ಹಿರಿಯೂರು:
ನೆಹರು ಮಾರುಕಟ್ಟೆ ಸಮೀಪ ಬೆಳಗಿನ ವೇಳೆ ಹಣ್ಣು ವ್ಯಾಪಾರ ನಡೆಯುತ್ತದೆ ಒಂದೇ ಕಡೆ ಸೊಪ್ಪು ತರಕಾರಿ ಹಣ್ಣು ಹೂವಿನ ವ್ಯಾಪಾರ ನಡೆಯುವುದರಿಂದ ಕಿರಿದಾದ ರಸ್ತೆಯಲ್ಲಿ ಪದೇ ಪದೇ ಸಂಚಾರ ದಟ್ಟಣೆ ಉಂಟಾಗುತ್ತದೆ ಆದ್ದರಿಂದ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ಮಾರುಕಟ್ಟೆಯನ್ನು ಸಂತೆ ಮೈದಾನಕ್ಕೆ ಸ್ದಳಾಂತರ ಮಾಡಬೇಕಾಗಿದೆ ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಹೆಚ್.ಮಹಂತೇಶ್ ಹೇಳಿದರು.
ಪ್ರತಿನಿತ್ಯ ಬೆಳಿಗ್ಗೆ ನಡೆಯುವ ಸೊಪ್ಪು-ತರಕಾರಿ ವಹಿವಾಟನ್ನು ನೆಹರೂ ಮಾರುಕಟ್ಟೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪ ಇರುವ ಸಂತೆ ಮೈದಾನಕ್ಕೆ ಸ್ದಳಾಂತರಿಸುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಿ, ನಂತರ ಅವರು ಮಾತನಾಡಿದರು .
ಸಂತೆ ನಡೆಯುವ ಜಾಗ ನಗರದ ಮಧ್ಯ ಭಾಗದಲ್ಲಿದ್ದು ವಾರಪೂರ್ತಿ ವ್ಯಾಪಾರ ಮಾಡಬಹುದಾಗಿದೆ, ಆದ್ದರಿಂದ ವ್ಯಾಪಾರಿಗಳು ನೆಹರು ಮಾರುಕಟ್ಟೆ ಬದಲಾಗಿ ಸಂತೆ ಮೈದಾನದಲ್ಲಿ ವ್ಯಾಪಾರ ವಹಿವಾಟು ಮುಂದುವರೆಸಬೇಕೆಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ವರ್ತಕರು ಸಹಕಾರ ನೀಡಬೇಕು ಎಂಬುದಾಗಿ ಹೇಳಿದರು.
ನಗರದ ವ್ಯಾಪಾರಿಗಳು ಈ ಕುರಿತು ಮಾತನಾಡಿ, ದಶಕಗಳಿಂದ ಇಲ್ಲಿಯೇ ವ್ಯಾಪಾರ ವಹಿವಾಟು ನಡೆಸುತ್ತಿದ್ದೇವೆ, ವಾಯುವಿಹಾರಕ್ಕೆ ಹೋಗಿ ಬರುವವರಿಗೆ ಸೊಪ್ಪು ತರಕಾರಿ ಖರೀದಿಸಲು ಇದು ಸೂಕ್ತ ಸ್ಥಳವಾಗಿದ್ದು, ಇಲ್ಲಿಯೇ ವಹಿವಾಟು ಮುಂದುವರಿಸಲು ಅವಕಾಶ ಕೊಡಬೇಕು ಎಂಬುದಾಗಿ ಮನವಿ ಮಾಡಿದರು.
ಆದರೆ ಈ ಕೋರಿಕೆಯನ್ನು ತಿರಸ್ಕರಿಸಿದ ಪೌರಾಯುಕ್ತರು ಸಂತೆ ನಡೆಯುವ ಜಾಗ ಎಲ್ಲರಿಗೂ ಸೂಕ್ತವಾದ ಸ್ಥಳವಾಗಿದೆ, ಹೊರ ಊರುಗಳಿಂದ ಬಸ್ ಇಳಿದು ಬರುವವರಿಗೆ, ನಗರದ ವಿವಿಧ ಬಡಾವಣೆಗಳ ನಿವಾಸಿಗಳಿಗೂ ಅನುಕೂಲವಾಗುತ್ತದೆ, ಇಲ್ಲಿ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯೇ ಇಲ್ಲ, ನಾಗರೀಕರ ಸುರಕ್ಷತೆಯೇ ನಮಗೆ ಮುಖ್ಯ ಎಂಬುದಾಗಿ ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಸಂದ್ಯಾ, ಸೇರಿದಂತೆ ನಗರಸಭೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments