ಚಳ್ಳಕೆರೆ: ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಜೈನ ಸಮುದಾಯ ವತಿಯಿಂದ ಇಂದು ಮಹಾವೀರ ಜಯಂತಿಯನ್ನು ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು
ಈ ವೇಳೆ ತಹಶೀಲ್ದಾರ್ ರೆಹಾನ್ ಪಾಷಾ ಮಾತನಾಡಿ ಮಹಾವೀರರ ಸತ್ಯ ಮತ್ತು ಅಹಿಂಸಾ ತತ್ವವನ್ನು ನಾವೆಲ್ಲರೂ ಇಂದು ಮೈಗೂಡಿಸಿಕೊಳ್ಳಬೇಕಿದೆ ಮಹಾವೀರರ ತತ್ವ ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾಡಿನ ಜನತೆ ಸಾಗಬೇಕಿದೆ ಜೈನ ಸಮುದಾಯ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ನೆಲೆ ಕಂಡುಕೊಳ್ಳಬೇಕಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಜೈನ ಸಮುದಾಯದ ಡಿ ಅಂಬಣ್ಣ ಹಾಗೂ ಚಂಪಲಾಲ್ ಮತ್ತು ಚಳ್ಳಕೆರೆ ಜೈನ ಸಮಾಜದ ಸರ್ವ ಮುಖಂಡರು, ತಾಲೂಕು ಕಚೇರಿಯ ಸಿಬ್ಬಂದಿಯವರು ಇತರರು ಭಾಗವಹಿಸಿದ್ದರು.
0 Comments