ನಾಯಕನಹಟ್ಟಿ. ಸಮೀಪದ ಮಲ್ಲೂರಹಟ್ಟಿ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ಜಾತ್ರೆ ವಿಜೃಂಭಣೆಯಿಂದ ಆಚರಿಸಲಾಯಿತು. ಎಂದು ಶ್ರೀ ಬಾಳೇ ಬಂದಮ್ಮ ಸೇವಾ ಅಧ್ಯಕ್ಷ ಬಿ ಶಂಕರಪ್ಪ ತಿಳಿಸಿದರು
ಅವರು ಮಲ್ಲೂರ ಹಟ್ಟಿ ಗ್ರಾಮದ ಶ್ರೀ ಬನಶಂಕರಿ ದೇವಿ ಗಂಗಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರೀ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಶುಕ್ರವಾರ ಕಂಕಣ ಧಾರಣೆ ಗಣಪತಿ ಪೂಜೆ ಮಂಟಪ ಪೂಜೆ ನಂತರ ಶ್ರೀದೇವಿಯ ಉಲಾಯಿಗೆ ಹೊರಟಿತು.
ಶನಿವಾರ ಬೆಳಗ್ಗೆ ಗಂಗಾ ಪೂಜೆಯೊಂದಿಗೆ ಪೂಜಾ ವಿಧಿ ವಿಧಾನಗಳ ಆರಂಭವಾಗಿ ಮಧ್ಯಾಹ್ನ 11.ಗಂಟೆಗೆ ಗೂಂಚಿಗಾರ್ ಮನೆಯಿಂದ ಗುಡಿಗೆ ಬಲಿಯನ್ನ ಹಾಕುವುದು 12 ಗಂಟೆಯಿಂದ ಸಕಲ ವಿರುದ್ಧವಾಗಿಗಳೊಂದಿಗೆ ಶ್ರೀದೇವಿಯ ಹೊಳೆಯ ಪೂಜೆ ಮುತ್ತೈದೆಯರಿಗೆ ಉಡಿ ತುಂಬಿ ಅದ್ದೂರಿ ಮೆರವಣಿಗೆ ಮೂಲಕ ವಿವಿಧ ವೀರಗಾಸೆ ತಮಟೆ ಉರುಮೆ ಜಾನಪದ ಕಲಾ ತಂಡಗಳೊಂದಿಗೆ ಗ್ರಾಮಕ್ಕೆ ಕರೆತರಲಾಯಿತು. ರಾತ್ರಿ 8 ಗಂಟೆಗೆ ಶ್ರೀದೇವಿಯ ತೂಗು ಮಂಚದಲ್ಲಿ ಪಾವಡಿಸಿ ರಾತ್ರಿ ಮದಲ್ಸಿ ನಂತರ ದೀಪಾ ಬೆಳಗಲಾಗುವುದು ಎಂದರು.
![](https://janadhwani.in/wp-content/uploads/2024/02/IMG-20240218-WA0062.jpg)
ಭಾನುವಾರ ಬೆಳಿಗ್ಗೆ 10:30 ಕ್ಕೆ ಸಕಲ ಬಿರುದಾವಳಿಗಳೊಂದಿಗೆ ಓಕಳಿ ನಂತರ ಗುಡಿ ತುಂಬುವುದು ಅಣ್ಣ- ತಮ್ಮಗಳ ಹಿರಿಯರು ವಿಶೇಷವಾದ ಪೂಜೆ ಆರತಿ ಶ್ರೀ ಬನಶಂಕರಿ ದೇವಿಯ ಎಡೆ ಹಾಕುವುದು ನಂತರ ಮಹಾ ಮಂಗಳಾರತಿಯೊಂದಿಗೆ ಜಾತ್ರೆ ಮುಕ್ತಾಯಗೊಳ್ಳುವುದು ಎಂದು ಶ್ರೀ ಬಾಳೇ ಬಂದಮ್ಮ ಸೇವಾ ಸಮಿತಿಯ ಕಾರ್ಯದರ್ಶಿ ಎಸ್ ತಿಪ್ಪೇಸ್ವಾಮಿ ತಿಳಿಸಿದರು.
ನೂರಾರು ಭಕ್ತರು ಗ್ರಾಮಸ್ಥರು ಶ್ರೀ ಬನಶಂಕರಿ ದೇವಿಯ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿ ಭಕ್ತಿಯನ್ನ ಸಮರ್ಪಿಸಿದರು.
ಇನ್ನೂ ಶ್ರೀ ಬಾಳೆ ಬಂದಮ್ಮ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಜಾತ್ರೆಗೆ ಬಂದಂತಹ ಭಕ್ತಾದಿಗಳಿಗೆ ಮೂರು ದಿನಗಳ ಕಾಲ ಅನ್ನದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಯಿತು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ರಾಧಮ್ಮ ಬೋರಣ್ಣ, ಸದಸ್ಯ ಕೆಂಗ ರುದ್ರಪ್ಪ, ಗೌಡ್ರು ತಿಪ್ಪೇಸ್ವಾಮಿ, ಯುವ ಮುಖಂಡ ನಾಗರಾಜ್, ಶ್ರೀ ಬಾಳೇ ಬಂದಮ್ಮ ದೇವಸ್ಥಾನ ಸೇವಾ ಸಮಿತಿಯ ನಿರ್ದೇಶಕರಾದ ಎಂ ಎಸ್ ವಸಂತ, ಎಂ ಟಿ ಶಂಕ್ರಪ್ಪ, ಎಂ ಬಿ ರುದ್ರಮನಿ, ಎಂ ವಿ ನಾಗೇಂದ್ರಪ್ಪ, ಎಂ ಮುಷ್ಟೂರಪ್ಪ, ರಾಜಪ್ಪ, ಪೂಜಾರಿ ತಿಪ್ಪೇಸ್ವಾಮಿ ಸೇರಿದಂತೆ ಮಲ್ಲೂರಹಟ್ಟಿ ಗ್ರಾಮದ ಸಮಸ್ತ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
0 Comments