ನಾಯಕನಹಟ್ಟಿ ಜ.15: ಪಟ್ಟಣದ ಆರಾಧ್ಯ ದೈವ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದೇವಸ್ಥಾನಕ್ಕೆ ನೂರಾರು ಭಕ್ತರು ಮಕರ ಸಂಕ್ರಾಂತಿಯ ಪ್ರಯುಕ್ತ ನಾಡಿನ ವಿವಿಧ ಭಾಗಗಳಿಂದ ಕುಟುಂಬ ಸಮೇತರಾಗಿ ಆಗಮಿಸಿ.
ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ದರ್ಶನವನ್ನ ಪಡೆದ ಭಕ್ತರು ಎಳ್ಳು ಬೆಲ್ಲ ಸವಿಯುವ ಮಕರ ಸಂಕ್ರಾಂತಿ ಹಬ್ಬದ ದಿನದಂದು ನಮ್ಮ ಬಾಳಲ್ಲಿ ಸಂತೋಷ ಸಮೃದ್ಧಿ ಸುಖ ಶಾಂತಿಯನ್ನು ಮತ್ತು ಸಮೃದ್ಧಿ ಸುಗ್ಗಿ ಮಕರ ಸಂಕ್ರಾಂತಿಯ ದಿನದೆಂದು ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ದೇವರಲ್ಲಿ ಬೇಡಿಕೊಂಡರು.
ಭಕ್ತರು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದರ್ಶನವನ್ನು ಪಡೆಯಲು ಬೆಳಗ್ಗೆಯಿಂದಲೇ ಭಕ್ತರು ಹೂವು ಕಾಯಿ ಹಣ್ಣು ಕರ್ಪೂರ ವಿವಿಧ ಪೂಜಾ ಕೈಗಾರಿಗಳನ್ನು ನೆರವೇರಿಸಿ ನಮ್ಮ ಬಾಳಲ್ಲಿ ಬೆಳಕನ್ನು ಚೆಲ್ಲಿ ಎಂದು ಕೊಬ್ಬರಿಯನ್ನು ಸುಡುವ ಭಕ್ತರ ದೃಶ್ಯ ಕಂಡು ಬಂತು.
ಇದೇ ಸಂದರ್ಭದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಣಧಿಕಾರಿ ಎಚ್. ಗಂಗಾಧರಪ್ಪ, ಸಿಬ್ಬಂದಿ ಎಸ್ ಸತೀಶ್ ,ಮನು, ಶಿವಣ್ಣ, ಶಂಕ್ರಪ್ಪ ,ಬಿ ಟಿ ರುದ್ರೇಶ್, ಎನ್ ಟಿ ತಿಪ್ಪೇಸ್ವಾಮಿ, ದುರುಗೇಶ್, ಮಹದೇವ ,ಕೆ ಎಂ ಮಂಜುನಾಥ್, ಇದ್ದರು
0 Comments