ಮಕ್ಕಳ ಭಾಗ್ಯಕ್ಕೆ ದತ್ತು ಪಡೆಯುವ ದಂಪತಿಗಳು ಮಕ್ಕಳ ಸಂಸ್ಕಾರ ಮತ್ತು ಕುಟುಂಬದ ಪ್ರೀತಿಗೆ ವೃದ್ದಾಶ್ರಮಗಳಿಂದ ಹಿರಿಯರನ್ನು ದತ್ತು ಪಡೆಯುವ ಮನಸ್ಥಿತಿ ಪ್ರಸ್ತುತ ಸಮಾಜಕ್ಕೆ ಅಗತ್ಯವಿದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ಆರ್.ದಯಾವತಿ ಪುತ್ತೂರ್ಕರ್

by | 26/05/24 | ಪುಸ್ತಕ


ಚಳ್ಳಕೆರೆ:
ಮಕ್ಕಳ ಭಾಗ್ಯಕ್ಕೆ ದತ್ತು ಪಡೆಯುವ ದಂಪತಿಗಳು ಮಕ್ಕಳ ಸಂಸ್ಕಾರ ಮತ್ತು ಕುಟುಂಬದ ಪ್ರೀತಿಗೆ ವೃದ್ದಾಶ್ರಮಗಳಿಂದ ಹಿರಿಯರನ್ನು ದತ್ತು ಪಡೆಯುವ ಮನಸ್ಥಿತಿ ಪ್ರಸ್ತುತ ಸಮಾಜಕ್ಕೆ ಅಗತ್ಯವಿದೆ ಎಂದು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ಆರ್.ದಯಾವತಿ ಪುತ್ತೂರ್ಕರ್ ಹೇಳಿದರು.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿನ ಬನಶ್ರೀ ವೃದ್ದಾಶ್ರಮದಲ್ಲಿ ಭಾನುವಾರ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ತನುಶ್ರೀ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಮ್ಮಂದಿರ ದಿನಾಚರಣೆ ಮತ್ತು ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಿತ ಸಮಾಜದಲ್ಲಿ ಸಂಬಂಧಗಳ ಮೌಲ್ಯತೆ ಕುಸಿಯುತ್ತಿದೆ. ಕುಟುಂಬದಲ್ಲಿ ಹಿರಿಯ ಸಂಬAಧಗಳಿಲ್ಲದೆ ಸಂಸ್ಕಾರ ಸಿಗುತ್ತಿಲ್ಲ. ಹೆತ್ತವರನ್ನು ವೃದ್ದಾಶ್ರಮಕ್ಕೆ ಬಿಡುವ ಮನಸ್ಥಿತಿ ಬೆಳೆಯುತ್ತಿದೆ. ಮಕ್ಕಳ ಭವಿಷ್ಯಕ್ಕಾಗಿ ಜೀವನವೇ ತ್ಯಾಗ ಮಾಡಿದ ಹೆತ್ತವರ ಕೊನೆ ದಿನಗಳ ಸೇವೆಯಲ್ಲಿ ಋಣ ತೀರಿಸಿಕೊಳ್ಳಬೇಕಿದೆ ಎಂದರು.
ವೃದ್ದರಿಗೆ ಅಭಿನಂದಿಸಿ ಮಾತನಾಡಿದ ವೇದಿಕೆ ಗೌರವ ಅಧ್ಯಕ್ಷ, ವಕೀಲ ಬಿ.ಕೆ. ರಹಮತ್‌ವುಲ್ಲಾ, ವಿಲಾಸಿ ಹಂಬಲದಲ್ಲಿ ಕುಟುಂಬದ ಪ್ರೀತಿ ಕಾಣುತ್ತಿಲ್ಲ. ಕಲುಷಿತ ಸಮಾಜ ತಿದ್ದಲು ಅಂತಃಕರಣ ಸಾಹಿತ್ಯ ಅಗತ್ಯವಿದೆ. ತಾಯಿ, ಮಕ್ಕಳ ಮತ್ತು ಕುಟುಂಬದ ಪ್ರೀತಿಯ ಬಗ್ಗೆ ಹೆಚ್ಚು ಸಾಹಿತ್ಯ ರಚನೆ ಆಗಬೇಕು. ಅವಿಭಕ್ತ ಕುಟುಂಬಗಳ ಪ್ರೀತಿ ಕಂಡ ನೆಲದಲ್ಲಿ ಸ್ವಾರ್ಥ ಜೀವನ ನಡೆಯುತ್ತಿದೆ. ವೃದ್ದಾಶ್ರಮಗಳು ಕೊನೆಯಾಗಲು ಯುವಕರಲ್ಲಿ ಕುಟುಂಬ ಮತ್ತು ಮಾನವೀಯ ಸಂಬAಧಗಳ ಅರಿವು ಮೂಡಬೇಕಿದೆ ಎಂದು ಕಿವಿಮಾತು ಹೇಳಿದರು.
ಸಮಾಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಶಫೀವುಲ್ಲಾ ಮಾತನಾಡಿ, ನಿವೃತ್ತಿ ಬಳಿಕ ಬಂದ ಹಿಡಿಗಂಟು ಹಣದಲ್ಲಿ ವೃದ್ದಾಶ್ರಮ ಆರಂಭ ಮಾಡಿರುವ ಎಸ್. ಮಂಜುಳಮ್ಮ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಲೌಖಿಕ ಅನುಭವ ಕಂಡ ಹಿರಿಯರ ಸೇವೆಯಲ್ಲಿ ದೇವರನ್ನು ಕಾಣುವ ಮಾರ್ಗ ಕಂಡುಕೊAಡಿದ್ದಾರೆ ಎಂದು ಹೇಳಿದರು.
ಕವಿಯತ್ರಿ ಶೋಭಾ ಮಲ್ಲಿಕಾರ್ಜುನ ಮಾತನಾಡಿ, ಮಾನವನ ಧರ್ಮದಲ್ಲಿ ಇನ್ನೊಬ್ಬರಿಗೆ ನೆರವಾಗಬೇಕು. ವಯಸ್ಸಾದವರಿಗೆ ಸೇವೆ ಮಾಡುವ ಮೂಲಕ ಧರ್ಮದ ಮೂಲ ಉಳಿಸಬೇಕು. ಪ್ರಸ್ತುತ ಸಮಾಜದಲ್ಲಿ ಮರೆಯಾಗುತ್ತಿರುವ ಮಾನವೀಯ ಸಂಬAಧಗಳ ನಡುವೆ ವೃದ್ದಾಶ್ರಮ ಸೇವೆ ಸಾರ್ಥಕ ಅನಿಸುತ್ತದೆ. ಎಷ್ಟೋ ಜೀವಗಳು ಅನ್ನ ಇಲ್ಲ ಎನ್ನುವುದಕ್ಕಿಂತ ಕುಟುಂಬದಿಂದ ಪ್ರೀತಿ ಸಿಗುತ್ತಿಲ್ಲ ಎಂದು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ವೃದ್ದಾಶ್ರಮ ಸಂಸ್ಥಾಪಕಿ ಎಸ್. ಮಂಜುಳಮ್ಮ ಮಾತನಾಡಿ, ಕುಟುಂಬಕ್ಕೆ ಗಂಡು ಮಕ್ಕಳೆ ಸ್ಥಿರವಲ್ಲ. ನನ್ನ ತಂದೆಯ ಹೆಸರೇಳಲು ವೃದ್ದಾಶ್ರಮ ಆರಂಭ ಮಾಡಿದ್ದೇನೆ. ಇಲ್ಲಿ ಆಶ್ರಯ ಪಡೆದವರಲ್ಲಿ ಹೆಚ್ಚು ಗಂಡುಮಕ್ಕಳಿಂದ ನೋವು ಅನುಭವಿಸಿ ಬಂದವರೂ ಇದ್ದಾರೆ. ನಗರದ ಕೆಲ ಶ್ರೀಮಂತ ಮನೆತನದಲ್ಲೂ ಪ್ರೀತಿ, ಹಾರೈಕೆ ಕಾಣದೆ ಬಂದಿದ್ದಾರೆ. ತಕ್ಷಣವೇ ಮಗ ಸೊಸೆಯಂದಿರು ಇನ್ನು ಮುಂದೆ ತಪ್ಪಾಗಿ ನಡೆದುಕೊಳ್ಳುವುದಿಲ್ಲ ಎಂದು ಮನಪರಿವರ್ತನೆ ಮಾಡಿಕೊಂಡು ಮರಳಿ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸ್ಮರಿಸಿದರು.
ಶಿಕ್ಷಕ ರವಿಕುಮಾರ್ ಇದೇ ವೇಳೆ ವೃದ್ದಾಶ್ರಮಕ್ಕೆ ೫ ಸಾವಿರ ಧನ ಸಹಾಯ ಮಾಡಿದರು. ಕಾರ್ಯಕ್ರಮದಲ್ಲಿ ಕವಿ ಕರ‍್ಲಕುಂಟೆ ತಿಪ್ಪೇಸ್ವಾಮಿ, ಕೆ.ಎಸ್. ತಿಪ್ಪಮ್ಮ, ಎಂ.ಡಿ. ಓಬಣ್ಣ, ಕವಿತಾ, ಶಿವರುದ್ರಪ್ಪ, ಮುದ್ದುರಾಜ್, ಬೆಳಕು ಪ್ರಿಯ, ವಿನಾಯಕ, ಶಬ್ರೀನ್ ಮಹಮ್ಮದ್ ಅಲಿ, ಎಂ. ಯತೀಶ್, ತಿಪ್ಪೀರಮ್ಮ, ಪಗಡಲಬಂಡೆ ನಾಗೇಂದ್ರಪ್ಪ, ವಿನಾಯಕ, ಎಚ್. ಸತೀಶ್‌ಕುಮಾರ್, ಎನ್.ಶಿವಾನಂದ, ಎನ್. ಕುಶ ಮತ್ತಿತರರು ಭಾಗವಹಿಸಿದ್ದರು.

Latest News >>

ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ಆ. 01 ರಂದು ವ್ಯಸನ ಮುಕ್ತ ದಿನಾಚರಣೆ ಮದ್ಯ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ

ಚಿತ್ರದುರ್ಗ ಜು. 26: ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆಗಸ್ಟ್ 01 ರಂದು ಜಿಲ್ಲಾ ಮಟ್ಟದಲ್ಲಿ ವ್ಯಸನ ಮುಕ್ತ ದಿನಾಚರಣೆ...

ಆರು ವರ್ಷಗಳು ಕಳೆದರು ಚಿಕ್ಕಮಧುರೆ ಕೆರೆಹಳ್ಳದ ಸೇತುವೆ ಕಾಮಗಾರಿ ಸ್ಥಗಿತ

ಚಳ್ಳಕೆರೆ: ಜು.26 ತಾಲೂಕಿನ ಚಿಕ್ಕಮಧುರೆ ಗ್ರಾಮದ ಕೆರೆ ಹಳ್ಳದ ಸಂಪರ್ಕ ರಸ್ತೆಗೆ ಕೈಗೊಂಡಿರುವ ಸೇತುವೆ ಕಾಮಗಾರಿ ಸುಮಾರು 6 ವರ್ಷವಾದರೂ...

ಮೃತ ರೇಣುಕಾಸ್ವಾಮಿ ಮನೆಗೆ ಚಿತ್ರನಟ ವಿನೋದ್ ರಾಜ್ ಭೇಟಿ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ & ಗ್ಯಾಂಗ್‌ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್‌...

ಕಾಣೆಯಾದ ಬಾಲಕ ನೇರ್ಲಗುಂಟೆ ಗ್ರಾಮದ ಬಳಿ ಪತ್ತೆ….

ಚಳ್ಳಕೆರೆ ಜು.26. ಕಾಣೆಯದ ಬಾಲಕ ನೇರ್ಲಗುಂಟೆ ಗ್ರಾಮದ ಸಮೀಪ ಪತ್ತೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿಯ ನಾಲ್ಕನೇ ತರಗತಿ ಪ್ರಶಾಂತ್ ಕುಮಾರ್...

ಬಹಿರ್ದೆಸೆಗೆಂದು ಹೋದ ಮಗ ಮನೆಗೆ ಬಾರದೆ ಪೋಷಕರಲ್ಲಿ ಆತಂಕ..

ಚಳ್ಳಕೆರೆ ಜು.26 ಬೆಳ್ಳಂ ಬೆಳಗ್ಗೆ ಬರ್ಹಿದೆಸೆಗೆ ಹೋದ ಮನೆಗೆ ಬಾರದೆ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಇದು ಚಳ್ಳಕೆರೆ ನಗರದ...

ರೈತರ ತಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸುವಂತೆ ನಗರ ಗ್ರಾಮಲೆಕ್ಕಾಧಿಕಾರಿ ಪ್ರಕಾಶ್

ಚಳ್ಳಕೆರೆ ಜು.25 ಬೆಳೆ ಪರಿಹಾರ ಬೆಳೆವಿಮೆ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಪಹಣಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು ರೈತರ ಪಹಣಿಗೆ...

ತುರುವನೂರು : ಬಾಲ್ಯ ವಿವಾಹ ನಿಷೇದ ಕುರಿತು ಜಾಗೃತಿ

ಚಿತ್ರದುರ್ಗ ಜುಲೈ25: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಭರಮಸಾಗರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ತುರುವನೂರು ಗ್ರಾಮ ಪಂಚಾಯಿತಿ,...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page