ಪಾವಗಡ ಜನಧ್ವನಿ ವಾರ್ತೆ ಮೇ 29 ಪೋಷಕರು ತಮ್ಮ ಮಕ್ಕಳಿಗೆ ಸಮಗ್ರ ಕಣ್ಣಿನ ಪರೀಕ್ಷೆಯನ್ನು ಮಾಡಿಸಬೇಕು ಎಂದು ಮಕ್ಕಳ ನೇತ್ರ ಚಿಕಿತ್ಸಾ ತಜ್ಞರಾದ ಡಾ.ವಸುಧಾ ನರೇಶ್ ಕಿವಿಮಾತು ಹೇಳಿದರು.
ಪಾವಗಡ ನಗರದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಕ್ಕಳ ಕಣ್ಣಿತನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಸಮರ್ಪಕವಾದ ದೃಷ್ಟಿಯು ಮಗುವಿನ ಶಿಕ್ಷಣದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮಗುವು ಮಸುಕಾದ ದೃಷ್ಟಿಯನ್ನು ಹೊಂದಿದ್ದು, ವಿಲಕ್ಷಣತೆಯಿಂದ ಕೂಡಿದ್ದರೆ ಕಲಿಕೆ ಸಮಯವನ್ನು ಕಳೆದುಕೊಳ್ಳುತ್ತದೆ ಮತ್ತು ದೃಷ್ಟಿಯ ಗಂಭೀರ ಸ್ವರೂಪದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸಮಸ್ಯೆಗಳೇನಾದರೂ ಇದ್ದರೆ ಅವುಗಳನ್ನು ಬೇಗನೇ ಪತ್ತೆ ಮಾಡಿ ಚಿಕಿತ್ಸೆ ಕೊಡಿಸಬಹುದು ಮತ್ತು ಗಂಭೀರ ಸ್ವರೂಪಕ್ಕೆ ಹೋಗುವ ಮುನ್ನ ತಡೆಗಟ್ಟಬಹುದು. ಸಮಸ್ಯೆಗಳನ್ನು ಪತ್ತೆ ಮಾಡಲು ಕಣ್ಣಿನ ಪರೀಕ್ಷೆ ಮಾಡಿಸುವುದು ಉತ್ತಮ.
ಮಕ್ಕಳಲ್ಲಿ ಕಂಡು ಬರುವ ಕಣ್ಣಿನ ಸಮಸ್ಯೆಯನ್ನು ಪೋಷಕರು ನಿರ್ಲಕ್ಷಿಸಬಾರದು ಎಂದು ಹೇಳಿದರು.
ಶ್ರೀ ರಾಮಕೃಷ್ಣಾಶ್ರಮದ ಶ್ರೀ ಜಪಾನಂದಸ್ವಾಮಿಜಿ ಮಾತನಾಡಿ ಮಕ್ಕಳಿಗೆ ಕಣ್ಣಿನ ಸಮಸ್ಯೆಯಿದೆ ಹೇಗಪ್ಪ ಚಿಕಿತ್ಸೆ ಕೊಡಿಸುವುದು ನಮ್ಮಲ್ಲಿ ಹಣ ಇಲ್ಲ ಎಂಬ ಕೊರಗು ಬೇಡ ಪೋಷಕರ ನಿರ್ಲಕ್ಷತೆಯ ಜಾಗೃತಿ ಕೊರತೆ, ಬಡತನ ಮೊದಲಾದ ಕಾರಣದಿಂದ ಅನೇಕ ಮಕ್ಕಳಲ್ಲಿ ದೃಷ್ಟಿದೋಷ ಹಾಗೂ ಅಂಧತ್ವ ಕಾಣುತ್ತಿದೆ. ಪ್ರಸ್ತುತ ಮಕ್ಕಳಲ್ಲಿ ಮೊಬೈಲ್ ಗೇಮ್, ಕಂಪ್ಯೂಟರ್ ಗೇಮ್ಗಳನ್ನು ಆಡುವ ಹವ್ಯಾಸ ಹೆಚ್ಚಾಗಿದೆ. ಈ ಹವ್ಯಾಸದಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಉಂಟಾಗುತ್ತಿದೆ.
![](https://janadhwani.in/wp-content/uploads/2024/05/IMG-20240529-WA0032.jpg)
ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದವತಿಯಿಂದ ಹಸುಗೂಸು ಮಕ್ಕಳಿಂದ ಹಿಡಿದು 15 ವರ್ಷದ ಮಕ್ಕಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಕೊಡಿಸಲಾಗುವುದು.
ಈ ಉಚಿತಿ ಆರೋಗ್ಯ ಶಿಬಿರವನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಮಕ್ಕಳ ಕಣ್ಣಿನ ರಕ್ಷಣೆ ಮಾಡಿಕೊಳ್ಳಿ ಬುಧವಾರ ದ ಶಿಬಿರದಲ್ಲಿ ಚಳ್ಳಕೆರೆ, ಪರಶುರಾಮಪುರ, ಕಲ್ಯಾಣದುರ್ಗ, ಮಧುಗಿರಿ, ರೊದ್ದಂ ಹಾಗೂ ಪಾವಗಡ ಸುತ್ತಮುತ್ತಲಿನ ಪ್ರದೇಶಗಳಿಂದ ಪೋಷಕರು ತಮ್ಮ 13 ದಿನಗಳ ಮಗು ಸೇರಿ 50 ಮಕ್ಕಳಿಗೆ ತಪಾಸಣೆ ಮಾಡಿ ದೃಷ್ಠಿ ದೋಷ ಇರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ ವಿವೇಕ ಕಿರಣ ಯೋಜನೆಯಡಿಯಲ್ಲಿ ಉಚಿತ ಕನ್ನಡಕಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೋಷಕರು ಹಾಗೂ ಮಕ್ಕಳಿಗೆ ಮಧ್ಯಾನ್ಹದ ಭೋಜನ ವ್ಯವಸ್ಥೆ ಹಾಗೂ ಮಕ್ಕಳಿಗೆ ತಿಂಡಿ, ಮಜ್ಜಿಗೆ ಇತ್ಯಾದಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಶಿಬಿರದಲ್ಲಿ ಹಿರಿಯ ನೇತ್ರ ತಪಾಸಣಾ ತಜ್ಞರಾದ ಡಾ.ಕಾವ್ಯ, ಡಾ. ಶರತ್, ಡಾ.ಅಭಿಷೇಕ್, ಡಾ.ಕೀರ್ತಿ ಹಾಗೂ ಡಾ.ಚಂದ್ರಕಲಾ ಇತರರಿದ್ದರು.
0 Comments