ಚಳ್ಳಕೆರೆ .. ಮನೆ ದೇವರುಗಳ ಪೂಜೆ ಮೌಢ್ಯವಲ್ಲ – ಕಸವನಹಳ್ಳಿ ರಮೇಶ್.
ಚಳ್ಳಕೆರೆ ತಾಲೂಕು ಕಲಮರಹಳ್ಳಿ ಗ್ರಾಮದಲ್ಲಿ ಕುಂಚಿಟಿಗರ ಬೆಳ್ಳನಾರ್ ಕುಲದವರ ಮನೆದೇವರು ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಬೆಳ್ಳನಾರ್ “ಸ್ನೇಹ ಸಮ್ಮಿಲನ”ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ವಲಸೆ ಬಂದ ಕುಂಚಿಟಿಗರು ಪಶುಸಂಗೋಪನೆ ಮಾಡಿಕೊಂಡು ಮೇವು- ನೀರು ಇರುವ ಬೆಟ್ಟ-ಗುಡ್ಡ ಕೆರೆ -ತೊರೆ ಭಾಗಗಳಲ್ಲಿ ವಾಸವಿದ್ದು. ಇವತ್ತಿನ ದಿನಮಾನಗಳಲ್ಲಿ ರಾಜ್ಯದಲ್ಲಿ 18 ಜಿಲ್ಲೆ 46 ತಾಲೂಕುಗಳಲ್ಲಿ 26 ಲಕ್ಷಕ್ಕೂ ಅಧಿಕ ಸಂಖ್ಯೆಯ ಕುಂಚಿಟಿಗರು ಕುಲ -ಬೆಡಗುಗಳ ಆಧಾರದ ಮೇಲೆ ಒಗ್ಗಟ್ಟಾಗಿ ಕೃಷಿ ಸಂಸ್ಕೃತಿಯನ್ನು ಮಾಡಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ನಮ್ಮ ಕುಟುಂಬದ ಹಿರಿಯರು ಭಕ್ತಿ ಭಾವದಿಂದ ಬಂದು ಮುಟ್ಟಿ ಹೋಗಿರುವ ಮನೆ ದೇವರುಗಳ ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ನಮ್ಮ ಹಿರಿಯರು ಮತ್ತು ಪೂರ್ವಜರನ್ನು ಗೌರವಿಸಿದಂತಾಗುತ್ತದೆ. ಇದು ಮೂಢನಂಬಿಕೆ ಅಲ್ಲ ಕುಟುಂಬದ ಹಿರಿಯರ ಮೇಲಿರುವ ಗೌರವದ ನಂಬಿಕೆ. ಈ ನಿಟ್ಟಿನಲ್ಲಿ ವಿವಿಧತೆ ಯಲ್ಲಿ ಏಕತೆ ಸಾರುವ 101 ಕುಲ ಬೆಡಗಿನ ಕುಂಚಿಟಿಗರ ಏಕೀಕರಣ ಮತ್ತು ದೃವೀಕರಣದ ಭಾಗವಾಗಿ ಬೆಳ್ಳನಾರ್ ಕುಲದವರನ್ನು ಒಂದೆಡೆ ಸೇರಿಸಿ ಸಮಾವೇಶ ಮಾಡಲಾಗುವುದು.ಇದರಿಂದ ಮುಂದಿನ ಪೀಳಿಗೆಯವರಿಗೆ ನಮ್ಮ ಕುಟುಂಬದ ಹಿರಿಯರ ವಾಸ ಸ್ಥಳಗಳು ,ದೇವಸ್ಥಾನಗಳು, ಜೀವನ ಪದ್ಧತಿ ಕಲಿಸಿಕೊಟ್ಟಂತಾಗುತ್ತದೆ. ಅಲ್ಲದೆ ನಮ್ಮ ವಾಸಸ್ಥಳ ಬದಲಾಗಿರಬಹುದು ,ವ್ಯವಸಾಯದ ಭೂಮಿ ಬದಲಾಗಿರಬಹುದು, ವೃತ್ತಿಯ ಪ್ರದೇಶ ಬದಲಾಗಿರಬಹುದು, ಆದರೆ ಕುಲದ ಮೂಲದ ಬುಡಕಟಿನ ದೇವರುಗಳು ಬದಲಾಗಿಲ್ಲ,ಆದ್ದರಿಂದ ದೈವಿಕ ಕಾರ್ಯಗಳಲ್ಲಿ ಭಕ್ತಿ ಭಾವದಿಂದ ಪಾಲ್ಗೊಳ್ಳಬೇಕು ಎಂದು ಕಸವನಹಳ್ಳಿರಮೇಶ್ ಹೇಳಿದರು. ಇದೇ ಸಂದರ್ಭದಲ್ಲಿ ಹೊಸಹಳ್ಳಿ ಶ್ರೀ ವೀರಬಡಣ್ಣ ಟ್ರಸ್ಟ್ ನ ಕಂಬತ್ತನಹಳ್ಳಿ ಈರಣ್ಣ ಮಾತನಾಡಿ,ನಾವುಗಳು ಶ್ರಮಸಂಸ್ಕೃತಿಯಿಂದ ಬಂದು ಕೃಷಿಯನ್ನು ಆರಾಧಿಸಿಕೊಂಡು ಬುಡಕಟ್ಟಿನ ಮನೆ ದೇವರುಗಳನ್ನು ಪೂಜಿಸುತ್ತಿರುವುದು. ಇದೊಂದು ವಿಶಿಷ್ಟ ಪರಂಪರೆ ಯಾವುದೇ ಕಾರಣಕ್ಕೂ ಸಮಾಜದಲ್ಲಿ ಸ್ಥಾನಮಾನಗಳು ಬದಲಾದರೂ ಮನೆ ದೇವರುಗಳು ಬದಲಾಗಿಲ್ಲ ಎಂದು ಹೇಳಿದರು. ಕುಂಚಿಟಿಗ ಸ್ವಚ್ಛ ಸುಸಂಸ್ಕೃತ ಮತ್ತು ಸುಚಿರ್ಭೂತ ಸಂಸ್ಕಾರಯುಕ್ತ ಜಾತಿಯಾಗಿದೆ ವೈವಿಧ್ಯಮಯ ಕುಲ ಬೆಡಗಿನ ಕುಂಚಿಟಿಗರು ವೈಜ್ಞಾನಿಕ ಹಿನ್ನೆಲೆಯಲ್ಲಿ ವೈವಾಹಿಕ ಬದುಕು ಕಟ್ಟಿಕೊಂಡು ಇತರೆ ಸಮಾಜದವರಿಗೆ ಮಾದರಿಯಾಗಿ ಬದುಕುತ್ತಿದ್ಧಾರೆ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಲಮರಹಳ್ಳಿ ಪಟೇಲ್ ಚಂದ್ರೇಗೌಡರು ವಹಿಸಿದ್ದರು.ಇದೇ ಸಂದರ್ಭದಲ್ಲಿ ಹಿರಿಯರು ತಾಲ್ಲೋಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಪ್ರದಾನ ಕಾರ್ಯದರ್ಶಿ ವಿ.ಕುಬೇರಪ್ಪ, ಮ್ಯಾದನಹೊಳೆ ಪುಟ್ಟಸ್ವಾಮಿ, ಆರ್ ಕೃಷ್ಣಮೂರ್ತಿ. ಈಶ್ವರಗೆರೆ ರಾಜಣ್ಣ.ಹುಲಿಕುಂಟೆ ವೀರಣ್ಣ,ಕೆಪಿ ಪ್ರಹ್ಲಾದ್ ಆರ್.ಸಿದ್ದಯ್ಯ,ಸಿದ್ದೇಶ್ ಪೋಜಾರ್, ಕೆ.ಆರ್.ಪಾಂಡುರಂಗಪ್ಪ , ಆರ್.ರಂಗಸ್ವಾಮಿ,ಸಿದ್ದೇಶ್ ಗೌಡ, ಪ್ರಕಾಶ್, ಕಸವನಹಳ್ಳಿ ಶ್ರೀನಾಥ್ ಮತ್ತಿತರರ ಕುಂಚಿಟಿಗ ಮುಖಂಡರು ಉಪಸ್ಥಿತರಿದ್ದರು.
0 Comments