ಚಳ್ಳಕೆರೆ ಮೇ10 ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ನಗರಸಭೆ ರಾಜಕಾಲುವೆಗಳ ಸ್ವಚ್ಚತೆಗೆ ಮುಂದಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರಸಭೆ ವ್ಯಾಪ್ತಿಯಯಲ್ಲಿ ರಾಜಕಾಲುವೆಗಳು ಹೂಳು ಹಾಗೂ ಗಿಡಗೆಂಟೆಗಳು ಬೆಳೆದು ನೀರು ಸರಗವಾಗಿ ಹರಿಯದೆ ಮಳೆ ಬಂದಾಗ ನೀರು ಮನೆಗಳಿಗೆ ಹಾಗೂ ತಗ್ಗು ಪ್ರದೇಶಗಳಿಗೆ ನುಗ್ಗಿ ಆಪಾರ ಹಾನಿ ಉಂಟಾಗುತ್ತಿದ್ದು ಇದನ್ನು ಮನಗಂಡ ಜಿಲ್ಲಾಧಿಕಾರಿ ವೆಂಕಟೇಶ್ ಗುರುವಾರ ಸಭೆ ಕರೆದು ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಚರಂಡಿ.ರಾಜ ಕಾಲುವೆಗಳಲ್ಲಿನ ಹೂಳು ತೆರವುಗೊಳಿಸ ಬೇಕು. ಪ್ರಕೃತಿ ವಿಕೋಪಗಳನ್ನು ತಡೆಯಲು ಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ನಗರಸಭೆ ಅಧಿಕಾರಿಗಳು ಯಂತ್ರಗಳ ಸಹಾಯದಿಂದ ರಾಜಕಾಲುವೆಗಳ ಹೂಳು ಸ್ವಚ್ಚತೆ ಮಾಡಲು ಮುಂದಾಗಿದ್ದಾರೆ.
0 Comments