ಚಳ್ಳಕೆರೆ ಜನಧ್ವನಿ ವಾರ್ತೆ ಮಾ.15
ಕೈದಿಗಳಿಂದ ಜೈಲರ್ ಮನೆಕೆಲಸ, ದೊಡ್ಡ ಹುದ್ದೆಯ ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು, ತರಕಾರಿ ಸೇರಿದಂತೆ ಮನೆಕೆಲಸಕ್ಕೆ ಇಟ್ಟುಕೊಳ್ಳುವುದನ್ನು ನೋಡಿದ್ದೇವೆ ಓದಿದ್ದೇವೆ ಆದರೆ ಇಲ್ಲೊಬ್ಬ ಮಹಿಳಾ ಅಧಿಕಾರಿ ಕಚೇರಿ ಸಿಬ್ಬಂದಿಗಳಿAದ ಸರಕಾರಿ ವಸತಿ ಗೃಹ ದುರಸ್ಥಿ ಕೆಲಸಕ್ಕೆ ಇಟ್ಟುಕೊಂಡಿರುವುದು ಬೆಳೆಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ನಗರಸಭೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯಾಧಿಕಾರಿ ಗೀತ ವಿವಾದಕ್ಕೆ ಸಿಲಿಕಿಕೊಂಡಿರುವ ಅಧಿಕಾರಿಯಾಗಿದ್ದಾರೆ. ಕಚೇರಿಯ ಪೌರಕಾರ್ಮಿಕರಿಂದ ವಸತಿ ಗೃಹ ದುರಸ್ಥಿಕಾರ್ಯ ಮಾಡಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೌರಾಯುಕ್ತ ರಾಮಕೃಷ್ಣ ಬುಧವಾರ ವಸತಿ ಗೃಹ ದುರಸ್ಥಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದಾಗ ಇಬ್ಬರು ಪೌರಕಾರ್ಮಿಕರು ಮನೆ ದುಸ್ಥಿ ಕಾರ್ಯದಲ್ಲಿ ತೊಡಗಿರುವುದು ಕಂದು ಬಂದು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಯಾವುದೇ ಹಳೆ ಕಟ್ಟಡ ದುರಸ್ಥಿ, ನೂತನ ಕಟ್ಟಡ ಹಾಗಳು ಪಾಳು ಬಿದ್ದ ಕಟ್ಟಡವನ್ನು ತೆರವುಗೊಳಿಸ ಬೇಕಾದರೆ ನಗರಸಭೆವತಿಯಿಂದ ನಿಗಧಿತ ಶುಲ್ಕ ಕಟ್ಟಿ ಕಟ್ಟಡ ಕಾಮಗಾರಿ ಪ್ರಾರಂಭಿಸ ಬೇಕು ಎಂಬ ನಿಯವಿದೆ ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸರಕಾರಿ ವಸತಿ ಗೃಹವನ್ನು ಯಾವುದೇ ಪರವಾನಿಗೆ ಪಡೆಯದೆ ಪೌರಕಾರ್ಮಿಕರಿಗೆ ಕಟ್ಟಡ ದುರಸ್ಥಿ
ನಗರಸಭಾ ಕಿರಿಯ ಆರೋಗ್ಯ ನಿರೀಕ್ಷಕಿ ಗೀತಾ ಅವರು ಕ್ವಾಟರ್ಸ್ ನವೀಕರಣ ಕಾರ್ಯದಲ್ಲಿ ಸಿಮೆಂಟ್ ಮತ್ತು ಕಟ್ಟಡ ಕೆಲಸ ಮಾಡಿಸುತ್ತಿದ್ದು ಪೌರಕಾರ್ಮಿಕರನ್ನು ಯಾವುದೇ ಅನುಮತಿ ಇಲ್ಲದೆ ಮನೆ ಕಟ್ಟುವ ಕೆಲಸಕ್ಕೆ ಹೇಗೆ ಬಳಸಿಕೊಳ್ಳಲಾಯಿತು. ಮೇಲಾಗಿ, ನಗರಸಭಾ ವ್ಯಾಪ್ತಿಗೆ ಸೇರಿರುವ ವಸತಿ ಗೃಹ ನವೀಕರಣಕ್ಕೆ ಯಾವುದೇ ಮಂಜೂರಾತಿ ಪಡೆದುಕೊಂಡಿಲ್ಲ. ಏಕಾಏಕಿ ನಿಮ್ಮ ಇಚ್ಚೆಯಂತೆ ಕಟ್ಟಡ ನವೀಕರಣ ಹೇಗೆ ಮಾಡಿಸುತ್ತಿದ್ದೀರಾ? ಪೌರಕಾರ್ಮಿಕರ ಹಾಜರಾತಿ ಪರಿಶೀಲನೆ ಮಾಡಿದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ನೀವು ಹೊಣೆ ಆಗಬೇಕಾಗುತ್ತದೆ ಎಂದು ಸಿಬ್ಬಂದಿ ಗೀತಾ ಅವರಿಗೆ ಪೌರಾಯುಕ್ತ ರಾಮಕೃಷ್ಣ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಪೌರಾಯುಕ್ತರ ಪ್ರಶ್ನೆಗೆ ಗೀತಾ ಮಾತನಾಡಿ ಅವರ ಕರ್ತವ್ಯ ಮುಗಿದ ನಂತರ ಊಟದ ಸಮಯದಲ್ಲಿ ಇಲ್ಲಿನ ಮನೆ ಕೆಲಸಕ್ಕೆ ಬರುತ್ತಾರೆ. ಇದಕ್ಕೆ ೫೦೦ ರೂಪಾಯಿ ಕೂಲಿ ಕೊಡುತ್ತೇನೆ ಎಂದು ಸಮಜಾಯಿಷಿ ನೀಡಿದ್ದನ್ನು ತಳ್ಳಿ ಹಾಕಿದ ಪೌರಾಯುಕ್ತರು, ಅದೇ ಕೂಲಿ ಹಣವನ್ನು ಬೇರೆ ಕೂಲಿಕಾರ್ಮಿಕರಿಗೆ ಕೊಟ್ಟು ಕೆಲಸ ಮಾಡಿಕೊಳ್ಳಬಹುದಿತ್ತು ಅಷ್ಟಕ್ಕೂ ಕಚೇರಿ ಪೌರಕಾರ್ಮಿಕರನ್ನು ಬಳಸಿಕೊಂಡು ಅಧಿಕಾರವನ್ನು ದುರಪಯೋಗ ಪಡಿಸಿಕೊಂಡಿದ್ದೀರಿ ಇದು ನಿಮ್ಮ ಉತ್ತರವಲ್ಲ ನೋಟಿಸ್ ಗೆ ಉತ್ತರ ನೀಡುವಂತೆ ತಿಳಿಸಿದರು.
ನಗರಸಭಾ ಮಾಜಿ ಉಪಾಧ್ಯಕ್ಷ ಟಿ. ವಿಜಯಕುಮಾರ್ ಮಾತನಾಡಿ, ಹೊರಗುತ್ತಿಗೆ ನೌಕರರ ಪೌರಕಾರ್ಮಿಕರು ಸೇರಿದಂತೆ ನಗರಸಭಾ ನಿರ್ವಹಣೆ ಪರಿಸರ ಅಭಿಯಂತರ ನರೇಂದ್ರಬಾಬು ಅವರು ನೋಡಿಕೊಳ್ಳಲಾಗುತ್ತಿದೆ. ಒಂದು ವಾರದಿಂದ ಪೌರಕಾರ್ಮಿಕರನ್ನು ನಿಯಮಬಾಹೀರವಾಗಿ ಸಿಮೆಂಟ್ ಮತ್ತು ಕಟ್ಟಡ ಕಟ್ಟುವ ಕೆಲಸಕ್ಕೆ ತೊಡಗಿಸಲಾಗಿದೆ. ಪೌರಕಾರ್ಮಿಕರ ಸೇವೆಯಲ್ಲಿ ಇಬ್ಬರು ನಿರಂತರವಾಗಿ ಕರ್ತವ್ಯಕ್ಕೆ ಹಾಜರಾಗದಿದ್ದರೂ, ವೇತನ ನೀಡಲಾಗುತ್ತಿದೆ. ಇದನ್ನು ಪರಿಶೀಲನೆ ಮಾಡಬೇಕು. ನಗರಸಭೆಗೆ ಸೇರಿರುವ ವಸತಿ ಗೃಹ ನವೀಕರಣಕ್ಕೆ ಟೆಂಡರ್ ಪ್ರಕ್ರಿಯೆ ಮಾಡಿಕೊಂಡಿಲ್ಲ. ಪೌರಕಾರ್ಮಿಕರ ಸೇವೆಯನ್ನು ದುರುಪಯೋಗ ಮಾಡಿಕೊಂಡಿರುವ ನರೇಂದ್ರಬಾಬು ಅವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ದೂರು ಮಾಡಲಾಗುತ್ತದೆ ಎಂದು ಆಗ್ರಹಿಸಿದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments