ಚಳ್ಳಕೆರೆ ಜನಧ್ವನಿ ವಾರ್ತೆ ಏ 29.
ಕ್ಷೇತ್ರದಲ್ಲಿನ ವಿವಿದ ಗ್ರಾಮಗಳಿಗೆ ಮತಯಾಚನೆ ಮಾಡಲು ಹೋದ ಸಂದರ್ಭದಲ್ಲಿ ಮಾಹಿಳೆಯರು ಆರತಿ, ಹೋಕಳಿ ನೀವಾಳಿಸಿ ದೃಷ್ಟಿ ತೆಗೆಯುವ ಮೂಲಕ ಶಾಸಕ ಟಿ.ರಘುಮೂರ್ತಿ ಅದ್ದೂರಿಯಾಗಿ ಬರಮಾಡಿಕೊಂಡು ಮತ ಯಾಚನೆ ಮಾಡಲು ಬೆಂಬಲ ಸೂಚಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಟಿ, ರಘುಮೂರ್ತಿ ಹತ್ತುವರ್ಷಗಳ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮೆಚ್ಚಿ ವಿವಿಧ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಶಾಸಕರ ಪರವಾಗಿ ರೋಡ್ ಶೋನಲ್ಲಿ ಭಾಗವಹಿಸಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಜಿಲ್ಲೆಯಲ್ಲಿ ನಾನೋಬ್ಬನೇ ಕಾಂಗ್ರೆಸ್ ಶಾಸಕ ನಾಗಿದ್ದರಿಂದ ಬಿಜೆಪಿ ಸರಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದೆ ಬಂದ ಅನುದಾವನ್ನು ಹಿಂಪಡೆಯುವ ಮೂಲಕ ಅಭಿವೃದ್ಧಿಗೆ ಹಿನ್ನೆಯಾಗುವಂತೆ ಮಾಡಿದೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಕ್ಷೇತ್ರಕ್ಕೆಇನ್ನು ಸಾಕಷ್ಟು ಯೋಜನೆಗಳನ್ನು ತಂದು ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು. ಎಂದು ಮನವಿ ಮಾಡಿಕೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ಕ್ಷೇತ್ರಕ್ಕೆ ಸರಕಾರದ ಅಡಿಯಲ್ಲಿ ಬರುವ ಸುಮಾರು 40 ಇಲಾಖೆಗಳ ಕಾರ್ಯಕ್ರಗಮನ್ನು ಎಲ್ಲಾ ವರ್ಗದ ಬಡ ಜನರಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದಲ್ಲದೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರ ವ್ಯಾಪ್ತಿಯ ಸಾರಿಗೆ ಬಸ್ನಿಲ್ದಾಣ, ಮಿನಿ ವಿಧಾನರ್ಸೌ, ಮಹಿಳಾ ಮಕ್ಕಳ ಆಸ್ಪತ್ರೆ, ರಂಗಮAದಿರ, ದೇವರಾಜ್ ಅರಸು ಭವನ, ಪರಶುರಾಂಪುರ ಹೋಬಳಿ ಕೇಂದ್ರದಲ್ಲಿ ಐ ಟಿ.ಐ ಕಾಲೇಜು ಸ್ಥಾಪನೆ ಶಾಸಕನಾಗಿ ಆಯ್ಕೆಯಾದ ದಿನದಿಂದ ಹತ್ತು ವರ್ಷಗಳ ಕಾಲ ನೀಡಿದ ಸಹಕಾರದಿಂದ ಸಾರ್ವಜನಿಕರ ಅವಶ್ಯಕತೆಗಳನ್ನು ಅರಿತು ಸಾಕಷ್ಟು ಅಭಿವೃದ್ಧಿ ಮಾಡಿರುವುದು ನಿಮ್ಮಕಣ್ಣ ಮುಂದೆ ಕಾಣುತ್ತಿವೆ ಆದ್ದರಿಂದ ವಿರೋಧ ಪಕ್ಷಗಳ ಸುಳ್ಳು ಆರೋಪಗಳಿಗೆ ಕಿವಿಗೊಡದೆ ಶಾಸಕ ಟಿ.ರಘುಮೂರ್ತಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಗದ್ದಿಗೆ ತಿಪ್ಪೇಸ್ವಾಮಿ, ಕರಿಕೆರೆ ರಾಜಣ್ಣ, ಪ್ರಕಾಶ್ ಮೂರ್ತಿ. ಶಶಿಧರ್, ಗೋವಿಂದರಾಜ್ ,ಗೀತಾಬಾಯಿ, ಉಷಾ, ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂರು,ಕಾರ್ಯಕರ್ತರು ಇತರರಿದ್ದರಿದ್ದರು.
ಕರಿಕೆರೆ , ಮೀರಸಾಭಿಹಳ್ಳಿ, ಸೇರಿದಂತೆವಿವಿಧ ಗ್ರಾಮಗಳಲ್ಲಿ ಬಿರುಸಿನ ಮತಯಾಚನೆ ರೋಡ್ ಶೋ ಹಾಗೂ ಮನೆ ಮನಗೆಭೇಟಿ ನೀಡಿ ಮತಯಾಚನೆ ನಡೆಸಿದರು.
ನಗರದ ವಿವಿಧ ವಾರ್ಡ್ ಗಳಲ್ಲಿ ಮಹಿಳೆಯರು ಶಾಸಕ ಟಿ,ರಘುಮೂರ್ತಿ ಪರ ಮತಯಾಚನೆ ನಡೆಸಿದರು. ಭಾಗ್ಯಮ್ಮ, ನಾಗಲಕ್ಷ್ಮಿ, ಪದ್ಮಲತ, ಮಂಜುಳಮ್ಮ , ಸರಸ್ಪತಮ್ಮ, ಶೈಲಜ,ನೂರ್ಜಬಿನ, ಲಕ್ಷ್ಮಿದೇವಿ, ಷಂಷಾದ್ ಇತರರಿದ್ದರು.
0 Comments