ಚಳ್ಳಕೆರೆ ಜನಧ್ವನಿ ವಾರ್ತೆ ಡಿ26. ನಾನೂ ಸಹ ಚಿಕ್ಕಂದಿನಿಂದ ಕಾಡುಗೊಲ್ಲರ ಸುಮಾದಯದೊಮನದಿಗೆ ಬೆಳೆದಿದ್ದೇನೆ ತುಂಬಾ ದಡ್ಡಿದ್ದಾರೆ ಬುಡಕಟ್ಟು ಸಂಸ್ಕೃತಿ ಆಚರಣೆ ಮಾಡಿಕೊಂಡು ಬಂದಿದ್ದಾರೆ ನಿಮ್ಮ ಬಹುದಿನಗ ಬೇಡಿಗೆ ಇಂದು ಫಲಸಿಕ್ಕಿದೆ ನಿಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವಾಗ ಕಾಡುಗೊಲ್ಲರು ಎಂದು ಬರೆಸುವಂತೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಟ ಕಿವಿಮಾತು ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಪ್ರಥಮಬಾರಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ಸಾಂಖಿಕವಾಗಿ ವಿತರಿಸಿ ಮಾತನಾಡಿದರು. ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರಕ್ಕೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ನಿಮ್ಮ ಮನೆ ಬಳಿ ಪರಿಶೀಲನೆ ಮಾಡಲು ಬಂದಾಗ ಅವರೊಂದಿಗೆ ಸ್ಪಂದಿಸಿ ನಿಖರವಾದ ಮಾಹಿತಿ ನೀಡುವಂತೆ ಕಾಡುಗೊಲ್ಲ ಸಮುದಾಯಕ್ಕೆ ತಿಳಿಸಿದರು. ಶಾಸಕ ಟಿ.ರಘುಮೂರ್ತಿ ಮಾತನಾಡಿ ಇದೇ ಪ್ರಥಮಬಾರಿಗೆ ನಿಮ್ಮಲ್ಲರ ಪ್ರತಿಭಟನೆ.ಹೋರಾಟದ ಫಲವಾಗಿ ಅರ್ಜಿಸಲ್ಲಿಸಿ 9 ಜನರಿಗೆ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದು.
ಕಾಡುಗೊಲ್ಲ ಅಭಿವೃದ್ದಿ ನಿಗಮದ ಸೌಲಭ್ಯಗಳು ಲಭ್ಯವಾಗುತ್ತವೆ ಈಗ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಬಿಸಿಎಂ ಎ ಪ್ರಮಾಣ ಪತ್ರ ಗೊಲ್ಲರಿಗೆ ಮಾತ್ರ ಇತ್ತು ಈಗ ಕಾಡುಗೊಲ್ಲರಿಗೂ ಸಹ ಬಿಸಿಎಂ ಎ ಗೆ ಸೇರಿಸುವಂತೆ ಸರಕಾರದ ಗಮನ ಸೆಳೆಯುವಂತೆ ತಿಳಿಸಿದರು. ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಕಾಡುಗೊಲ್ಲರ ಹಟ್ಟಿಗಳ ಮನೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ತಂಡ ರಚನೆ ಮಾಡಿದ್ದು ಕಾಡುಗೊಲ್ಲ ಜಾತಿ ಪ್ರಮಾಣಕ್ಕೆ ಅರ್ಜಿಸಲ್ಲಿಸಿದೆ ಪರಿಶೀಲನೆ ನಡೆಸಿ ನಿಗಧಿತ ಅವಧಿಯೊಳಗೆ ನೀಡಲಾಗುವುದು ಯಾವುದೇ ಆತಂಕ ಬೇಡ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಕ್ಷೇತ್ರದ ಇಬ್ಬರು ಶಾಸಕರು ಇದಕ್ಕೆ ತುಂಬಾ ಸಹಕಾರ ಬೆಂಬಲ ನೀಡಿರುವುದರಿಂದ ಅರ್ಜಿ ಸಲ್ಲಿಸಿದ 9 ಜನರಿಗೆ ಕಾಡುಗೊಲ್ಲ ಜಾತಿ ಪ್ರಾಮಣ ಪತ್ರ ನೀಡಲಾಗಿತ್ತಿದೆ ಎಂದು ತಿಳಿಸಿದರು.
![](https://janadhwani.in/wp-content/uploads/2023/12/IMG-20231226-WA0245.jpg)
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚರ್ಯ ಬಿ.ವಿ.ಸಿರಿಯಪ್ಪ .ಮಾಜಿಪಂ ಅಧ್ಯಕ್ಷ ರವಿಕುಮಾರ್. ವಕೀಲ ಶಶಿಕುಮಾರ್. ಬಾಲರಾಜ್ . ಮಂಜುನಾಥ. ನಿವೃತ್ತ ಉಪನ್ಯಾಸಜ ಮೂಡಲಗಿರಿಯಪ್ಪ. ಸೇರಿದಂದ ಕಾಡುಗೊಲ್ಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
0 Comments