ಚಳ್ಳಕೆರೆ ಜನಧ್ವನಿ ವಾರ್ತೆ ಮೇ 4
ಜೆಡಿಎಸ್ ಪಕ್ಷದ ಕಾರ್ಯಕರ್ತರು ನನ್ನನ್ನು ಕಡೆಗಣಿಸಿದ್ದರಿಂದ ನಾನು ವಿಶ್ವಮಾನ, ಅಭಿವೃದ್ಧಿ ಹರಿಕಾರ ಬಿಜೆಪಿ ತತ್ವಸಿದ್ದಾಂತಗಳನ್ನು ಮೆಚ್ಚಿ ನಾನು ಬಿಜೆಪಿ ಪಕ್ಷದವನ್ನು ಸೇರಿದ್ದೇನೆ ಎಂದು ಮಾಜಿ ಜಿಪಂ ಸದಸ್ಯ ಮುತ್ತುರಾಜು ಹೇಳಿದರು.
ತುರನೂರು ಹೋಬಳಿ ಕೇಂದ್ರದಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ಬಿಜೆಪಿ ಪ್ರಮುಖರ ಸಭೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿ ನಂತರ ಮಂಡಲ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಜಿಪಂ ಸದಸ್ಯ ಅತಿ ಚಿಕ್ಕ ವಯಸ್ಸಿಗೆ ಯುವಕ ಎಂಬ ಹೆಗ್ಗಳಿಕೆ ಪಾತ್ರನಾಗಿ ಪರಶುರಾಂಪುರ ಹೋಬಳಿ ಕೇಂದ್ರದಲ್ಲಿ ಒಂದು ಜಿಪಂ , ನಾಲ್ಕು ತಾಪಂ ಸ್ಥಾನಗಳನ್ನು ಜೆಡಿಎಸ್ ಪಕ್ಷದಿಂದ ಗೆಲ್ಲಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ. ರವೀಶ್ಕುಮಾರ್ ಅತಿ ಹೆಚ್ಚು ಮತಗಳನ್ನು ಲೀಡ್ ಕೊಡುವ ಮೂಲಕ ಜೆಡಿಎಸ್ ಪಕ್ಷವನ್ನು ಸಂಘಟಿಸಿ ನನ್ನ ತಾತ ಮಾಜಿ ಸಚಿವ ಹಾಗೂ ಶಾಸಕ ಬಿಎಲ್ ಗೌಡರ ಹೆಸರು ಉಳಿಸಲು ಪರಶುರಾಂಪುರ ಹೋಬಳಿ ವ್ಯಾಪ್ತಿಯ ಟಿ.ಎನ್.ಕೋಟೆ ಗ್ರಾಮದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ, ಬಡಜನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಕೊಡಿಸಲು ಮನೆಬಾಗಿಲಿಗೆ ಆರೋಗ್ಯ ಸೇವೆ , ಜನರಿಗೆ ಸರಕಾರಿ ಇಲಾಕೆಯಲ್ಲಿನ ಸೌಲಭ್ಯಗಳನ್ನು ಕೊಡಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡಿದ್ದೆ.
ಇತ್ತೀಚಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಯಾವುದೇ ಸಭೆ ಸಮಾರಂಭಗಳಿಗೆ ಆಹ್ವಾನ ನಿಡದೆ ಕಡೆಗಣಿಸಿದ್ದರಿಂದ ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರಿದ್ದು ಈಗನ ನನಗೆ ಪರಶುರಾಂಪುರ ಹೋಬಳಿಕೇಂದ್ರವನ್ನು ಉಸ್ತುವರಿ ನೀಡಲಾಗಿದ್ದು ಕಳೆಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೇಗೆ ಹೆಚ್ಚು ಮತಗಳನ್ನು ಪಡೆಯಲು ಶ್ರಮಿಸಿದ್ದೇನೆ ಅದೇರೀತಿ ನನ್ನ ಅಭಿಮಾನಿಗಳ ಹಾಗೂ ಯುವಕರ ಸಹಕಾರದೊಂದಿಗೆ ಈ ಬಾರಿ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪರಶುರಾಂಪು ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಮತಗಳನ್ನು ನೀಡುವಂತೆ ಶ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ ಪರಶುರಾಂಪುರ ಜಿಪಂ ಮಾ
ಜಿ ಸದಸ್ಯ ಹಾಗೂ ಮಾಜಿ ಸಚಿವ ಶಾಸಕ ಬಿ,ಎಲ್ ,ಗೌಡರ ಮೊಮ್ಮಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಮತ್ತಷ್ಟು ನಮ್ಮ ಪಕ್ಷಕ್ಕೆ ಆನೆ ಬಲಬಂದಾಗಿದ್ದು ಇಂದಿನಿAದಲೇ ಅವರಿಗೆ ಪರಶುರಾಂಪುರ ಹೋಬಳಿ ಉಸ್ತುವರಿ ನೀಡಲಾಗಿದ್ದು ಅವರು ನಮ್ಮ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಗೆಲುವಿಗೆ ಶ್ರಮ ವಹಿಸುತ್ತಾರೆ ಈ ಬಾರಿ ಬಿಜಿಪಿ ಪಕ್ಷದ ಅನಿಲ್ ಕುಮಾರ್ ಗೆಲುವು ಖಚಿತ ಎಂದು ನುಡಿದರು.
ಈ ಸಂದರ್ಭದಲ್ಲಿ ಬಾಳೆಕಾಯಿ ರಾಮದಾಸ್, ಎಲೆ ಭದ್ರಣ್ಣ, ಸೇರಿದಂತೆ ಇತರರಿದ್ದರು.
0 Comments