ಪಾವಗಡ ಮೇ 5 ಬೀಕರ ಬರದ ಛಾಯೆ, ಹಾಗೂ ಬಿಸಿಲಿನ ತಾಪಮಾನದಿಂದ ಜಾನುವಾರುಗಳಿಗೆ ಮೇವು ನೀರಿಲ್ಲದೆ ಸಾವಿನ ಮನೆ ಸೇರುತ್ತಿದ್ದು ರೈತರನ ಹೈನುಗಾರಿಕೆ ಮೇಲು ಕರಿನೆರಳಿನ ಛಾಯೆ ಬಿದ್ದು ಇಲ್ಲೊಬ್ಬ ಸಂತ ಜಾನುವಾರುಗಳ ನೆರವು ನೀಡಲು ಮುಂದಾಗಿದ್ದಾರೆ.
ಹೌದು ಇದು ಪಾವಗಡ ಪಾವಗಡ ಹಾಗೂ ಆಂಧ್ರಪ್ರದೇಶದ ಗಡಿಭಾಗದ ಭಕ್ತರಪಲ್ಲಿ ಗ್ರಾಮದಲ್ಲಿ ಸ್ವಲ್ಪ ನೀರು ಹಾಗೂ ಮೇವು ದೊರೆಯುತ್ತದೆ ಎಂಬ ಆಸೆಯಿಂದ ಅಲ್ಲಿಗೆ ತೆರಳಿದಾಗ ನಡೆದ ಘಟನೆ ಯೇ ಬೇರೆದಾಗಿತ್ತು ಮೆವಿಲ್ಲದೆ ಅಪೌಷ್ಠಿಕತೆಗೆ ತುತ್ತಾಗಿ ಸಂಪೂರ್ಣ ನಿತ್ರಾಣಗೊಂಡು ಶಂಕರು ಗುಳಿ ತಳಿಯ 5 ಎಮ್ಮೆಗಳು ಸಾವಿನ ಮನೆ ಸೇರಿದ್ದು ಕಂಡು ಸಂತ ಶ್ರೀ ಜಪಾನಂದಸ್ವಾಮೀಗಳು ಕಣ್ಣೀರು ಹರಿಸಿ ರೈತರ ಎಮ್ಮೆಗಳಿಗೆ ಮೇವು ಒದಗಿಸುವ ಮೂಲಕ ಮೂಕ ಪ್ರಾಣಿಗಳ ಹಸಿವು ನೀಗಿಸಿ ರೈತರ ನೆರವಿಗೆ ಮುಂದಾಗಿದ್ದಾರೆ.
ಬೀಕರ ಬರಗಾಲ ಹಾಗೂ ಬಿಸಿಲಿನ ತಾಪದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಜಾನುವಾರುಗಳು ಬಿಸಿಲಿನ ತಾಪಕ್ಕೆ ನೀರು ಮೇವಿಲ್ಲದೆ ಸಾಯುವ ಸ್ಥಿತಿ ತಲುಪಿದರೂ ಸಹ ಸರಕಾರಗಳು ಮಾತ್ರ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದು ಜನ ಜಾನುವಾರುಗಳ ರಕ್ಷಣೆಗೆ ಮುಂದಾಗುತ್ತಿಲ್ಲ ಚುನಾವಣೆ ಹೆಸರಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಸಹ ಕುಡಿಯುವ ನೀರು ಮೇವು ಒದಗಿಸಲು ಮುಂದಾಗುತ್ತಿಲ್ಲ ಎಂದು ಸರಕಾರಗಳ ವಿರುದ್ದ ಕಿಡಿ ಕಾರಿದ್ದಾರೆ.
![](https://janadhwani.in/wp-content/uploads/2024/05/IMG-20240409-WA0198.jpg)
ಜಪಾನಂದ ಸ್ವಾಮಿಗಳು ಶಂಕರಗಲ್ಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾಡು ಪ್ರಾಣಿಗಳಿಗೆ ಆಹಾರ ನೀರು ಇಲ್ಲದೆ ಇರುವ ಕಾರಣ ರೈತರ ಸಾಕು ಪ್ರಾಣಿಗಳ ಮೇಲೆ ಎರಗಿ ಗಾಯಗೊಳಿಸಿರುವುದು ಕಂಡು ಬಂದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಮಾನವೀಯತೆ ದೃಷ್ಠಿಯಿಂದ ರೈತರ ನೆರವಿಗೆ ಬಾರದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
42-43 ° ಬಿಸಿಲಿನಲ್ಲಿ ಬದುಕುತ್ತಿರುವ ಈ ಬಡಪಾಯಿಗಳಿಗೆ ಪೂಜ್ಯ ಸ್ವಾಮಿ ಜಪಾನಂದರೆ ನಡೆದಾಡುವ ದೇವರು ಎಂದು ಈ ಭಾಗದ ನೂರಾರು ಗ್ರಾಮಸ್ತರ ನಂಬಿಕೆ. ಅದೇನೇರಲಿ
ಅತ್ಯಂತ ದುಬಾರಿ ಹಾಗೂ ವಿಶೇಷವಾದ “ಸುರುಟಿ” ತಳಿಯಾದ ಸುಮಾರು 50 ಎಮ್ಮೆಗಳಿಗೆ ಮರು ಜನ್ಮನೀಡಿದ ಪೂಜ್ಯ ಸ್ವಾಮಿ ಜಪಾನಂದಜಿ ಮಹಾರಾಜರು.
![](https://janadhwani.in/wp-content/uploads/2024/05/IMG-20240505-WA00791.jpg)
ಕಳೆದ ಒಂದು ವಾರದ ಹಿಂದೆ ವೃದ್ಧರಾದ ಶ್ರೀ ರಾಮಪ್ಪ ಹಾಗೂ ಶ್ರೀ ರಾಮಚಂದ್ರಪ್ಪ ಎನ್ನುವ ಬಡ ಹೈನುಗಾರರು ಸ್ವಾಮಿಜೀ ರವರಬಳಿಗೆ ಬಂದು ತಮ್ಮ ದುಃಖ ವನ್ನು ತೂಡಿಕೊಂಡರು. ಅತ್ಯಂತ ದುಬಾರಿ ಹಾಗೂ ವಿಶೇಷ ತಳಿ ಯಾದ “ಸುರುಟಿ “ಎಮ್ಮೆಗಳ ದಾರುಣ ಸ್ಥಿತಿ ಹಾಗೂ ಸುಮಾರು ಎಮ್ಮೆಗಳು ಆಹಾರವಿಲ್ಲದೆ ಪ್ರಾಣಬಿಟ್ಟಿ ರುವುದನ್ನು ವಿವರಿಸಿ ತಮಗೆ ಸಹಾಯಮಾಡದಿದ್ದರೆ ಬದುಕುಳಿದ ಎಮ್ಮಗಳು ಸಾವನನ್ನಪ್ಪುತ್ತಿದ್ದವು ಎಂದು ಕಣ್ಣೀರಾಕಿದ್ದಾರೆ .
ತಕ್ಷಣ ರೈತರ ಮನವಿಗೆ ಸ್ಪಂದಿಸಿದ ಶ್ರೀ ಜಪಾನಂದಸ್ವಾಮೀಜಿಗಲು ರೈತರ ಎಮ್ಮೆಗಳಿಗೆ ಮೇವು ನೀಡಿ ರೈತರ ಬಧುಕಿಗೆ ಆಸರೆಯಾಗಿದ್ದಾರೆ .
0 Comments