ಚಳ್ಳಕೆರೆ ಜ.10 ನೆಶೆ ಮುಕ್ತ ಜಿಲ್ಲೆ. ನೆಶೆ ಮುಕ್ತ ತಾಲೂಕು ಘೋಷಣೆ ಹೆಸರಿನಲ್ಲಿ ಪೋಲಿಸ್ ಇಲಾಖೆ ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಕಾನೂನು ಬಾಹಿರ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬೆನ್ನಲ್ಲೆ ಮನೆ ಮುಂದೆ ಗಾಂಜ ಬೆಳೆದಿರುವುದು ಅಬಕಾರಿ ಅಧಿಕಾರಿಗಳು ಪತ್ತೆ ಮಾಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಆಂಜನೇಯ (55)ಇವರ ಮನೆಯ ಕಾಂಪೌಂಡ್ನಲ್ಲಿ ಬೆಳೆದ ಬದನೆಕಾಯಿ ಗಿಡಗಳ ಮಧ್ಯೆ ಹೂ, ತೆನೆ, ಕಾಂಡ ಬೀಜಗಳಿಂದ ಕೂಡಿದ ಒಂದು ಹಸಿ ಗಾಂಜಾ
ಗಿಡ ಬೆಳೆಸಿದ್ದು, ಗಾಂಜಾ ದ ಗಿಡವನ್ನು ಬೇರು ಸಮೇತ ಕಿತ್ತು ತೂಕ ಯಂತ್ರದ ಸಹಾಯದಿಂದ ತೂಕ ಮಾಡಿ
ನೋಡಲಾಗಿ 1.510 ಕೆ.ಜಿತೂಕವಿದ್ದು ಇದು ಸುಮಾರು 30 ಸಾವಿರ ರೂ ಬೆಲೆ ಬಾಳುತ್ತದೆ ಎಂದು ಅಬಕಾರಿನಿರೀಕ್ಷಕ ನಾಗರಾಜ್ಹೇಳಿದ್ದಾರೆ. ಮನೆ ಮುಂದೆ ಗಾಂಜ ಬೆಳೆದ ಆರೋಪಿ
ಆಂಜನೇಯ ಪರಾರಿಯಾಗಿದ್ದು ಅಬಕಾರಿ ಅಧಿಜಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಚಿತ್ರದುರ್ಗ ಅಬಕಾರಿ ಉಪ
ಆಯುಕ್ತರು, ರವರ ನಿರ್ದೇಶನ ಹಾಗೂ ಅಬಕಾರಿ ಉಪಅಧೀಕ್ಷಕರು, ಹಿರಿಯೂರು ರವರಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ
ನಾಗರಾಜು.ಸಿ.ಅಬಕಾರಿ ನಿರೀಕ್ಷಕರು,ಡಿ.ಟಿ ತಿಪ್ಪಯ್ಯ
ಅಬಕಾರಿ ಉಪ ನಿರೀಕ್ಷಕರು-2 ಟಿ.ರಂಗಸ್ವಾಮಿ ಅಬಕಾರಿ ಉಪನಿರೀಕ್ಷಕರು-1 ಚಳ್ಳಕೆರೆ ವಲಯ
ಮತ್ತು ಅಬಕಾರಿ ಮುಖ್ಯ ಪೇದೆ ಎಸ್.ರಘುನಾಥ ಮತ್ತುಅಬಕಾರಿ ಪೇದೆಗಳಾದ ಎನ್.ನಾಗರಾಜ,
ಟಿ.ಸೋಮಶೇಖರ,ಎನ್ಶಾಂತಣ್ಣ ದಾಳಿಯಲ್ಲಿ ಪಾಲ್ಗೊಂಡಿದ್ದರು.
0 Comments