ಚಳ್ಳಕರೆ ಜನಧ್ವನಿ ವಾರ್ತೆ ನ.29. ಜಮೀನಿನಲ್ಲಿದ್ದ ಶೇಂಗಾ ಬೆಳೆಯನ್ನು ನಾಶಪಡಿಸಿದ್ದಲ್ಲದೆ ಬದುಗಳನ್ನು ಕೆಳೆಸಿ ದೌರ್ಜನ್ಯ ಮಾಡಿ ಒಕ್ಕೆಲ್ಲೆಬಿಸಿದ್ದಾರೆ ಎಂದು ರೈತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.. ರೈತ ಮಹಿಳೆ ತಿಪ್ಪಮ್ಮ ಇವರ ಪತಿ ಬೋರಯ್ಯನ ಹೆಸರಿಗಿರುವ ಜಮೀನಿನ ಭೂ ದಾಖಲೆಗಳು.
ಹೌದು ಇದು ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮದ ಗಿರಿಯನಹಳ್ಳಿ ಗ್ರಾಮದ ರಿ. ಸರ್ವೆ ನಂಬರ್23/13 ರಲ್ಲಿ ತಿಪ್ಪಮ್ಮ ಕೋಂ ಬೋರಯ್ಯ ಜಮೀನಲ್ಲಿ ಸುಮಾರು 30 ವರ್ಷಗಳಿಂದ ಸ್ವಾಧೀನ ಇದ್ದು ಮಳೆ ಕೊರತೆಯಿಂದ ಮಳೆಯಾಶ್ರಿತ ಬೆಳೆ ಬೆಳೆಯಲು ಸಾಧ್ಯವಾಗದೆ ಇರುವರಿಂದ ಸಾಲ ಸೂಲ ಮಾಡಿ 2 ಕೊಳವೆ ಬಾವಿ ಕೊರೆಸಿ ವಿಫಲವಾಗಿದ್ದು ಮತ್ತೊಂದು ಕೊಳವೆ ಬಾವಿ ಕೊರೆಸಿದಾಗ ನೀರು ಲಭ್ಯವಾಗಿದ್ದು ಲಕ್ಷಾಂತರ ರೂ ವೆಚ್ಚಮಾಡಿ ಕೊಳವೆ ಬಾವಿ ಕೊರೆಸಿ ತುತುಂರು ಹನಿ ನೀರಾವರಿ ಅಳವಡಿಸಿಕೊಂಡು ಶೇಂಗಾ ಬೆಳೆ ಹಾಕಲಾಗಿದೆ.
ಪಕ್ಕದ ಜಮೀನಿನವರು ಬುಧವಾರ ನಮ್ಮಜಮೀನಿನಲ್ಲಿರುವ ಶೇಂಗಾ ಬೆಳೆ ಹಾಗೂ ಡ್ರಿಪ್ ವೈರ್ ನಾಶ ಪಡಿಸಿ ಜೆಸಿಬಿ ಯಂತ್ರದಿಂದ ಬದು ಕೆಡಿಸಿ 5ಎಕರೆ ಪ್ರದೇಶವನ್ನು ಒಂದೇ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಅನುಭವವಿದ್ದು, ನಮ್ಮಹೆಸರಿಗೆ ಪಹಣಿ ದಾಖಲೆ ಇದ್ದರೂ ಸಹ ನಮ್ಮ ಜಮೀನಿನಲ್ಲಿರುವ ಬೆಳೆಯನ್ನ ನಾಶ ಪಡಿಸಿದ್ದರಿಂದ ನಮಗೆ ತುಂಬಾಲರದ ನಷ್ಟವಾಗಿದ್ದು ಸುಮಾರು 37 ವರ್ಷ ಸಾಧನ ಮಾಡಿಕೊಂಡು ಬಂದಿದ್ದು ಬೋರ್ವೆಲ್ ನೀರ ಬಿದ್ದ ನಂತರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಟ್ಟಿರುತ್ತಾರೆ,
![](https://janadhwani.in/wp-content/uploads/2023/11/Screenshot_20231129_170815.png)
ಇದು ಸರಕಾರಿ ಭೂಮಿಯಾಗಿರುವುದರಿಂದ 125 ಆಗುವವರೆಗೆ ದುರಸ್ಥಿ ಮಾಡಿಸಿಕೊಳ್ಳಲು ಆಗುವುದಿಲ್ಲ ಆದರೂ ಸಹ ನಮ್ಮಸ್ವಾದೀನ ಹಾಗೂ ದಾಖಲೆಯಿರುವ ಜಮೀನನ್ನು ದೌರ್ಜನ್ಯದ ಮೇಲೆ ಜಮೀನಲ್ಲಿರುವ ಬೆಳೆ ಹಾಗೂ ಬದು ನಾಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಾಂಗಾದೆ.
ರೈತಮಹಿಳೆ ಜನಧ್ವನಿ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿ ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮದ ಸರ್ವೆ ನಂ.23/13ರಲ್ಲಿ ರಲ್ಲಿನ 3 ಎಕರೆ 33 ಗುಂಟೆ ಜಮೀನಿನಲ್ಲಿ ಕಳೆದ 30 ವರ್ಷದಿಂದ ಸದರಿ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದೇವೆ. ನನ್ನ ಗಂಡ ಬೋರಯ್ಯ ತೀರಿಕೊಂಡು ಸುಮಾರು 18 ವರ್ಷಗಳು ಕಳೆದಿದೆನನ್ನ ಮಗ ತೀರಿಕೊಂಡು ಎಂಟು ವರ್ಷಗಳಾಗಿರುತ್ತದೆ ನನ್ನ ಸೊಸೆಗೆ ಎರಡು ಅವಳಿ ಜವಳಿ ಹೆಣ್ಣು ಮಕ್ಕಳು ನನ್ನ ಮಗ ಸಣ್ಣ ನಾಗರಾಜ ಗಾರೆ ಕೆಲಸ ಮಾಡಿ ಇರುವ ಭೂಮಿಯನ್ನು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತೇವೆ. ಇದ್ದ ಭೂಮಿಯನ್ನು ಈಗ ಏಕಾ ಏಕಿ ದೌರ್ಜನ್ಯ ಮಾಡಿ ಜಮೀನು ಕಿತ್ತುಕೊಂಡರೆ ಜೀವನ ಹೇಗೆ ಮಾಡಬೇಕು ಎಂಬುದು ದಿಕ್ಕು ದೋಚದಂಗಾಗಿದ್ದು ಕೂಡಲೆ ಸಂಬಂದಪಟ್ಟ ಅಧಿಕಾರಿಗಳು ಸುಮಾರು ಮುವತ್ತು ವರ್ಷಗಳಿಂದ ಅನುಭವದಲ್ಲಿದ್ದ ಜಮೀನನ್ನುನಮಗೆ ಬಿಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
0 Comments