ಸಂತೆಬೆನ್ನೂರು ಫೆ.24. ಅಂಗನವಾಡಿ ಕೇಂದ್ರದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಹಲ್ಲೆ ಮಾಡಿದ ಕಾರ್ಯಕರ್ತೆ ಹಾಗೂ ಸಹಾಯಕಿಮೇಲೆ ಸಂತೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಹೌದು ಇದು ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯ ಕಾಕನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಅರಳಿಕಟ್ಟೆ ಗ್ರಾಮದ ಲಾವಣ್ಯ ಮೂರು ವರ್ಷದ ಮಗುವನ್ನು ದಿನಾಂಕ 16.01 2024 ರಂದು ಮದ್ಯಾಹ್ನ 1. ಗಂಟೆ ಸಮಯದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅನ್ನಪೂರ್ಣಮ್ಮ. ಸಹಾಯಕಿ ಸೌಮ್ಮ ಇಬ್ಬರು ಅರಳಿಕಟ್ಟೆ ಗ್ರಾಮದವರಾಗಿದ್ದು.ಅಂಗನವಾಡಿ ಕಾರ್ಯಕರ್ತೆ ಮತ್ತು
ಸಹಾಯಕಿ ನನ್ನ ಮಗುವನ್ನು ನೆಲದ ಮೇಲೆ ಎಳೆದಾಡಿ, ಕೋಲಿನಿಂದ ನನ್ನ ಮಗಳ ಬೆನ್ನಿಗೆ, ಕಾಲಿಗೆ ಥಳಿಸಿರುತ್ತಾರೆ. ಇವರ ಹಲೆ, ಯಿಂದ ನನ್ನ ಮಗಳ
ಬೆನ್ನಿನ ಮೇಲೆ ಕಾಲಿನ ಮೇಲೆ ಬಾಸುಂಡೆಗಳು ಬಿದ್ದಿರುತ್ತವೆ, ಮೊಣಕಾಲಿನ ಮೇಲೆ ತರಚಿದ ಗಾಯಗಳಾಗಿರುತ್ತವೆ. ಇವರ ಹಲೆಯಿಂದ ನನ್ನ ಮಗಳ
ತುಂಬಾ ಹೆದರಿಕೊಂಡು ಅಂಗನವಾಡಿ ಕೇಂದ್ರದಿಂದ ಓಡಿ ಮನೆಗೆ ಬಂದಿರುತ್ತದೆ, ನಂತರ ನಾನು ಅಂಗನವಾಡಿ ಕೇಂದ್ರಕ್ಕೆ ಹೋಗಿ ನನ್ನ ಮಗಳು ಏನು ತಪ್ಪು ಮಾಡಿದೆ ಒಡೆಯಲು ಕಾರಣ ಹೇಳಿ ಎಂದು ಕೇಳಿದರೆ ಸರಿಯಾದ ಉತ್ತರ ನೀಡದೆ ನಾವು ಒಡದೇ ಇಲ್ಲ ಎಂದು ಹೇಳುತ್ತಾರೆ. ನನ್ನ ಮಗಳನ್ನುಒಡೆದಿರುವ ಬಗ್ಗೆ ಸಂತೆಬೆನ್ನೂರು ಠಾಣೆಯಲ್ಲಿ ನಾವು ಬೋವಿ ಜನಾಂಗವಾಗಿರುವುದರಿಂದ ನನ್ನಮಗಳನ್ನು ಜಾತಿ ನಿಂದನೆ ಮಾಡಿ ಒಡೆದಿರುವ ಬಗ್ಗೆ ದೂರು ದಾಖಲಿಸಿ ತಿಂಗಳು ಕಳೆದರೂ ಯಾವುದೇ ಕ್ರಮಕೈಕೊಂಡಿಲ್ಲ ಸಂತೆಬೆನ್ನೂರು ಠಾಣೆಯಲ್ಲಿ ವಿಚಾರಿಸಿದರೆ. ಚನ್ನಗಿರಿಗೆ ಹೋಗಿ ಎನ್ನುತ್ತಾರೆ .ಚನ್ನಗಿರಿ ಠಾಣೆಯಲ್ಲಿ ವಿಚಾರಿಸಿದರೆ ಯಾವುದೇ ಉತ್ತರ ನೀಡುತ್ತಿಲ್ಲ ನನ್ನ ಮಗಳ ಮೇಲೆ ಹಲ್ಲೆ ಮಾಡಿದವರು ಊರಲ್ಲಿ ಓಡಾಡಿಕೊಂಡು ಹರಾಮಾಗಿದ್ದಾರೆ. ನನ್ನ ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸುತ್ತೇವೆ ಎಂದು ಮಗುವಿನ ತಾಯಿ ಪೂಜಾ. ತಂದೆ ಮಂಜುನಾಥ್ ಜನಧ್ವನಿ ಮೀಡಿಯಾದೊಂದಿಗೆ ಮಾತನಾಡಿ ಅಂಗನವಾಡಿ ಕೇಂದ್ರಕ್ಕೆ ಹೋಗುವ ನಮ್ಮ ಮಕ್ಕಳನ್ನು ಕೀಳುಮಟ್ಟದಲ್ಲಿ
ನೋಡುವುದು ಬೇದಬಾವ ಮಾಡುವುದು ಮತ್ತು ಬೇರೆ ಮಕ್ಕಳಂತೆ ನಮ್ಮ ಬೋವಿ ಜನಾಂಗದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡದೇ ನಿರ್ಲಕ್ಷ
ತೋರುತ್ತಾರೆ, ತಾವುಗಳು ಮೇಲ್ಕಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮತ್ತೆ ಇಂತಹ ಪ್ರಕರಣಗಳು ಮರುಕಳಿಸಂತೆ ಕಾನೂನು ಕ್ರಮಜರುಗಿಸುವಂತೆ ಒತ್ತಾಯಿಸಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments