಿಜೃಂಭಣೆಯಿಂದ ನಡೆಯಿತು
ಶನಿವಾರ ಸಾಯಂಕಾಲ ಸುಮಾರು 6.30 ಗಂಟೆಗೆ ಪೂಜೆ ಕೈ ಕಾರ್ಯಗಳನ್ನು ನಡೆಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥೋತ್ಸವವನ್ನು ಸಾವಿರಾರು ಭಕ್ತರು ಹೇಳದೈದು ತಮ್ಮ ಹರಕೆಯ ರೂಪದಲ್ಲಿ ಬಾಳೆಹಣ್ಣು ಸೂರ್ ಬೆಲ್ಲ ತೆಂಗಿನಕಾಯಿ ರಥೋತ್ಸವಕ್ಕೆ ಸಮರ್ಪಣೆ ಮಾಡಿ ತಮ್ಮ ಹರಕೆಯನ್ನು ತೀರಿಸಿದರು ರಥೋತ್ಸವವನ್ನು ಮೂಲ ಸ್ಥಾನದಿಂದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದವರೆಗೂ ಹೇಳದೈದು ಮತ್ತೆ ಮೂಲಸ್ಥಾನಕ್ಕೆ ರಥೋತ್ಸವವನ್ನು ತಂದು ನಿಲ್ಲಿಸಲಾಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ಪೊಲೀಸ್ ಇಲಾಖೆಯಿಂದ ಕೈಗೊಂಡಿತ್ತು.
ಅದೇ ರೀತಿ ಭಾನುವಾರ
ತುಪ್ಪದಕ್ಕನ ಸಿಡಿ
ಮಹೋತ್ಸವವು ಲಕ್ಷಾಂತರ ಭಕ್ತರೊಂದಿಗೆ ನಡೆಯಲಿದೆ
ತಾಲೂಕು ಸೇರಿದಂತೆ ಹೊರ ತಾಲೂಕು ಹಾಗೂ ಹೊರ
ಜಿಲ್ಲೆಗಳಿಂದ ಜಾತ್ರೆಗೆ ಸುಮಾರು 20 ರಿಂದ 30 ಸಾವಿರಕ್ಕೂ ಹೆಚ್ಚು ಜನ
ಭಾಗವಹಿಸುವ ನಿರೀಕ್ಷೆ ಇದೆ.
ಕಳೆದ ವರ್ಷದ ಜಾತ್ರೆಯಲ್ಲಿ ದೇವಸ್ಥಾನ ಆವರಣದಲ್ಲಿನ
ಪುಷ್ಕರಣಿಯಲ್ಲಿ ಬಿದ್ದು ಬಾಲಕಿಯರಿಬ್ಬರು ಮೃತಪಟ್ಟಿದ್ದರು. ಈ ವರ್ಷ ಇಂತಹ ಘಟನೆಗಳು ಮರುಕಳಿಸದಂತೆ ದೇವಸ್ಥಾನ
ಸಮಿತಿಯವರು ಹೆಚ್ಚು ಜವಾಬ್ದಾರಿ ವಹಿಸಿ ಈ ಪುಷ್ಕರಣಿಯ
ಸುತ್ತಲೂ ಕಬ್ಬಿಣದ ಮೆಷ್ ಅಳವಡಿಸಿ ಜನರು ಒಳ ಹೋಗದಂತೆ ಪೊಲೀಸರು ಕ್ರಮ ಕೈಗೊಂಡಿದ್ದರು.ದೇವಸ್ಥಾನ ಪಟ್ಟಾಧ್ಯಕ್ಷ ಮಂಗಲನಾಥ್
ಗುರೂಜೀ ನೇತೃತ್ವದಲ್ಲಿ ನಡೆಯುವ ಈ ಜಾತ್ರೆಗೆ ಜಿಲ್ಲೆ ಸೇರಿದಂತೆ
ನೆರೆಯ ಬಳ್ಳಾರಿ, ದಾವಣಗೆರೆ ಹಾಗೂ ಆಂಧ್ರದ ರಾಯದುರ್ಗ,
ಕಲ್ಯಾಣದುರ್ಗ, ಅನಂತಪುರ ಜಿಲ್ಲೆಗಳಿಂದ ನೂರಾರು ಭಕ್ತರ ಆಗಮಿಸಿ ತಮ್ಮ ಹರಕೆಯನ್ನು ತೀರಿಸಿದರು.
ಹೊಟ್ಟಿನಲ್ಲಿ ಜಾತ್ರೆಯು ಯಾವುದೇ ಅಹಿತಕರ ಘಟನೆ ನಡೆಯದೇ ಸಾವಿರಾರು ಭಕ್ತರು ದೇವರನ್ನು ಕಣ್ ತುಂಬಿಕೊಂಡಿದ್ದು ಕೊಂಡಿದ್ದು ವಿಶೇಷವಾಗಿತ್ತು.
0 Comments