ಚಳ್ಳಕೆರೆ ಜ15
ಮಂತ್ರದಿಂದ ವಾಕ್ಯ ಶುದ್ಧಿ; ಯೋಗದಿಂದ ದೇಹ ಶುದ್ದಿ; ಎಂಬ ಗಾದೆಯಂತೆ ದಿನನಿತ್ಯ ಯೋಗ ಅಭ್ಯಾಸದಿಂದ ದೇಹ ಮನಸ್ಸು ಶಾಂತಿಯಿಂದ ಕೂಡಿ ದೇಹ ಸದೃಢವಾಗಲಿಕ್ಕೆ ಪೂರಕವಾಗಿರುತ್ತದೆ ಎಂದು ಪತಂಜಲಿ ಯೋಗ ಶಿಕ್ಷಣದ ಗುರು ಮನೋಹರ್ ಹೇಳಿದರು
ಇವರು ನಗರದ ನಗರಸಭೆ ಎದುರು ರಸ್ತೆಯಲ್ಲಿ ಬೆಳಗಿನ ಜಾವ ಐದು ಮೂವತ್ತರಿಂದ ಏಳು ಗಂಟೆಯವರೆಗೂ 108 ಸೂರ್ಯ ನಮಸ್ಕಾರಗಳೊಂದಿಗೆ ಸಾರ್ವಜನಿಕರಲ್ಲಿ ಯೋಗಾಭ್ಯಾಸದ ಜಾಗೃತಿ ಮೂಡಿಸಿ ಮಾತನಾಡಿದರು
ಇತ್ತೀಚಿನ ದಿನಗಳಲ್ಲಿ ಮನುಷ್ಯಕೆಲಸದ ಒತ್ತಡಕ್ಕೆ ಸಿಕ್ಕು ದೇಹ ಮನಸ್ಸನ್ನು ಕೆಡಿಸಿಕೊಂಡು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೀರಿ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮನುಷ್ಯನು ದಿನನಿತ್ಯ ಯೋಗಾಭ್ಯಾಸದಿಂದ ದೇಹ ಮನಸ್ಸು ಸದೃಢಗೊಳ್ಳುತ್ತದೆ, ಅಲ್ಲದೆ ಆಧ್ಯಾತ್ಮದ ಚಿಂತನೆಯು ಕೂಡ ಮನುಷ್ಯನ ಮನದಲ್ಲಿ ಸದ್ಗುಣಗೊಳಿಸುತ್ತದೆ, ಇದರಿಂದಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ದಿನನಿತ್ಯದ ಕೆಲಸದ ಜೊತೆಗೆ ಬೆಳಗಿನ ಜಾವ ಒಂದು ಗಂಟೆಗಳ ಕಾಲ ಯೋಗಾಭ್ಯಾಸಕ್ಕೆ ಮೀಸಲಿಡಿ ನೀವು ಯೋಗಾಭ್ಯಾಸ ಕಲಿತು ಇನ್ನೊಬ್ಬರಿಗೂ ಕೂಡ ಯೋಗದ ಪರಿಚಯ ಮಾಡಿಕೊಡಿ ಅಂದಾಗಲೇ ಸಮಾಜದ ಉನ್ನತಿಗೆ ಕಾರಣವಾಗುತ್ತದೆ ಇದು ಅಲ್ಲವೇ ಯೋಗ ಅಭ್ಯಾಸ ಅನ್ನುವುದು ಮಕರ ಸಂಕ್ರಾಂತಿಗೆ ಸೀಮಿತವಾಗದೆ ದಿನನಿತ್ಯ ಅಭ್ಯಾಸದಲ್ಲಿ ತೊಡಗಿ ನಿಮ್ಮ ದೇಹ ಶುದ್ದಿ ಮಾಡಿಕೊಳ್ಳಿ ಎಂದು ತಿಳಿಸಿದರು,
ಇನ್ನು ಈ ಸಂದರ್ಭದಲ್ಲಿ ಯೋಗ ಶಿಕ್ಷಕಿ ಪ್ರಮೋದ ಆನಂದ್ ಮಾತನಾಡಿ ಮನುಷ್ಯ ದಿನನಿತ್ಯ ಹಲವಾರು ಒತ್ತಡಗಳಿಂದ ಮಾನಸಿಕ ನೆಮ್ಮದಿ ದೇಹದ ಅಶುದ್ಧತೆಯಿಂದ ಕೂಡಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ ,ಈ ನಿಟ್ಟಿನಲ್ಲಿ ನಮ್ಮ ಪತಂಜಲಿ ಯೋಗ ಶಿಕ್ಷಣವು ಉಚಿತವಾಗಿ ದಿನನಿತ್ಯ ಯೋಗ ಅಭ್ಯಾಸವನ್ನು ಹೇಳಿಕೊಡಲಾಗುತ್ತದೆ, ಇದರ ಸದುಪಯೋಗವನ್ನು ಜನಸಾಮಾನ್ಯರು ತಮ್ಮ ದೇಹದ ಸ್ಥಿತಿ ಮಾನಸಿಕ ಸ್ಥಿತಿಯನ್ನು ಸದೃಢಗೊಳಿಸಿಕೊಂಡು ಮಕ್ಕಳಲ್ಲಿ ಯೋಗದ ಬಗ್ಗೆ ಪರಿಚಯಿಸಿಕೊಡಿ ಎಂದು ತಿಳಿಸಿದರು
ಇನ್ನು ಈ ವೇಳೆ c t ಮಾಸ್ಟರ್. ಶಿವ ನಾಗಪ್ಪ. ಜಯರಾಮ್ ಬಾಬಣ್ಣ, ಗಂಗಾಧರ್, ತಿಪ್ಪೇಸ್ವಾಮಿ, ಚಿದಾನಂದ ಸ್ವಾಮಿ, ಶಿವಣ್ಣ, ಚೆನ್ನಕೇಶವಚಾರ್ ,ಬಾಬುರೆಡ್ಡಿ, ಡಾಕ್ಟರ್ ವೀರೇಶ್. ಮಣಿ ಅಕ್ಕ, ಗೀತಕ್ಕ ಸೇರಿದಂತೆ ಅನೇಕ ಯೋಗ ಪಟುಗಳು ಹಾಜರಿದ್ದರು
0 Comments