ಹಿರಿಯೂರು :
ಗೌಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳಗುಂಡನಹಳ್ಳಿ ಸಮೀಪ ಟೈಯರ್ ಸುಟ್ಟು ಪೆರಾಸಿಸ್ ಆಯಿಲ್ ತೆಗೆಯುವ ಕಾರ್ಖಾನೆಯಿಂದ ಸುತ್ತಮುತ್ತ ಗ್ರಾಮಸ್ಥರಿಗೆ ಮತ್ತು ರೈತರಿಗೆ ಜಾನುವಾರುಗಳಿಗೆ ತುಂಬಾ ಹೊಗೆ ಮತ್ತು ಧೂಳು ಹಾಗೂ ದುರ್ವಾಸನೆಯಿಂದ ರೈತರು ಬೆಳೆಬೆಳೆಯಲು ತೊಂದರೆಯಾಗುವ ಜೊತೆಗೆ ಜನಜಾನುವಾರುಗಳಿಗೆ ಕಾಯಿಲೆಗಳು ಉಂಟಾಗುತ್ತವೆ, ಕೂಡಲೇ ಈ ಕಾರ್ಖಾನೆಯನ್ನು ತೆರವುಗೊಳಿಸಬೇಕು ಎಂಬುದಾಗಿ ರೈತಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.
ಗೌಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳಗುಂಡನಹಳ್ಳಿ ಸಮೀಪ ಟೈಯರ್ ಸುಟ್ಟು ಪೆರಾಸಿಸ್ ಆಯಿಲ್ ತೆಗೆಯುವ ಕಾರ್ಖಾನೆ ತೆರವುಗೊಳಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಕಾರ್ಖಾನೆಯನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಪಿಡಿಒ ಗಳಿಗೆ ಮನವಿ ಮಾಡಿ ಮಾತನಾಡಿದರು.
ಇದಕ್ಕೆ ಸ್ಪಂದಿಸಿ ದಾಖಲೆಗಳನ್ನು ಪರಿಶೀಲಿಸಿದಾಗ 2018-19 ರಲ್ಲಿ ಅಡಿಕೆ ಪಟ್ಟಿ ತಯಾರಿಸುವ ಉದ್ದೇಶ ಸಲುವಾಗಿ ಪರವಾನಿಗೆ ನೀಡಲಾಗಿದೆ, ತದನಂತರ 2021ರಲ್ಲಿ ಚರಾಲಿಸಿಸ್ ಆಯಿಲ್ ಘಟಕ ಎಂದು ಜನರಲ್ ಲೈಸಸ್ಸ್ ತೆಗೆದುಕೊಂಡಿದ್ದಾರೆ ಆದರೆ ಇದುವರೆಗೂ ಈ ಸ್ವತ್ತು ಮಾಡಿರುವುದಿಲ್ಲ ಎಂದರಲ್ಲದೆ,
ಕಾರ್ಖಾನೆಯ ನಾಮಫಲಕ ಹಾಕಿರುವುದಿಲ್ಲ ಸ್ಥಳೀಯರಿಗೆ ಯಾವುದೇ ಉದ್ಯೋಗ ಕೊಟ್ಟಿರುವುದಿಲ್ಲ ಯಾವ ಕಚ್ಚ ವಸ್ತು ಬಳಸಿ ಆಯಲ್ ತೆಗೆಯುವ ಬಗ್ಗೆ ತಿಳಿಸಿರುವುದಿಲ್ಲ ಮತ್ತು ಕೇವಲ ಐದು ಸಾವಿರ ರೂ ಮಾತ್ರ ಕಂದಾಯ ಕಟ್ಟಿರುತ್ತಾರೆ ನಮ್ಮ ಯಾವುದೇ ಶರತ್ತುಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿರುತ್ತಾರೆ ಎಂಬುದಾಗಿ ತಿಪ್ಪೇಸ್ವಾಮಿ ಆಪಾದಿಸಿದರು.
ಈ ಕುರಿತು ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಈ ಕೂಡಲೇ ಕಾರ್ಖಾನೆಯನ್ನು ಬೇರೆಡೆ ಸ್ಥಳಾಂತರಿಸಲು ನೋಟಿಸ್ ನೀಡುತ್ತೇವೆ ಎಂಬುದಾಗಿ ಭರವಸೆ ನೀಡಿದರಲ್ಲದೆ, ಇದರ ಬಗ್ಗೆ ಗ್ರಾ.ಪಂ.ಸಭೆಯಲ್ಲಿ ಚರ್ಚಿಸಿ ಪರವಾನಗಿ ಕೊಟ್ಟಿರುವುದನ್ನ ರದ್ದುಪಡಿಸುತ್ತೇವೆ ಎಂಬುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಗೌಡನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಿತ್ತಮ್ಮ, ಕೃಷ್ಣಪ್ಪ, ಉಪಾಧ್ಯಕ್ಷರಾದ ಪುಟ್ಟನರಸಮ್ಮ, ಚಂದ್ರಹಾಸನ, ಲಕ್ಷ್ಮೀದೇವಿ, ಕರಿಯಣ್ಣ, ಮಾಳಗುಂಡನಹಳ್ಳಿ ವಕೀಲರು ನಾಗರಾಜ್, ತಿಮ್ಮಣ್ಣ, ಗಂಗಮ್ಮ, ರಮೇಶ್, ತಿಪ್ಪೇಸ್ವಾಮಿ, ಮಾಜಿಅಧ್ಯಕ್ಷರಾದ ನಾಗಭೂಷಣ್, ಪಿಡಿಒ ತಿಪ್ಪೇಸ್ವಾಮಿ, ಕೆರೆ ಕೊಡಿಹಟ್ಟಿ ಶಿವಣ್ಣ ಶಶಿಕುಮಾರ್, ಮಹೇಶ್ ಕುಂಟಪ್ಪ, ಟಿಟಿ ಚಿತ್ರಲಿಂಗಪ್ಪ, ಕರಿಯಪ್ಪ, ಕೃಷ್ಣಪ್ಪ, ಪುಲ್ಲೇಶ್, ಕಾಂತರಾಜು, ರಾಮು, ಬಾಲ್ ರಾಜ್, ಕಾಟನಾಯಕನಹಳ್ಳಿ, ಚಾಮಣ್ಣ ದೇವೇಂದ್ರಪ್ಪ ದಾಸಪ್ಪ ಬಗ್ಗನಾಡು ಮಹಾಂತೇಶ್ ಶರತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments