ಚಳ್ಳಕೆರೆ ಜನಧ್ವನಿ ವಾರ್ತೆ ಜ.31 ಮಕ್ಕಳಿಗೆ ಬಾಲ್ಯದಲ್ಲಿಯೇ ವ್ಯಾಪಾರದ ಗುಣ ಮತ್ತು ಆಹಾರದ ಮಹತ್ವದ ಜೊತೆಗೆ ಅದನ್ನು ಕಲಿಯುವಿಕೆಯನ್ನು ತಿಳಿಯಪಡಿಸಲು ಶಾಲೆಯಲ್ಲಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪಾಧ್ಯಕ್ಷ ಉಮೇಶ್ ಬ್ಯಾನರ್ಜಿ ಹೇಳಿದರು.
ನಗರದ ಗಾಂಧಿನಗರದ ಶ್ರೀಶಾರದ ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 2024 ನೇ ಸಾಲಿನ ಆಹಾರ ಮೇಳದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಶಾಲಾ ಹಂತದಲ್ಲೇ ಪಠ್ಯ ಚಟುವಟಿಕೆ ಜತೆ ಜತೆಯಲ್ಲಿ ವ್ಯಾವಹಾರಿಕ ಜ್ಞಾನ ಹೆಚ್ಚುವದಲ್ಲದೇ ಹಣಕಾಸಿನ ಹರಿವಿನ ಕೂಡುವುದು ಕಳೆಯು ಲೆಕ್ಕದ ಬಗ್ಗೆ ಜ್ಞಾನ ಉಂಟಾಗುತ್ತದೆ ವಿದ್ಯಾರ್ಥಿಗಳಿಗೆ ಕೇವಲ ಸಾಂಪ್ರದಾಯಿಕ ಶಿಕ್ಷಣವನ್ನು ನೀಡುವುದರ ಜೊತೆಗೆ ಇಂತಹ ಮೇಳಗಳನ್ನು ಆಯೋಜಿಸುವುದರಿಂದ ಅವರಲ್ಲಿ ಕ್ರಿಯಾಶೀಲತೆ ವೃದ್ದಿಯ ಜೊತೆಗೆ ವ್ಯಾವಹಾರಿಕ ಜ್ಞಾನ ವೃದ್ಧಿಸುವುದಲ್ಲದೇ ಹಣ , ಆಹಾರದ ಮಹತ್ವ ತಿಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ಪಾಪಮ್ಮ,ಮುಖ್ಯ ಶಿಕ್ಷಕಿ ವೈಶಿಕ್, ರಾಧಮಣಿ.ಸಹಶಿಕ್ಷಕರಾದ ವಿಜಯಶ್ರೀ, ಸಹಿನಾ ಬಾನು, ವಸಂತ್, ,ಮುರುಗೇಶ್ ಹಾಗೂ ಪೋಷಕರಿದ್ದರು.
0 Comments