ಚಳ್ಳಕೆರೆ ಜನಧ್ವನಿ ವಾರ್ತೆ ಏ 18 ಮತಗಟ್ಟೆ ಅಧಿಕಾರಿಗಳು ಪಾರದರ್ಶಕವಾಗಿ ಹಾಗೂ ಜವಾಬ್ದಾರಿಯಿಂದಕಾರ್ಯನಿರ್ವಹಿಸಬೇಕು. ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿದುಕೊಂಡಲ್ಲಿ ಸುಗಮವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಲು ಸಾಧ್ಯ ಎಂದು ಸಹಾಯಕ ಚುನಾವಣಾಧಿಕಾರಿ ಆನಂದ್ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 260 ಮತಗಟ್ಟೆ ಬಿಎಲ್ ಓ ಗಳಿಗೆ ಆಯೋಜಿಸಿದ್ದ ಎಲೆಕ್ಟೋ ವೆರಿಫಿಕೇಷನ್ ಯ್ಯಾಪ್ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು ಚಲಾವಣೆಯಾಗುವಂತೆ ಬಿ.ಎಲ್.ಓ ಹೆಚ್ಚು ಕಾಳಜಿವಹಿಸಬೇಕು. ಚುನಾವಣೆ ಆಯೋಗದೆ ಮಾರ್ಗತದರ್ಶನದ ಮೇರೆಗೆ ಕರ್ತವ್ಯ ನಿರ್ವಹಿಸ ಬೇಕು. ಏ.26 ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದ್ದು ಪ್ರತಿಯೊಬ್ಬ ಬಿ ಎಲ್ ಓ ಗಳು ಮತಗಟ್ಟೆ ಕೇಂದ್ರದಲ್ಲಿದ್ದು ಮತದಾನ ಪ್ರಾರಂಭದಿಂದ ಮುಕ್ತಾಯ ವಾಗುವ ತನಕ ಎಲೆಕ್ಟೋ ವೆರಿಫಿಕೇಷನ್ ಯ್ಯಾಪ್ ನಲ್ಲಿ ಮತದಾನದ ಮಾಹಿತಿಯನ್ನು ಎಂಟ್ರಿ ಮಾಡ ಬೇಕು ಎಂದು ತಿಳಿಸಿದರು.
ತರಬೇತಿ ದಾರ ಶ್ರೀಧರ್ ಎಲೆಕ್ಟೋ ವೆರಿಫಿಕೇಷನ್ ಯ್ಯಾಪ್ ಲಿಂಗ್ ಡೌನ್ ಲೋಡ್ ಮಾಡಿಕೊಳ್ಳುವುದು ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಬಿಇಒ ಕೆ.ಎಸ್.ಸುರೇಶ್ , ಚುನಾವಣೆ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments