ನಾಯಕನಹಟ್ಟಿ ಮೇ 22 ಸುಮಾರು ವರ್ಷಗಳಿಂದ ನೀರು ಕಾಣದ ಕೆರೆಗೆ ನೀರು ಬರುತ್ತಿರುವ ದೃಶ್ಯ ಕಂಡು ಗ್ರಾಮದ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಹೌದು ಇದು ಅತಿ ಕಡಿಮೆ ಮಳೆ ಬೀಳುವ ಪ್ರದೇಶದ ಎಂಬ ಹಣೆ ಪಟ್ಟಿ ಕೊಂಡಿದ್ದ ನಾಯಕನಹಟ್ಟಿ ಬಿಸಿಲಿನ ತಾಪದಿಂದ ತತ್ತರಿಸಿದ ಜನತೆಗೆ ತಡವಾಗಿ ಮುಂಗಾರು ಮಳೆ ಬಂದರೂ ಸಹ ಅತಿ ಹೆಚ್ಚು ದಾಖಲೆ ಮಳೆ ಬಂದಿರುವ ಕಾರಣ ನಾಯಕನಟ್ಟಿ ಸಣ್ಣಕೆರೆಗೆ .ಸುಮಾರು 18 ವರ್ಷಗಳಿಂದ ನೀರು ಕಾಣದ ಕೆರೆಗೆ ಕಳೆದು ಎರಡು ಮೂರು ದಿನಗಳಿಂದ ಸುರಿದ ಮಳೆಗೆ ನೀರು ಹರಿದು ಬರುತ್ತಿದ್ದು ಕೆರೆಯಲ್ಲಿನ ಗುಂಡಿಗಳು ತುಂಬಿಕೊಂಡಿದ್ದು ನೀರು ನೋಡಿ ನಾಯಕನಹಟ್ಟಿ ಪಟ್ಟಣ ಹಾಗೂ ಸುತ್ತ ಮುತ್ತಲ ಜನರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಮಾಡಿದಷ್ಟು ನೀಡು ಬಿಕ್ಷೆ ಎಂದ ವೇದ ವ್ಯಾಕ್ಯದೊಂದಿಗೆ ಪಟ್ಟಣದ ಚಿಕ್ಕಕೆರೆಯು 16ನೇ ಶತಮಾನದಲ್ಲಿ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರು ನಾಯಕನಹಟ್ಟಿ ಹೋಬಳಿಯಲ್ಲಿ ಕಟ್ಟಿಸಿದ ಸುಸಜ್ಜಿತ 5 ಕೆರೆಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.
ಏರಿಯು ಸುಮಾರು 300 ಮೀಟರ್ ಉದ್ದವಿದ್ದು, 60 ಅಡಿ ಅಗಲವಿದೆ. ನಾಯಕನಹಟ್ಟಿ ಚಿಕ್ಕಕೆರೆಯು ನೂರಾರು ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುತ್ತದೆ. ಇದು ಸುಮಾರು 389.19 ಎಕರೆ ವಿಸ್ತೀರ್ಣ ಹೊಂದಿದ್ದು, ಪಟ್ಟಣದ ಸರ್ವೆ ನಂ. 131ರಲ್ಲಿ ಕಂಡು ಬರುತ್ತದೆ. ಇಷ್ಟು ದೊಡ್ಡ ಪ್ರಮಾಣದ ಕೆರೆಯಲ್ಲಿ ನೀರು ಸಂಗ್ರಹವಾದಾಗ ನಾಯಕನಹಟ್ಟಿ ಹೋಬಳಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳ ಅಂತರ್ಜಲದ ಮಟ್ಟ ಹೆಚ್ಚುತ್ತದೆ. ಆದರೆ ಕಳೆದ ಸುಮಾರು 18 ವರ್ಷಗಳಿಂದ ಮಳೆಯ ಕೊರತೆಯಿಂದ ಚಿಕ್ಕಕೆರೆಗೆ ನೀರು ಬಾರದೇ ಇರುವುದರಿಂದ ಕೆರೆಯಲ್ಲಿ ಮಣ್ಣು ಹಾಗೂ ಕೆರೆಗೋಡು ತುಂಬಿ ದೊಡ್ಡ ದೊಡ್ಡ ಗುಂಡಿಗಳನ್ನು ನಿರ್ಮಿಸಿದ್ದರು ಮಳೆ ಬಂದ ಕಾರಣ ನೀರು ದೊಡ್ಡ ಗುಂಡಿಗಳು ತುಂಬಿವೆ ಈಗೆ ಮಳೆ ಬಂದರೆ ಕೆರೆ ತುಂಬುವುದು ಖಚಿತ ಕಳೆದ ಬಾರಿ ಮಳೆ ಬಂದಾಗ ಎಲ್ಲಾ ಕೆರೆಗಳು ತುಂಬಿದ್ದವು ಆದರೆ ನಾಯಕನಹಟ್ಟಿ ಚಿಕ್ಕ ಕೆರೆಗೆ ಮಾತ್ರ ನೀರು ಬಂದಿರಲಿಲ್ಲ ಈದಿನ ಕೆರೆಗೆ ನೀರು ಬಂದಿರುವುದು ನಮ್ಮ ಹಾಗೂ ಹಟ್ಟಿತಿಪ್ಪೇಶನ ಕೃಫೆಯೊಂದಿಗೆ ನೀರು ಬಂದಿರುವುದು ನಮ್ಮ ಭಾಗ್ಯ ಎಂದು ಪಟ್ಟಣದ ದಳವಾಯಿ ರುದ್ರಮುನಿ ಜನಧ್ವನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
0 Comments