ಮರಗಳಿಂದ ಕೃಷಿಪರಿಕರ ಮಾಡುವುದನ್ನು ಬಿಟ್ಟು ಕಬ್ಬಿಣದಿಂದ ಕೃಷಿಪರಿಕರ ಮಾಡಿ ಮಾರಾಟ ನಾಡುವಂತೆ ಪ್ರಭಾಕರ ಮ್ಯಾಸನಾಯಕ ಪರಿಸರದ ಬಗ್ಗೆ ಜಾಗೃತಿ

by | 03/03/23 | ಜನಧ್ವನಿ


ಮೊಳಕಾಲ್ಮೂರು ಜನಧ್ವನಿವಾರ್ತೆ ಮಾ.3
ಹಳ್ಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದ ಹಲವು ಮರಗಳು ಕಣ್ಮರೆಯಾಗುತ್ತಿದ್ದು ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು ಮರ ಗಿಡಗನ್ನು ಉಳಿಸುವಂತೆ ಬಿಜೆಪಿ ಆಕಾಂಕ್ಷಿ ಪ್ರಭಕಾರ ಮ್ಯಾಸನಾಯಕ ಕಿವಿಮಾತು ಹೇಳಿದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಸಂತೆಗುಡ್ಡ ಗ್ರಾಮ ಪಂಚಾಯಿತಿ ಬಾಂಡ್ರವಿ ಗ್ರಾಮದಲ್ಲಿ ಲಿಂಗಾರೆಡ್ಡಿ ಎಂಬ ವ್ಯಕ್ತಿ ಸುತ್ತಮುತ್ತ ರೈತರ ಜಮೀನಿನಲ್ಲಿರುವ ಮರಗಳನ್ನು ಕಡಿದುಕೊಂಡು ಬಂದು ಕೃಷಿ ಪರಿಕರಗಳನ್ನು ತಯಾರಿಸುತ್ತಿರುವುದನ್ನು ಗಮನಿಸಿ 5 ಲಕ್ಷ ರೂ ಸಾಲ ಸೌಲಭ್ಯ ನೀಡಿ ಕೃಷಿ ಪರಿಕರಗಳನ್ನು ಕಬ್ಬಿಣದಿಂದ ತಯಾರಿಸಿ ಮಾರಾಟ ಮಾಡುವಂತೆ ಸಲಹೆ ನೀಡಿದ್ದಾರೆ. ಪೂರ್ವಜರ ಕಾಲದಲ್ಲಿ ಜಮೀನಿನ ಬದುಗಳಲ್ಲಿ ಸಾಕಷ್ಟು ಮರಗಿಡಗಳನ್ನು ಬೆಳೆಸುತ್ತಿದ್ದರು ಇದರಿಂದ ಬಿಸಿಲಿನ ತಾಪ ಕಡಿಯಾಗಿ ಮಳೆಯೂಸ ಸಕಾಲಕ್ಕೆ ಬರುತ್ತಿತ್ತು ಇತ್ತೀಚೆಗೆ ಗಿಡಮರಗಳನ್ನು ಹಾಗೂ ಬದುಗಳನ್ನು ಸಹ ತೆಗೆಯಲಾಗುತ್ತಿದೆ . ಪ್ರತಿಯೊಬ್ಬರು ಪ್ರಕೃತಿಯನ್ನು ರಕ್ಷಣೆ ಮಾಡಬೇಕಿದೆ ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳು ನಾಷವಾಗುತ್ತಿವೆ. ಮರಗಿಡಗಳನ್ನು ಕಡಿದು ತಂದು ಕೃಷಿಪರಿಕರ ಮಾಡಿ ಮಾರಾಟ ಮಾಡುತ್ತಿರುವುದನ್ನು ಮಡು ಇನ್ನು ಮುಂದೆ ಮರಗಳಿಂದ ಕೃಷಿಪರಿಕರ ಮಾಡುವುದನ್ನು ಬಿಟ್ಟು ಕಬ್ಬಿಣದಿಂದ ಕೃಷಿಪರಿಕರ ಮಾಡಿ ಮಾರಾಟ ನಾಡುವಂತೆ ಪ್ರಭಾಕರ ಮ್ಯಾಸನಾಯಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಮರದಿಂದ ಮಳೆ, ಉತ್ತಮ ಗಾಳಿ, ಹಸಿರು ಸಿಗುತ್ತದೆ ಜೊತೆಗೆ ನಮ್ಮಗಳ ಆರೋಗ್ಯಕ್ಕೆ ಪೂರಕವಾಗಿ ಮರಗಳು ಪ್ರತಿ ನಿತ್ಯ ಅತ್ಯವಶ್ಯಕ. ಹಾಗೂ ಮುಂದಿನ ಪೀಳಿಗೆಗೆ ನಷ್ಟ ಉಂಟು ಮಾಡಿದ ಹಾಗೆ ಎಂದು ತಿಳಿಸಿದರು.
ಪ್ರತಿನಿತ್ಯ ನೀನು ಹತ್ತಾರು ಮರಗಳನ್ನು ಕಡಿಯುವುದರಿಂದ ಭೂಮಿ ಮತ್ತಷ್ಟು ಬರಡಾಗುತ್ತದೆ. ದಯವಿಟ್ಟು ತಾವು ಮರ ಕಡಿಯುವುದನ್ನು ಮತ್ತು ಮರದಲ್ಲಿ ಕೃಷಿ ಪರಿಕರಗಳನ್ನು ಮಾಡಿ ಸಾಗಾಟ ಮಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಇದೇ ಕೆಲಸ ಕಬ್ಬಿಣದಲ್ಲಿ ಮಾಡಿ ಅದಕ್ಕೆ ಪೂರಕವಾಗಿ ನಾನು ಸಾಲ ಸೌಲಭ್ಯ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ಈ ಬಗ್ಗೆ ಸ್ಥಳೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಪ್ರಭಾಕರ ಅವರು ಹೇಳಿದಂತೆ ಮಾಡು ಎಂದು ಲಿಂಗಾರೆಡ್ಡಿ ಅವರಿಗೆ ಮನವೊಲಿಸಿದರು.
ಈ ವಿಚಾರವಾಗಿ. ಸ್ಥಳದಲ್ಲೇ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ಮರ ಉಳಿಸಿ ಬೆಳೆಸುವ ಸಲುವಾಗಿ ತಾವು ಕಬ್ಬಿಣದ ಅಂಗಡಿಗೆ ರೂ 5.00 ಲಕ್ಷ ಸಾಲ ಮಂಜೂರಾತಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರು ಸಾಲ ಕೊಡಿಸುವುದಾಗಿ ಹೇಳಿ ತಮ್ಮೇನಹಳ್ಳಿಯಲ್ಲಿ ಇರುವ ಎಸ್‌ಬಿಐ ಶಾಖೆಗೆ ಭೇಟಿ ಮಾಡಲು ತಿಳಿಸಿದರು. ಇಂದು ಮಾನ್ಯ ಲಿಂಗಾರೆಡ್ಡಿ ಅವರು ದಾಖಲೆ ಸಮೇತ ಬ್ಯಾಂಕಿಗೆ ಹೋಗಿದ್ದಾರೆ.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page