ಚಳ್ಳಕೆರೆ ಜನಧ್ವನಿ ವಾರ್ತೆ ಮೇ14
ಚಳ್ಳಕೆರೆ ನಗರದ ಗ್ರಾಮದೇವತೆ ಚಳ್ಳಕೆರೆಮ್ಮ ದೇವೀಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾವಿರಾರ ಸಂಖ್ಯೆಯ ಅಭಿಮಾನಿಗಳು,ಕಾರ್ಯಕರ್ತರು ವಿಜಯೋತ್ಸವದರೋಡ್ ಶೋನಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ವಾತಂತ್ರö್ಯ ಬಂದಾಗಿನಿAದಲೂ ಒಂದು ಪಕ್ಷದಿಂದ ಯಾವ ಶಾಸಕರೂ ಸತತ ಮೂರನೇ ಬಾರಿ ಗೆಲುವು ಸಾಧಿಸಿದ ಉದಾಹರಣೆ ಇಲ್ಲ. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಹಾಗೂ ಕಾರ್ಯವೈಖರಿ ಮಾನದಂಡದ ಆಧಾರದ ಮೇಲೆ ಚುನಾವಣೆಯಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ವರ್ಚಿಸ್ಸಿಗೆ ಮತದಾರರು ಶಾಸಕ ಟಿ.ರಘುಮೂರ್ತಿಗೆ ವಿಜಯಮಾಲೆ ಹಾಕುವ ಮೂಲಕ ಗೆದ್ದು ಇತಿಹಾಸದ ದಾಖಲೆಯ ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಮತ ಎಣಿಕೆ ನಂತರ ಗೆದ್ದು ತುರುನೂರು ಮೂಲಕ ಕೂನಬೇವು, ನಾಯಕನಹಟ್ಟಿ ಹಟ್ಟಿ ತಿಪ್ಪೇಶನ ದರ್ಶನ ಪಡೆದು ನಂತರ ರಾತ್ರಿ ೮ ಗಂಟೆ ಸುಮಾರಿಗೆ ಚಳ್ಳಕೇರಮ್ಮ, ಶ್ರೀವೀರಭದ್ರಸ್ವಾಮಿದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ರೋಡ್ ಶೋ ಮೂಲಕ ನೆಹರು ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೂರಾರು ಕಾಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ವಿಜೋತ್ಸವ ಆಚರಣೆ ಮಾಡಿ ನಂತರ ಮತದದಾರರಿಗೆ , ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಶಾಸಕ ಟಿ,ರಘುಮೂರ್ತಿ ಅಭಿನಂದನೆ ಸಲ್ಲಿಸಿ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದಿರು.
ನೋವು ನಲಿವಿಗೆ ಸ್ಫಂದಿಸಿದವರಿಗೆ ಗೆಲವಿನ ಸಿಹಿ ನೀಡುವ ಮೂಲಕ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಪುನರಾಯ್ಕೆಗೆ ಮತದಾರ ಮಣೆ ಹಾಕಿ ದಾಖಲೆ ಶೃಷ್ಟಿಸಿದ್ದಾರೆ. ಚಳ್ಳಕೆರೆ ಕ್ಷೇತ್ರದಲ್ಲಿ ಯಾರು ಸಹ ಒಂದೇ ಪಕ್ಷದಿಂದ ಮರು ಆಯ್ಕೆಯಾಗಿಲ್ಲ ಆದ್ದರಿಂದ ಈ ಬಾರಿ ಕಾಂಗ್ರೆಸ್ ಸೋಲುಂಡು ಜೆಡಿಎಸ್ ಪಕ್ಷ ಜಯಬೇರಿ ಬಾರಿಸಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದವು ಆದರೆ ಕ್ಷೇತ್ರದ ಮತದಾರರು ಶಾಸಕ ಟಿ.ರಘುಮೂರ್ತಿಗೆ ಸಿಹಿ ನೀಡುವ ಮೂಲಕ ಇತಿಹಾಸದ ಪುಟಗಳನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
![](https://janadhwani.in/wp-content/uploads/2023/05/IMG-20230422-WA0443-1024x768.jpg)
0 Comments