ಚಳ್ಳಕೆರೆ ಅ.10.ತಾಲೂಕಿನ ಹಿಮಾಂಪುರ ಗ್ರಾಮದಲ್ಲಿ ಭಾರತದ ಧ್ವಜವನ್ನು ವಿರೂಪಗೊಳಿಸಿ ಹಾರಿಸಿರುವ ಘಟನೆ ನಡೆದಿದೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರು ಸೇರಿದಂತೆ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಧ್ಯಮ ಮಹಾ ಒಕ್ಕೂಟದ ಅಧ್ಯಕ್ಷ ಕೆ ಶಿವಕುಮಾರ್ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹದಗೆಡುವ ದೃಷ್ಟಿಯಿಂದ ಇಂತಹ ಹೇಯ ಕೃತ್ಯಕ್ಕೆ ಮುಂದಾಗಿರುವವರನ್ನು ಕೂಡಲೇ ಬಂಧಿಸಬೇಕು ಸಾಮರಸ್ಯದಿಂದ ಬದುಕುತ್ತಿರುವ ಜನರ ನಡುವೆ ಇಂತಹ ಘಟನೆಗಳು ದ್ವೇಷದ ಕಿಡಿ ಹೊತ್ತಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಕೂಡಲೇ ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಇದರ ಬಗ್ಗೆ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ತಾಲೂಕು ಅಧ್ಯಕ್ಷ ಡಾ ಮಂಜುನಾಥ್ ಮಾತನಾಡಿ ಭಾರತದ ಧ್ವಜವನ್ನು ಇಂತಹ ಕೃತ್ಯಕ್ಕೆ ಬಳಸಿರುವುದು ಖಂಡನೀಯ ಧ್ವಜದ ಬಗ್ಗೆ ಜ್ಞಾನ ಇರುವವರು ಇಂತಹ ಕೃತ್ಯಗಳಲ್ಲಿ ತೊಡಗುವುದಿಲ್ಲ ದೇಶದಲ್ಲಿ ಎಲ್ಲಾ ಧರ್ಮದ ಜನರು ಸಮಾನರು ಎಂದು ಹೇಳುತ್ತಾರೆ ಕೇವಲ ಜಾತ್ಯಾತೀತ ತತ್ವವನ್ನು ಬಾಯಲ್ಲಿ ಹೇಳಿದರೆ ಸಾಲದು ಯಾವುದೇ ಸಂಘಟನೆ ಅಥವಾ ಪಕ್ಷದ ಯಾರೇ ಆಗಿದ್ದರು ಅಂತಹವರ ವಿರುದ್ಧ ಮುಲಾಜಿಲ್ಲದೆ ಬಂಧಿಸಿ ತಕ್ಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
0 Comments