ಚಳ್ಳಕೆರೆ ಮೇ 20ಚಳ್ಳಕೆರೆ ನಗರದ ಆರಾಧ್ಯ ದೈವ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಮೇ 22 ರಂದು ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ ಹರಾಜು ನಂತರ ದೊಡ್ಡ ರಥೋತ್ಸವ ಜರುಗಲಿದೆ.
ಸೋಮವಾರ ದೊಡ್ಡ ರಥಕ್ಕೆ ತೈಲಾಭಿಷೇಕ, ಶ್ರೀ ಸ್ವಾಮೀಯ ಉತ್ಸವ ಪುರತಂರ ವೀರನ್ಯಾಟನಡೆಯಲಿದೆ. ಮಂಗಳವಾರ ಶ್ರೀಸ್ವಾಮಿಯ ವಿರಗಾಶಿ, ಬೆಳ್ಳಿ ಪಲ್ಲಕ್ಕಿಯಲ್ಲಿ ಗಂಗಾಪೂಜೆ, ದೊಡ್ಡೇರಿ ಸಂಸ್ಥಾನ ಮಠದ ದೊಣ್ಣೇ ಮನೆತನದವರಿಂದ ಶ್ರೀಸ್ವಾಮಿಗೆ ಅಗ್ನಿಕುಂಡ ನಂತರ ಪುರಂತರ ವೀರನಾಟ್ಯ ಮತ್ತು ಸಂದೋಲಿ ಕೋತ್ಸವ,
ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ ಹರಾಜಿನ ನಂತರ ದೊಡ್ಡ ರಥೋತ್ಸವ ಜರುಗಲಿದೆ. ವೀರಗಾಸೆ, ನಂದಿಕೋಲು, ಡೊಳ್ಳು, ನಾದಸ್ವರ, ಪುರಂತರ ವೀರನಾಟ್ಯ ನಂತರ ಮಹಾ ಮಂಗಳಾರತಿ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಗುರುವಾರ ನಗರದೇವತೆ ಚಳ್ಳಕೇರಮ್ಮ ಮತ್ತು ಉಡುಸಲಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಭಕ್ತರು ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಕಡುಬಿನ ಕಾಳಗ, ವೀರಭದ್ರಸ್ವಾಮಿ ಹಾಗೂ ಕಾಳಮ್ಮ ದೇವಿಗೆ ವಾಗ್ವಾದ ಕಾರ್ಯಕ್ರಮ ನಡೆಯಲಿದೆ. ಮೇ 24ರಂದು ಕಂಕಣ ವಿಸರ್ಜನೆ, ಹೋಮ, ಶಾಂತಿ, ಓಕಳಿ ನಡೆಯಲಿದೆ.
ಶ್ರೀವೀರಭದ್ರಸ್ವಾಮಿಗೆ ಅಪಾರ ಭಕ್ತರ ಸಂಖ್ಯೆವೊಂದಿದ್ದು ದೇವಸ್ಥಾನದ ರಾಜಗೋಪುರ 40 ಅಡಿ ಎತ್ತರವಿದ್ದು, ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ವೀರಭದ್ರ, ಕೇಶವ, ನರಸಿಂಹ, ಅಚ್ಯುತ, ಕಮಲಜ, ಪೂರ್ವದಲ್ಲಿ ಗಜಾರೂಢ, ಇಂದ್ರ, ಪುರಂದರ, ರಾಮ, ಸೀತೆ, ವಾಲಿ ಸುಗ್ರೀವ, ಸುಬ್ರಹ್ಮಣ್ಯ, ಗೋಪುರದ ತುದಿಯಲ್ಲಿ ಗುಹ, ಆರ್ಯ, ಕಾತ್ಯಾಯಿನಿ, ವಿಷ್ಣು, ಅಶ್ವಿನಿ ದೇವತೆಗಳು ಸೇರಿ ರಾಜಗೋಪುರದಲ್ಲಿ ಮೂನ್ನೂರಕ್ಕೂ ಹೆಚ್ಚು ವಿವಿಧ ಬಣ್ಣದ ಉಬ್ಬು ಚಿತ್ರಗಳಿವೆ.
![](https://janadhwani.in/wp-content/uploads/2024/05/2023-07-20-scaled.jpg)
ಚಿತ್ರದುರ್ಗ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಹಾಗೂ ನೆರೆಯ ರಾಜ್ಯದಿಂದ ಭಕ್ತರ ಸಮೂಹವೇ ಜಾತ್ರೆಗೆ ಬರಲಿದೆ.
ಸೂಜಿಮಲ್ಲೇಶ್ವರ ನಗರದ ಸಮೀಪ ಮೇ 27 ರ ಸೋಮವಾರ ರಂದು ನಗರಸಭೆ ನೇತೃತ್ವದಲ್ಲಿ ದನಗಳ ಜಾತ್ರೆಯನ್ನು ಏರ್ಪಡಿಸಲಾಗಿದೆ ಮೇವಿನ ಅಭಾವ ಇರುವುದರಿಂದ ಜಾತ್ರೆಗೆ ಬರುವ ರೈತರು ತಮ್ಮ ಜಾನುವಾರುಗಳಿಗೆ ಮೇವು ರೈತರು ವ್ಯವಸ್ಥೆ ಮಾಡಿಕೊಳ್ಳುವಂತೆ ದೇವಸ್ತಾನ ಸಮಿತಿಯವರು ತಿಳಿಸಿದ್ದಾರೆ
0 Comments