ಹಿರಿಯೂರು:
ಇಂದಿನ ಆಧುನಿಕ ಸಮಾಜದಲ್ಲಿ ಮನುಷ್ಯ ಸಂಬಂಧಗಳು ತುಂಬಾ ನಾಜೂಕಾಗಿ ನಶಿಸುತ್ತಿರುವ ಹಾಗೂ ಮಾನವೀಯ ಮೌಲ್ಯಗಳೇ ಅನಾಥವಾಗುತ್ತಿರುವ ಈಗಿನ ಕಾಲಘಟ್ಟದಲ್ಲಿ ಸಂದೀಲ್ ಕುಮಾರ್ ಹಾಗೂ ಅಖಿಲ್ ರವರ ಕೊಡುಗೆ ಅನನ್ಯವಾಗಿದೆ ಎಂಬುದಾಗಿ ಶಿಕ್ಷಕ ಹಾಗೂ ಸಂಪನ್ಮೂಲ ವ್ಯಕ್ತಿ ಗುರುಸಾಗರ್ ಅಭಿಪ್ರಾಯ ವ್ಯಕ್ತಡಿಸಿದರು.
ತಾಲ್ಲೂಕಿನ ವಾಣಿವಿಲಾಸ ಸಾಗರದ ಶ್ರೀ ಬಿ.ಎಲ್. ಗೌಡ ಪ್ರೌಢಶಾಲೆಯಲ್ಲಿ ಸೊಮವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಶಾಲೆಯಲ್ಲಿ 1986-87 ನೇ ಸಾಲಿನ ವಿದ್ಯಾರ್ಥಿಯಾಗಿರುವ ಸಂದೀಲ್ ಕುಮಾರ್ರವರ ಸುಪುತ್ರ ಎಸ್.ಅಖಿಲ್ ಅವರು ಅಮೇರಿಕದಲ್ಲಿ ವಿದ್ಯಾಭ್ಯಾಸ ಮಾಡಿ ಸ್ವತಃ ತಾವೇ ದುಡಿದು ಗಳಿಸಿದ ಹಣದಲ್ಲಿ ತನ್ನ ತಂದೆ ಕಲಿತ ಶಾಲೆಗೆ 16 ಕಂಪ್ಯೂಟರ್ ಗಳನ್ನು ಕೊಡುಗೆ ನೀಡಿದ್ದಾರೆ.
ಈ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಗಳನ್ನು ಕೊಡುಗೆ ನೀಡುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಬೆಳಕಾದ ಅಖಿಲ್ ಮತ್ತು ಕುಟುಂಬದವರಿಗೆ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಎ.ಅನ್ನಪೂರ್ಣಮ್ಮ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕರಾದಅನುಪಮ , ಕುಮಾರ್, ತಿಪ್ಪೇಸ್ವಾಮಿ, ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments