ಮುವತ್ತು ವರ್ಷಗಳಿಂದ ಸ್ವಾಧೀನಲ್ಲಿದ್ದ ಜಮೀನಿನಲ್ಲಿದ್ದ ಬೆಳೆ, ಸ್ಪಿಂಕ್ಲರ್ ಪೈಪ್ ನಾಶಪಡಿಸಿದ್ದಾರೆ ಎಂದು ರೈತ ಮಹಿಳೆ ತಿಪ್ಪಮ್ಮ ಆರೋಪ.

by | 29/11/23 | ತನಿಖೆ ವರದಿ


ಚಳ್ಳಕರೆ ಜನಧ್ವನಿ ವಾರ್ತೆ ನ.29. ಜಮೀನಿನಲ್ಲಿದ್ದ ಶೇಂಗಾ ಬೆಳೆಯನ್ನು ನಾಶಪಡಿಸಿದ್ದಲ್ಲದೆ ಬದುಗಳನ್ನು ಕೆಳೆಸಿ ದೌರ್ಜನ್ಯ ಮಾಡಿ ಒಕ್ಕೆಲ್ಲೆಬಿಸಿದ್ದಾರೆ ಎಂದು ರೈತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.. ರೈತ ಮಹಿಳೆ ತಿಪ್ಪಮ್ಮ ಇವರ ಪತಿ ಬೋರಯ್ಯನ ಹೆಸರಿಗಿರುವ ಜಮೀನಿನ ಭೂ ದಾಖಲೆಗಳು.
ಹೌದು ಇದು ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮದ ಗಿರಿಯನಹಳ್ಳಿ ಗ್ರಾಮದ ರಿ. ಸರ್ವೆ ನಂಬರ್23/13 ರಲ್ಲಿ ತಿಪ್ಪಮ್ಮ ಕೋಂ ಬೋರಯ್ಯ ಜಮೀನಲ್ಲಿ ಸುಮಾರು 30 ವರ್ಷಗಳಿಂದ ಸ್ವಾಧೀನ ಇದ್ದು ಮಳೆ ಕೊರತೆಯಿಂದ ಮಳೆಯಾಶ್ರಿತ ಬೆಳೆ ಬೆಳೆಯಲು ಸಾಧ್ಯವಾಗದೆ ಇರುವರಿಂದ ಸಾಲ ಸೂಲ ಮಾಡಿ 2 ಕೊಳವೆ ಬಾವಿ ಕೊರೆಸಿ ವಿಫಲವಾಗಿದ್ದು ಮತ್ತೊಂದು ಕೊಳವೆ ಬಾವಿ ಕೊರೆಸಿದಾಗ ನೀರು ಲಭ್ಯವಾಗಿದ್ದು ಲಕ್ಷಾಂತರ ರೂ ವೆಚ್ಚಮಾಡಿ ಕೊಳವೆ ಬಾವಿ ಕೊರೆಸಿ ತುತುಂರು ಹನಿ ನೀರಾವರಿ ಅಳವಡಿಸಿಕೊಂಡು ಶೇಂಗಾ ಬೆಳೆ ಹಾಕಲಾಗಿದೆ.

ಜಮೀನಲ್ಲಿ ಕೊಳವೆ ಬಾವಿ ಕೊರಿಸಿದಾಗ, ಜೆಸಿಬಿ ಯಂತ್ರದಿಂದ ಜಮೀನು ಸುತ್ತ ಬದು ನಿರ್ಮಾಣ ಮಾಡುವಾಗ ನಮಗೆ ಯಾರು ತೊಂದರೆ ಮಾಡಿಲ್ಲ ಅಡ್ಡಿ ಪಡಿಸಿಲ್ಲ ಕೊಳವೆ ಬಾವಿ ಕೊರೆಸಿ ನೀರು ಬಿದ್ದಾಗ ಬೆಳೆ ಬಿತ್ತನೆ ಮಾಡಿದಾಗ ನಮ್ಮ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ . ಈಗ ಏಕಾಏಕಿ ಅನುಭವನದಲ್ಲಿರುವ ರೈತರಿಗೆ ನೋಟಿಸ್ ನೀಡದೆ. ಗಮನಕ್ಕೂ ತಾರದೆ ಮಂಗಳವಾರ ಭೂಮಾಮಪನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಬಂದು ಅಳತೆ ಮಾಡಿ ಕಲ್ಲು ಹಾಕಿ ಅಡ್ಡಿ ಪಡಿಸಿದರೆ ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಎಂದು ಹೇಳಿ ಹೋಗಿರುತ್ತಾರೆ.
ಪಕ್ಕದ ಜಮೀನಿನವರು ಬುಧವಾರ ನಮ್ಮಜಮೀನಿನಲ್ಲಿರುವ ಶೇಂಗಾ ಬೆಳೆ ಹಾಗೂ ಡ್ರಿಪ್ ವೈರ್ ನಾಶ ಪಡಿಸಿ ಜೆಸಿಬಿ ಯಂತ್ರದಿಂದ ಬದು ಕೆಡಿಸಿ 5ಎಕರೆ ಪ್ರದೇಶವನ್ನು ಒಂದೇ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಅನುಭವವಿದ್ದು, ನಮ್ಮಹೆಸರಿಗೆ ಪಹಣಿ ದಾಖಲೆ ಇದ್ದರೂ ಸಹ ನಮ್ಮ ಜಮೀನಿನಲ್ಲಿರುವ ಬೆಳೆಯನ್ನ ನಾಶ ಪಡಿಸಿದ್ದರಿಂದ ನಮಗೆ ತುಂಬಾಲರದ ನಷ್ಟವಾಗಿದ್ದು ಸುಮಾರು 37 ವರ್ಷ ಸಾಧನ ಮಾಡಿಕೊಂಡು ಬಂದಿದ್ದು ಬೋರ್ವೆಲ್ ನೀರ ಬಿದ್ದ ನಂತರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿರುತ್ತಾರೆ,


ಇದು ಸರಕಾರಿ ಭೂಮಿಯಾಗಿರುವುದರಿಂದ 125 ಆಗುವವರೆಗೆ ದುರಸ್ಥಿ ಮಾಡಿಸಿಕೊಳ್ಳಲು ಆಗುವುದಿಲ್ಲ ಆದರೂ ಸಹ ನಮ್ಮಸ್ವಾದೀನ ಹಾಗೂ ದಾಖಲೆಯಿರುವ ಜಮೀನನ್ನು ದೌರ್ಜನ್ಯದ ಮೇಲೆ ಜಮೀನಲ್ಲಿರುವ ಬೆಳೆ ಹಾಗೂ ಬದು ನಾಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಾಂಗಾದೆ.
ರೈತಮಹಿಳೆ ಜನಧ್ವನಿ ಡಿಜಿಟಲ್

ಮೀಡಿಯಾದೊಂದಿಗೆ ಮಾತನಾಡಿ ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮದ ಸರ್ವೆ ನಂ.23/13ರಲ್ಲಿ ರಲ್ಲಿನ 3 ಎಕರೆ 33 ಗುಂಟೆ ಜಮೀನಿನಲ್ಲಿ ಕಳೆದ 30 ವರ್ಷದಿಂದ ಸದರಿ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದೇವೆ. ನನ್ನ ಗಂಡ ಬೋರಯ್ಯ ತೀರಿಕೊಂಡು ಸುಮಾರು 18 ವರ್ಷಗಳು ಕಳೆದಿದೆನನ್ನ ಮಗ ತೀರಿಕೊಂಡು ಎಂಟು ವರ್ಷಗಳಾಗಿರುತ್ತದೆ ನನ್ನ ಸೊಸೆಗೆ ಎರಡು ಅವಳಿ ಜವಳಿ ಹೆಣ್ಣು ಮಕ್ಕಳು ನನ್ನ ಮಗ ಸಣ್ಣ ನಾಗರಾಜ ಗಾರೆ ಕೆಲಸ ಮಾಡಿ ಇರುವ ಭೂಮಿಯನ್ನು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತೇವೆ. ಇದ್ದ ಭೂಮಿಯನ್ನು ಈಗ ಏಕಾ ಏಕಿ ದೌರ್ಜನ್ಯ ಮಾಡಿ ಜಮೀನು ಕಿತ್ತುಕೊಂಡರೆ ಜೀವನ ಹೇಗೆ ಮಾಡಬೇಕು ಎಂಬುದು ದಿಕ್ಕು ದೋಚದಂಗಾಗಿದ್ದು ಕೂಡಲೆ ಸಂಬಂದಪಟ್ಟ ಅಧಿಕಾರಿಗಳು ಸುಮಾರು ಮುವತ್ತು ವರ್ಷಗಳಿಂದ ಅನುಭವದಲ್ಲಿದ್ದ ಜಮೀನನ್ನುನಮಗೆ ಬಿಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.


Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page