ಮಾಳಗುಂಡನಹಳ್ಳಿ ಸಮೀಪದ ಟೈಯರ್ ಸುಟ್ಟು ಪೆರಾಸಿಸ್ ಆಯಿಲ್ ತೆಗೆಯುವ ಕಾರ್ಖಾನೆಯನ್ನು ತೆರವುಗೊಳಿಸುವಂತೆ ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮನವಿ

by | 29/05/23 | ಪ್ರತಿಭಟನೆ

ಹಿರಿಯೂರು :
ಗೌಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳಗುಂಡನಹಳ್ಳಿ ಸಮೀಪ ಟೈಯರ್ ಸುಟ್ಟು ಪೆರಾಸಿಸ್ ಆಯಿಲ್ ತೆಗೆಯುವ ಕಾರ್ಖಾನೆಯಿಂದ ಸುತ್ತಮುತ್ತ ಗ್ರಾಮಸ್ಥರಿಗೆ ಮತ್ತು ರೈತರಿಗೆ ಜಾನುವಾರುಗಳಿಗೆ ತುಂಬಾ ಹೊಗೆ ಮತ್ತು ಧೂಳು ಹಾಗೂ ದುರ್ವಾಸನೆಯಿಂದ ರೈತರು ಬೆಳೆಬೆಳೆಯಲು ತೊಂದರೆಯಾಗುವ ಜೊತೆಗೆ ಜನಜಾನುವಾರುಗಳಿಗೆ ಕಾಯಿಲೆಗಳು ಉಂಟಾಗುತ್ತವೆ, ಕೂಡಲೇ ಈ ಕಾರ್ಖಾನೆಯನ್ನು ತೆರವುಗೊಳಿಸಬೇಕು ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
ಗೌಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳಗುಂಡನಹಳ್ಳಿ ಸಮೀಪ ಟೈಯರ್ ಸುಟ್ಟು ಪೆರಾಸಿಸ್ ಆಯಿಲ್ ತೆಗೆಯುವ ಕಾರ್ಖಾನೆ ತೆರವುಗೊಳಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕಾರ್ಖಾನೆಯನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಪಿಡಿಒ ಗಳಿಗೆ ಮನವಿ ಮಾಡಿ ಮಾತನಾಡಿದರು.
ಇದಕ್ಕೆ ಸ್ಪಂದಿಸಿ ದಾಖಲೆಗಳನ್ನು ಪರಿಶೀಲಿಸಿದಾಗ 2018-19 ರಲ್ಲಿ ಅಡಿಕೆ ಪಟ್ಟಿ ತಯಾರಿಸುವ ಉದ್ದೇಶ ಸಲುವಾಗಿ ಪರವಾನಿಗೆ ನೀಡಲಾಗಿದೆ, ತದನಂತರ 2021ರಲ್ಲಿ ಚರಾಲಿಸಿಸ್ ಆಯಿಲ್ ಘಟಕ ಎಂದು ಜನರಲ್ ಲೈಸಸ್ಸ್ ತೆಗೆದುಕೊಂಡಿದ್ದಾರೆ ಆದರೆ ಇದುವರೆಗೂ ಈ ಸ್ವತ್ತು ಮಾಡಿರುವುದಿಲ್ಲ ಎಂದರಲ್ಲದೆ,
ಕಾರ್ಖಾನೆಯ ನಾಮಫಲಕ ಹಾಕಿರುವುದಿಲ್ಲ ಸ್ಥಳೀಯರಿಗೆ ಯಾವುದೇ ಉದ್ಯೋಗ ಕೊಟ್ಟಿರುವುದಿಲ್ಲ ಯಾವ ಕಚ್ಚ ವಸ್ತು ಬಳಸಿ ಆಯಲ್ ತೆಗೆಯುವ ಬಗ್ಗೆ ತಿಳಿಸಿರುವುದಿಲ್ಲ ಮತ್ತು ಕೇವಲ ಐದು ಸಾವಿರ ರೂ ಮಾತ್ರ ಕಂದಾಯ ಕಟ್ಟಿರುತ್ತಾರೆ ನಮ್ಮ ಯಾವುದೇ ಶರತ್ತುಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿರುತ್ತಾರೆ ಎಂಬುದಾಗಿ ತಿಪ್ಪೇಸ್ವಾಮಿ ಆಪಾದಿಸಿದರು.
ಈ ಕುರಿತು ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಈ ಕೂಡಲೇ ಕಾರ್ಖಾನೆಯನ್ನು ಬೇರೆಡೆ ಸ್ಥಳಾಂತರಿಸಲು ನೋಟಿಸ್ ನೀಡುತ್ತೇವೆ ಎಂಬುದಾಗಿ ಭರವಸೆ ನೀಡಿದರಲ್ಲದೆ, ಇದರ ಬಗ್ಗೆ ಗ್ರಾ.ಪಂ.ಸಭೆಯಲ್ಲಿ ಚರ್ಚಿಸಿ ಪರವಾನಗಿ ಕೊಟ್ಟಿರುವುದನ್ನ ರದ್ದುಪಡಿಸುತ್ತೇವೆ ಎಂಬುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಗೌಡನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಿತ್ತಮ್ಮ, ಕೃಷ್ಣಪ್ಪ, ಉಪಾಧ್ಯಕ್ಷರಾದ ಪುಟ್ಟನರಸಮ್ಮ, ಚಂದ್ರಹಾಸನ, ಲಕ್ಷ್ಮೀದೇವಿ, ಕರಿಯಣ್ಣ, ಮಾಳಗುಂಡನಹಳ್ಳಿ ವಕೀಲರು ನಾಗರಾಜ್, ತಿಮ್ಮಣ್ಣ, ಗಂಗಮ್ಮ, ರಮೇಶ್, ತಿಪ್ಪೇಸ್ವಾಮಿ, ಮಾಜಿಅಧ್ಯಕ್ಷರಾದ ನಾಗಭೂಷಣ್, ಪಿಡಿಒ ತಿಪ್ಪೇಸ್ವಾಮಿ, ಕೆರೆ ಕೊಡಿಹಟ್ಟಿ ಶಿವಣ್ಣ ಶಶಿಕುಮಾರ್, ಮಹೇಶ್ ಕುಂಟಪ್ಪ, ಟಿಟಿ ಚಿತ್ರಲಿಂಗಪ್ಪ, ಕರಿಯಪ್ಪ, ಕೃಷ್ಣಪ್ಪ, ಪುಲ್ಲೇಶ್, ಕಾಂತರಾಜು, ರಾಮು, ಬಾಲ್ ರಾಜ್, ಕಾಟನಾಯಕನಹಳ್ಳಿ, ಚಾಮಣ್ಣ ದೇವೇಂದ್ರಪ್ಪ ದಾಸಪ್ಪ ಬಗ್ಗನಾಡು ಮಹಾಂತೇಶ್ ಶರತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page