ಮೊಳಕಾಲ್ಮೂರು ಜನಧ್ವನಿವಾರ್ತೆ ಮಾ.3
ಹಳ್ಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿದ್ದ ಹಲವು ಮರಗಳು ಕಣ್ಮರೆಯಾಗುತ್ತಿದ್ದು ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು ಮರ ಗಿಡಗನ್ನು ಉಳಿಸುವಂತೆ ಬಿಜೆಪಿ ಆಕಾಂಕ್ಷಿ ಪ್ರಭಕಾರ ಮ್ಯಾಸನಾಯಕ ಕಿವಿಮಾತು ಹೇಳಿದರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಸಂತೆಗುಡ್ಡ ಗ್ರಾಮ ಪಂಚಾಯಿತಿ ಬಾಂಡ್ರವಿ ಗ್ರಾಮದಲ್ಲಿ ಲಿಂಗಾರೆಡ್ಡಿ ಎಂಬ ವ್ಯಕ್ತಿ ಸುತ್ತಮುತ್ತ ರೈತರ ಜಮೀನಿನಲ್ಲಿರುವ ಮರಗಳನ್ನು ಕಡಿದುಕೊಂಡು ಬಂದು ಕೃಷಿ ಪರಿಕರಗಳನ್ನು ತಯಾರಿಸುತ್ತಿರುವುದನ್ನು ಗಮನಿಸಿ 5 ಲಕ್ಷ ರೂ ಸಾಲ ಸೌಲಭ್ಯ ನೀಡಿ ಕೃಷಿ ಪರಿಕರಗಳನ್ನು ಕಬ್ಬಿಣದಿಂದ ತಯಾರಿಸಿ ಮಾರಾಟ ಮಾಡುವಂತೆ ಸಲಹೆ ನೀಡಿದ್ದಾರೆ. ಪೂರ್ವಜರ ಕಾಲದಲ್ಲಿ ಜಮೀನಿನ ಬದುಗಳಲ್ಲಿ ಸಾಕಷ್ಟು ಮರಗಿಡಗಳನ್ನು ಬೆಳೆಸುತ್ತಿದ್ದರು ಇದರಿಂದ ಬಿಸಿಲಿನ ತಾಪ ಕಡಿಯಾಗಿ ಮಳೆಯೂಸ ಸಕಾಲಕ್ಕೆ ಬರುತ್ತಿತ್ತು ಇತ್ತೀಚೆಗೆ ಗಿಡಮರಗಳನ್ನು ಹಾಗೂ ಬದುಗಳನ್ನು ಸಹ ತೆಗೆಯಲಾಗುತ್ತಿದೆ . ಪ್ರತಿಯೊಬ್ಬರು ಪ್ರಕೃತಿಯನ್ನು ರಕ್ಷಣೆ ಮಾಡಬೇಕಿದೆ ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳು ನಾಷವಾಗುತ್ತಿವೆ. ಮರಗಿಡಗಳನ್ನು ಕಡಿದು ತಂದು ಕೃಷಿಪರಿಕರ ಮಾಡಿ ಮಾರಾಟ ಮಾಡುತ್ತಿರುವುದನ್ನು ಮಡು ಇನ್ನು ಮುಂದೆ ಮರಗಳಿಂದ ಕೃಷಿಪರಿಕರ ಮಾಡುವುದನ್ನು ಬಿಟ್ಟು ಕಬ್ಬಿಣದಿಂದ ಕೃಷಿಪರಿಕರ ಮಾಡಿ ಮಾರಾಟ ನಾಡುವಂತೆ ಪ್ರಭಾಕರ ಮ್ಯಾಸನಾಯಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಮರದಿಂದ ಮಳೆ, ಉತ್ತಮ ಗಾಳಿ, ಹಸಿರು ಸಿಗುತ್ತದೆ ಜೊತೆಗೆ ನಮ್ಮಗಳ ಆರೋಗ್ಯಕ್ಕೆ ಪೂರಕವಾಗಿ ಮರಗಳು ಪ್ರತಿ ನಿತ್ಯ ಅತ್ಯವಶ್ಯಕ. ಹಾಗೂ ಮುಂದಿನ ಪೀಳಿಗೆಗೆ ನಷ್ಟ ಉಂಟು ಮಾಡಿದ ಹಾಗೆ ಎಂದು ತಿಳಿಸಿದರು.
ಪ್ರತಿನಿತ್ಯ ನೀನು ಹತ್ತಾರು ಮರಗಳನ್ನು ಕಡಿಯುವುದರಿಂದ ಭೂಮಿ ಮತ್ತಷ್ಟು ಬರಡಾಗುತ್ತದೆ. ದಯವಿಟ್ಟು ತಾವು ಮರ ಕಡಿಯುವುದನ್ನು ಮತ್ತು ಮರದಲ್ಲಿ ಕೃಷಿ ಪರಿಕರಗಳನ್ನು ಮಾಡಿ ಸಾಗಾಟ ಮಾಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಇದೇ ಕೆಲಸ ಕಬ್ಬಿಣದಲ್ಲಿ ಮಾಡಿ ಅದಕ್ಕೆ ಪೂರಕವಾಗಿ ನಾನು ಸಾಲ ಸೌಲಭ್ಯ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ಈ ಬಗ್ಗೆ ಸ್ಥಳೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಪ್ರಭಾಕರ ಅವರು ಹೇಳಿದಂತೆ ಮಾಡು ಎಂದು ಲಿಂಗಾರೆಡ್ಡಿ ಅವರಿಗೆ ಮನವೊಲಿಸಿದರು.
ಈ ವಿಚಾರವಾಗಿ. ಸ್ಥಳದಲ್ಲೇ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ಮರ ಉಳಿಸಿ ಬೆಳೆಸುವ ಸಲುವಾಗಿ ತಾವು ಕಬ್ಬಿಣದ ಅಂಗಡಿಗೆ ರೂ 5.00 ಲಕ್ಷ ಸಾಲ ಮಂಜೂರಾತಿಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರು ಸಾಲ ಕೊಡಿಸುವುದಾಗಿ ಹೇಳಿ ತಮ್ಮೇನಹಳ್ಳಿಯಲ್ಲಿ ಇರುವ ಎಸ್ಬಿಐ ಶಾಖೆಗೆ ಭೇಟಿ ಮಾಡಲು ತಿಳಿಸಿದರು. ಇಂದು ಮಾನ್ಯ ಲಿಂಗಾರೆಡ್ಡಿ ಅವರು ದಾಖಲೆ ಸಮೇತ ಬ್ಯಾಂಕಿಗೆ ಹೋಗಿದ್ದಾರೆ.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments