ಚಳ್ಳಕೆರೆ ಜನಧ್ವನಿ ವಾರ್ತೆ ಡಿ.22. ಗ್ರಾಮಪಂಚಾಯಿ ವ್ಯಾಪ್ತಿಯ ಸಾರ್ವ ಜನಿಕ ಆಸ್ತಿಗಳಾದ ರಸ್ತೆ.ಚರಂಡಿ ಒತ್ತುವರಿ ಮಾಡಿದರೆ ಕಾನೂನು ಕ್ರಮಕೈಕೊಳ್ಳುವುದಾಗಿ ತಾಪಂ ಇಒ ಶಶಿಧರ್ ಎಚ್ಚರಿಕೆ ನೀಡಿದ್ದಾರೆ. ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಪಂ ವ್ಯಾಪ್ತಿಯ ಹಾಲಿಗೊಂಡನಹಳ್ಳಿಗ್ರಾಮದ ಕುಟುಂಬವೊಂದು ವಸತಿಯೋಜನೆಯ ಬಿಲ್ ಮಾಡಲು ಗ್ರಾಪಂ ಮಹಿಳಾ ಸದಸ್ಯೆ ಪತಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಾಲೂಕು ಪಂಚಾಯತಿ ಇಒ ಶಶಿಧರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳಾ ಸದಸ್ಯೆಯ ಪತಿ ಹನುಂತರಾಯ ಮನೆ ನಿರ್ಮಾಣಕ್ಕೆ ಮುಂದಾಗಿದ್ದು ಅಕ್ಕಪಕ್ಕದವರು ರಸ್ತೆಗೆ ಮೂರಡಿ ಜಾಗ ಒತ್ತುವರಿ ಮಾಡಿಕೊಂಡಿರುವುದರಿಂದ ತೆರವುಗೊಳಿಸಲು ಅರ್ಜಿ ನೀಡಿದ್ದಾರೆ. ಅದನ್ನು ವಿರೋಧಿಸಿ ಮಹಿಳಾ ಸದಸ್ಯೆಯ ಪತಿ ಮೇಲೆ ವಸತಿ ಯೋಜನೆಯ ಬಿಲ್ ಪಾವತಿಗೆ 30 ಸಾವಿರ ರೂ ಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಾಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿ ಭಟನೆ ನಡೆಸಿದ್ದರು ಇಒ ಗ್ರಾಮಕ್ಕೆ ಭೇಟಿ ನೀಡಿದಾಗ ರಸ್ತೆ ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿದ್ದು ರಸ್ತೆ ಒತ್ತುವರಿ ಮೂರು ಅಡಿ ಜಾಗವನ್ನು ಬೆರಗುಗೊಳಿಸುವಂತೆ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ ಇಬ್ಬರೂ ಒತ್ತುವರಿ ತೆರವುಗೊಳಿಸುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ರಸ್ತೆ ಒತ್ತುವರಿ ವಿವಾದ ಇಬ್ಬರ ನಡುವೆ ಬಹಳ ದಿನಗಳಿಂದ ಇದೆ ಎಂದು ಕರೆಯಲಾಗುತ್ತದೆ ತಿಳಿದು ಬಂದಿದೆ. ಈಗಲಾದರೂ ಗ್ರಾಮೀಣ ಭಾಗದಲ್ಲಿ ರಸ್ತೆ ಚರಂಡಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುವ ಮುನ್ನವೇ ಎಚ್ಚತ್ತು ನಿರ್ಮಿಸಕು ಗ್ರಾಪಂ ಆಡೀತ ಜನರಿಗೆ ಎಚ್ಚರಿಕೆ ನೀಡ ಬೇಕಿದೆ.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್. ಪಿಡಿಒ ವೇದವ್ಯಾಸಲು ಇತರರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments