![](https://janadhwani.in/wp-content/uploads/2023/02/Screenshot_20230224_150620-1024x563.png)
ಚಳ್ಳಕೆರೆ ಜನಧ್ವನಿ ವಾರ್ತೆ ಫೆ.24.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷ ಸೇರ್ಪಡೆ ಪರ್ವ ಜತೆಗೆ ಟಿಕೆಟ್ ಆಕಾಂಕ್ಷಿಗಳಿಂದ ಮತದಾರರನ್ನು ಓಲೈಸುವ ಕಸರತ್ತು ಜೋರಾಗಿ ನಡೆಯುತ್ತಿದೆ. ಹೌದು ಚಳ್ಳಕೆರೆ ಮೀಸಲಾತಿ ವಿಧಾನ ಸಭೆ ಕ್ಷೇತ್ರಕ್ಕೆ ಈಗಾಗಲೆ ಜೆಡಿಎಸ್ ಪಕ್ಷದಿಂದ ಎಂ.ರವೀಶ್ ಕುಮಾರ್ ಹೆಸರು ಘೋಷಣೆಯಾಗಿದು. ಕಾಂಗ್ರೆಸ್ ಪಕ್ಷದಿಂದ ಮೂರುನೇ ಅವದಿಗೆ ಶಾಸಕ ಟಿ.ರಘುಮೂರ್ತಿ ಕಾಂಗ್ರಸ್ ಪಕ್ಷದಿಂದ ಏಕೈಕ ಆಕಾಂಕ್ಷಿಯಾಗಿದ್ದು ಕಾಂಗ್ರೇಸ್ ಪಕ್ಷದಿಂದ ಟಿಕೇಟ್ ಪೈಪೋಟಿ ಇಲ್ಲವಾಗಿದೆ. ಬಿಜೆಪಿ ಪಕ್ಷದಲ್ಲಿ ಟಿಕೇಟ್ ಆಂಕಾAಕ್ಷಿಗಳು ಹೆಚ್ಚಾಗಿದ್ದುಯಾರಿಗೆ ಟಿಕೇಟ್ ಎಂದು ಘೋಷಣೆ ಮಾಡದೆ ಇರುವುದು ಆಕಾಂಕ್ಷಿಗಳಲ್ಲಿ ತಳಮಳದೊಂದಿಗೆ ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ.
![](https://janadhwani.in/wp-content/uploads/2023/02/Screenshot_20230224_150623-1024x563.png)
ಇನ್ನೂ ಬಿಜೆಪಿ ಪಕ್ಷದಲ್ಲಿ ಯಾರು ಅಭ್ಯರ್ಥಿ ಎನ್ನುವುದೇ ಫೈನಲ್ ಆಗಿರದಿದ್ದರೂ ಆಕಾಂಕ್ಷಿಗಳAತೂ ಜಿದ್ದಾಜಿದ್ದಿಗೆ ಬಿದ್ದು ಮತದಾರರನ್ನು ಸೆಳೆಯಲು ಜಾತ್ರೆ, ನಾಟಕ ,ಹಬ್ಬ, ಕ್ರೀಡೆಗಳ ಆಯೋಜನೆಗೆ ಹಣದ ಹೊಳೆ ಹರಿಸುತ್ತಿದ್ದಾರೆ.
ಮಹಿಳೆಯರಿಗೆ ತಿಮ್ಮನ ದರ್ಶನ ಭಾಗ್ಯ.
ಜೆಡಿಎಸ್ ಅಭ್ಯರ್ಥಿ ಎಂ. ರವೀಶ್ ಕುಮಾರ್ ಅವರು ಮಹಿಳಾ ಸಂಘದ ಪದಾಧಿಕಾರಿಗಳಿಗೆ ದೇವರ ಧರ್ಶನ ಭಾಗ್ಯ ಕಲ್ಪಿಸಿದ್ದಾರೆ.
ತಾಲ್ಲೂಕಿನ ನಗರಂಗೆರೆ ಗ್ರಾಪಂ ವ್ಯಾಪ್ತಿಯ ಉಪ್ಪಾರಹಟ್ಟಿ, ದಾಸನಾಯಕನಹಟ್ಟಿ, ಗಾನಪ್ಪನಹಟ್ಟಿ, ಕೆಂಚವೀರನಹಳ್ಳಿ ಮಹಿಳಾ ಸಂಘದ ಪದಾಧಿಕಾರಿಗಳಿಗೆ ಮಾಜಿ ಶಾಸಕ ಬಸವರಾಜು ಮಂಡಿಮಠ್ ಮಾರ್ಗದರ್ಶನದಲ್ಲಿ ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಲು ಎರಡು ಬಸ್ಗಳ ವ್ಯವಸ್ಥೆ ಮಾಡಿಕಳಿಸಿದ್ದಾರೆ.
ನಗರದಲ್ಲಿ ಮಾಜಿ ಶಾಸಕ ಬಸವರಾಜು ಮಂಡಿಮಠ್ ಮಿಲ್ ಆವರಣದಲ್ಲಿ ಮಹಿಳಾ ಸಂಘದ ನೂರಾರು ಪದಾಧಿಕಾರಿಗಳು ಬಸ್ ಗಳ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರವಾಸಕ್ಕೆ ಮಾಜಿ ಶಾಸಕ ಬಸವರಾಜು ಮಂಡಿಮಠ್, ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಬೀಳ್ಕೋಟ್ಟರು.
![](https://janadhwani.in/wp-content/uploads/2023/02/Screenshot_20230224_150632-1024x563.png)
0 Comments