ಹಿರಿಯೂರು 9. ಹಿರಿಯೂರು ತಾಲೂಕು ಕಸವನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿವರ್ತನ್ ಇಂಡಿಯಾ ಸಂಸ್ಥೆಯ ಶ್ರೀಮತಿ ರಶ್ಮಿ ಅವರು ಮಕ್ಕಳಿಗೆ ಶಾಲಾ ಬ್ಯಾಗ್, ಜಾಮಿಟ್ರಿ, ಕಂಪಾಸ್, ಪೆನ್ನು ಇತರೆ ಶೈಕ್ಷಣಿಕ ಪರಿಕರಗಳನ್ನು ವಿತರಣೆ ಮಾಡಿ ಮಾತನಾಡುತ್ತಾ “”ಭವಿಷ್ಯದಲ್ಲಿ ಸದೃಢ ಸಮಾಜವನ್ನು ನಿರ್ಮಾಣ ಮಾಡಬೇಕೆಂದರೆ ಪ್ರಜೆಗಳು, ಕುಟುಂಬ, ಹಳ್ಳಿಗಳು, ರಾಜ್ಯ, ದೇಶವನ್ನು ಉದ್ದೇಶವಾಗಿಟ್ಟುಕೊಂಡು ಮಕ್ಕಳನ್ನು ಬೆಳೆಸಬೇಕು ಖಾಸಗಿ ಶಾಲೆಗಳು ಕೊಡಮಾಡುವ ಮಾಹಿತಿ ಗಿಂತ ಸರ್ಕಾರಿ ಶಾಲೆಗಳಲ್ಲಿಅದರಲ್ಲಿಯೂ ಹಳ್ಳಿಗಳಲ್ಲಿ ಸಿಗುವ ಸಾಮಾನ್ಯ ಜ್ಞಾನವನ್ನು ಮಕ್ಕಳಿಗೆ ಹೆಚ್ಚು ಹೆಚ್ಚು ಕಲಿಸುವ ಮೂಲಕ ಸದೃಢ ಸುಸಂಸ್ಕೃತ ಸಮಾಜವನ್ನು, ದೇಶವನ್ನು ನಿರ್ಮಾಣ ಮಾಡಬೇಕು. ಮಕ್ಕಳಿಗಾಗಿ ಆಸ್ತಿ ವಗೈರೆಗಳನ್ನು ಕೂಡಿಡುವ ಬದಲು ಶಿಕ್ಷಣ ,ಸಂಸ್ಕಾರ ಸಾಮಾನ್ಯ ಜ್ಞಾನ, ದಾನ, ಧರ್ಮ ಮಾಡುವಂಥ ಮನಸ್ಥಿತಿಯನ್ನು ಮಕ್ಕಳಲ್ಲಿ ಗಟ್ಟಿಗೊಳಿಸಬೇಕು. ಇಲ್ಲವಾದಲ್ಲಿ ರೋಗಗ್ರಸ್ತ ,,ವ್ಯಸನ ಪೀಡಿತ ಮನಸ್ಥಿತಿಯ ಮಕ್ಕಳು ಬೆಳೆಯುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ನಮ್ಮ ಶಾಲೆಯ ಮಕ್ಕಳಿಗೆ ಪರಿವರ್ತನಾ ಇಂಡಿಯಾ ಫೌಂಡೇಶನ್ ನ ಶ್ರೀಮತಿ ರಶ್ಮಿ ಅವರು ಶೈಕ್ಷಣಿಕ ಪರಿಕರಗಳನ್ನು ಕೊಡ ಮಾಡುತ್ತಿರುವುದು ಅತ್ಯಂತ ಸಂತೋಷದ ಹಾಗೂ ಶ್ಲಾಘನೀಯ ಕೆಲಸ ಇಂಥವರ ಸಂಖ್ಯೆ ಹೆಚ್ಚಾಗಲಿ ಹಾಗೂ ಗ್ರಾಮದ ಶಾಲೆಗೆ ಜಮೀನು ದಾನ ಮಾಡಿದ ಹಾಗೂ ಬೆಂಚು, ಕುರ್ಚಿ, ಮೈಕ್ ಸೆಟ್,ಊಟದ ತಟ್ಟೆ, ಪುಸ್ತಕಗಳು ಎಂದು ನೂರಾರು ವಸ್ತುಗಳನ್ನು ದಾನ ಮಾಡಿದ ಶ್ರೀಯುತ ಕೆಆರ್ ಪ್ರೇಮನಾಥ್, ಕೆ ಆರ್ ಶ್ರೀನಾಥ್, ಎಂ ಓಂಕಾರಪ್ಪ ಇವರು ಪ್ರಾಥಸ್ಮರಣೆಯರು.ಎಂದು ಹೇಳಿದರು. ಶಾಲೆಗೆ ಆಗಮಿಸಿದ್ದ ಶಿಕ್ಷಣ ಸಂಯೋಜಕರಾದ ಶಶಿಧರ್ ಹಾಗೂ ಬಿ ಆರ್ ಪಿ ಪ್ರಸನ್ನ ಮಾತನಾಡಿದರು. ಪರಿವರ್ತನ್ ಇಂಡಿಯಾ ಫೌಂಡೇಶನ್ ನ ಶ್ರೀಮತಿ ರಶ್ಮಿ ಅವರು ಮಾತನಾಡಿ ನಮ್ಮ ಸಂಸ್ಥೆಯಿಂದ ಸೌಲಭ್ಯ ವಂಚಿತ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿವರ್ಷ ಶೈಕ್ಷಣಿಕ ಪರಿಕರಗಳನ್ನು ಕೂಡ ಮಾಡುತ್ತಿರುವುದರ ಉದ್ದೇಶ ನಾವುಗಳು ಓದುವಾಗ ಇಂತಹ ಎಲ್ಲಾ ಸೌಲಭ್ಯಗಳು ನಮಗೆ ಸಿಗಲಿಲ್ಲ. ಆದ್ದರಿಂದ ಇವತ್ತಿನ ಮಕ್ಕಳಿಗಾದರೂ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸೋಣ. ಶಿಕ್ಷಣದ ಮಹತ್ವವನ್ನು ಪೋಷಕರು ಅರಿತು ,ಬೆರೆತು, ಮಕ್ಕಳನ್ನು ಬೆಳೆಸಬೇಕು ಎಂದು ಹೇಳಿದರು. ಮುಖ್ಯ ಶಿಕ್ಷಕ ರಂಗನಾಥ್ ಕಾರ್ಯಕ್ರಮ ನಡೆಸಿಕೊಟ್ಟರು. ಸಹ ಶಿಕ್ಷಕ ಬಸವರಾಜ್ ಅವರು ಸ್ವಾಗತಿಸಿದರು. ಶಾಲೆಯ ವತಿಯಿಂದ ಶ್ರೀಮತಿ ರಶ್ಮಿ ಅವರ ತಾಯಿ ಶ್ರೀಮತಿ ಕಲ್ಪನಾ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್. ಡಿ. ಎಂ. ಸಿ. ಅಧ್ಯಕ್ಷ ಮಂಜುನಾಥ್ ಗ್ರಾಮದ ಮುಖಂಡರಾದ ಆರ್ ಪ್ರಕಾಶ್. ರಾಮಚಂದ್ರ ಕಸವನಹಳ್ಳಿ, ಆರ್.ರಾಘವೇಂದ್ರ… ಎ.ಶ್ರೀನಿವಾಸ್. ಆರ್ ತಿಮ್ಮಣ್ಣ. ಅಂಗನವಾಡಿ ಶಿಕ್ಷಕಿ ಮಹಾಲಕ್ಷ್ಮಿ ನಂದಿನಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಜುಲೈ 27ರಂದು ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ
ಚಿತ್ರದುರ್ಗ ಜುಲೈ26: ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ...
0 Comments