ಮುದ್ದೇಬಿಹಾಳ ; ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮದಲ್ಲಿ ನವೆಂಬರ್ 30 ರಾತ್ರಿ, ಡಿ 1 ಬೆಳಗಿನ ಜಾವ ಮಧ್ಯದಲ್ಲಿ ಗ್ರಾಮದ ದ್ಯಾಮವ್ವ ದೇವಿಯ ಕೊರಳಲ್ಲಿಯ ಅಂದಾಜು 1.80.000 ರೂ ಬೆಲೆಯ ಚಿನ್ನಾಭರಣ ಕದ್ದ ಕಳ್ಳರಲ್ಲಿ ಓರ್ವ ಕಳ್ಳನನ್ನು ಬಂಧಿಸುವಲ್ಲಿ ಪೋಲೀಸ್ ರು ಯಶಸ್ವಿಯಾಗಿದ್ದಾರೆ , ಈ ಕಳ್ಳತನ ಕುರಿತು ಸುರೇಶ ಬಡಿಗೇರ ಪ್ರಕರಣ ದಾಖಲಿಸಿದ್ದರು
ಈ ಪ್ರಕರಣ ಕುರಿತು ವಿಜಯಪುರ ಪೂಲೀಸ್ ಅಧಿಕ್ಷಕರಾದ ಸೋನಾವನೆ ಖುಷಿಕೇಶ ಭಗವಾನ, ಬಾಗೇವಾಡಿ ಡಿವೈಎಸ್ಪಿ ಜೆ ಎಂ ಕರುಣಾಕರಶೆಟ್ಟಿ ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಿಕಾರ್ಜುನ, ಪಿಎಸೈ ಸಂಜಯ ತಿಪ್ಪರೆಡ್ಡಿ, ಕ್ರೈಂ ಪಿಎಸೈ ಆರ್ ಎಲ್ ಮನ್ನಾಬಾಯಿ ಹಾಗೂ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು
ಕಳ್ಳತನ ಮಾಡಿದ ಆರೋಪಿಗಳ ಬೆನ್ನತ್ತಿದ ಪೋಲಿಸರಿಗೆ ಎ 1 ಆರೋಪಿ ಶಬ್ಬಿರ ಲಾಲಸಾಬ ಸುರುಪೂರ (ಹಿರೇಮುರಾಳ ನಿವಾಸಿ ) ವಶಕ್ಕೆ ಪಡೆದು ತನಿಖೆಗೆ ಒಳಪಡಿದಾಗ ಇನ್ನೋರ್ವ ಎ 2 ಆರೋಪಿ ( ಪರಾರಿ ಆರೋಪಿ) ಹಿರೇಮುರಾಳದ ಬೈಲಪ್ಪ .ಭೀಮಪ್ಪ ಚಲವಾದಿಯೂಂದಿಗೆ ಸೇರಿ ಗ್ರಾಮದ ದ್ಯಾಮವ್ವ ದೇವಿಯ ಗರ್ಭಗುಡಿ ಕೀಲಿ ಮುರಿದು ದೇವಿಯ ಮೇಲಿದ್ದ ಚಿನ್ನದ ಆಭರಣಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ
ಬಂಧಿತನಿಂದ 2 ತೂಲಿಯ ಅಂದಾಜು 1.20.000 ರೂ ಬಂಗಾರದ ಬೋರಮಳಸರಾ ಹಾಗೂ ಅಂದಾಜು 60 ಸಾವಿರ ರೂ ಚಿನ್ನದ ಮೇಲಗುಂಡ ಸರ್ ವಶಕ್ಕೆ ಪಡೆಯಲಾಗಿದೆ
ಸದರಿ ಪ್ರಕರಣ ಪತ್ತೆ ಮಾಡಿ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪಿಎಸೈ ಸಂಜಯ ತಿಪ್ಪರೆಡ್ಡಿ,ಆರ್ ಎಲ್ ಮನ್ನಾಬಾಯಿ , ಪೋಲಿಸ್ ಸಿಬ್ಬಂದಿಗಳಾದ ಆರ್ ಎಸ್ ಪಾಟೀಲ್, ಎಸ್ ಎಲ್ ಹತ್ತರಕಿಹಾಳ, ವಿ ಎನ್ ಹಾಲಗಂಗಾಧರಮಠ, ರಮೇಶ ಮದರಿ,ಅವರನ್ನು ಶ್ಲಾಘಿಸಿ ನಗದು ಬಹುಮಾನ ಘೋಷಣೆಯನ್ನು ವಿಜಯಪುರ ಪೂಲಿಸ್ ಅಧಿಕ್ಷಕರು ಮಾಡಿದ್ದಾರೆ
0 Comments