“ಭದ್ರೆ ನೀ ಬಾರಮ್ಮ.”
ಮಲೆನಾಡ ಸೀಮೆಯವಳನ್ನ
ಕರೆದೋಯ್ಯಲು ಬಂದಿರುವೆ
ಬಯಲುಸೀಮೆ ಕಡೆಗೆ l
ತುಂಗೆ ಧಾರೆರೆದುಕೊಡು
ನಿನ್ನ ತಂಗಿ ಭದ್ರೆನಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಚಿಂತಿಸದಿರು ನಾ ಒಬ್ಬಂಟಿಯಂದು
ಅಲ್ಲಿರುವಳು ವೇದಾವತಿ l
ವೇದಾವತಿ ಜೊತೆಗೂಡಿ
ನಲಿನಲಿದು ಹರಿಯು ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ನೋಡಲ್ಲಿ ತಾಯಿ—
ಭೂತಾಯಿ ಬೆತ್ತಳಾಗಿರುವಳು ಅಲ್ಲಿ l
ಹಚ್ಚ ಹಸುರಿನ ಸೀರೆ ಕುಪ್ಪಸ ತೋಡಿಸಿ
ಭೂತಾಯಿ ಒಡಲನ್ನ ತಣಿಸಿ
ಪಶು ಪಕ್ಷಿ ದಾಹ ನೀಗಿಸು ಬಾ l
ಸಿರಿವಂತರ ಮನೆ ಬಿಟ್ಟು
ಬಡ ರೈತರ ಮನೆಬಾಗಿಲಿಗೆ ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಬರಡು ಭೂಮಿಯ ಹೆಸರಳಿಸಲು
ಹಚ್ಚ ಹಸುರಿನ ವನವೆಂದು ಹೆಸರಿಸಲು ಬಾ l
ಭೂತಾಯ ತಣಿಸಿ ಅನ್ನಧಾತನ ಕುಣಿಸಿ
ಬಡವರ ಬವಣೆ ನೀಗಿಸಲು ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಕಣಿವೆ ಮಾರಿಯ ಒಡಲಿಗೆ ಬಾ ಸಾಕು
ಹಸಿರು ತೋರಣಕಟ್ಟಿ ಭಜಭಜಂತ್ರಿ ನುಡಿಸಿ l
ಓಡ್ಡೋಲಗದಲಿ ಕರೆದೊಯ್ಯುವೆ
ಬಯಲು ಸೀಮೆಯ ನಾಡಿಗೆ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ನೀರಿನ ಬವಣೆ ಗೊತ್ತಮ್ಮ ಎನಗೆ
ಕಳಂಕ ತಾರೆನಮ್ಮ ನಿನಗೆ l
ಹಾದರ ತೋರುವೆ ನಿನಗಮ್ಮ
ಹರಿದು ಬಾ ನೀನಮ್ಮ l
ಬಾ ತಾಯಿ ಬಾ—ಭದ್ರೆ ನೀ ಬಾ—
ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ. @@@@@@@@@@@@@@@@@@@@@@@@@@@@@@@@@@@@@@@@ಬಯಲುಸೀಮೆಯ ಬರದ ನಾಡು ಚಿತ್ರದುರ್ಗಕ್ಕೆ ಬರುವ ಭದ್ರೆಗೆ ಇರುವ ಎಲ್ಲಾ ಅಡೆತಡೆಗಳನೆಲ್ಲ ದಾಟಿ ಸರಾಗವಾಗಿ ಹರಿಯಲು “ರಾಮಲಲ್ಲಾ”ಪ್ರೇರಣೆ ನೀಡಲಿ, ಭದ್ರ ಮೇಲ್ದಂಡೆ ಯೋಜನೆಯ ಹೋರಾಟಗಾರರ ಮತ್ತು ಬಯಲುಸೀಮೆಯ ಅನ್ನಧಾತರ ಬಹುದಿನಗಳ ಕನಸು ಸಕಾಗೊಳಿಸಲು ನಾಡಿನ ದೊರೆಗೆ ಹಾಗು ಜನ ಪ್ರತಿನಿಧಿಗಳಿಗೆ ಪ್ರಭು ಶ್ರೀರಾಮಚಂದ್ರ ಆಶೀರ್ವಾದ ನೀಡಲಿ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳುತ್ತಾ, ಬಯಲುಸೀಮೆಗೆ ಭದ್ರೆ ಹರಿದು. ನೀರಾವರಿಯ ಮುಂಚೂಣಿ ನಾಯಕ, ನೊಂದವರ ಧ್ವನಿ, ಬಯಲುಸೀಮೆಯ ಭೀಮ ರಾವ್ ಎಂ. ಜಯಣ್ಣನವರ ಕನಸು ನನಸಾಗಲಿ ಎಂದು ಆ ದೇವರಲ್ಲಿ ಬೇಡಿ. ನನ್ನ ಈ ಕವನವನ್ನ ಎಂ. ಜಯಣ್ಣನವರ ಚರಣ ಕಮಲಗಳಿಗೆ ಅರ್ಪಿಸುತ್ತೇನೆ.
ಕೆ. ತಿಪ್ಪೇಸ್ವಾಮಿ, ಮಣೆಗಾರ.
0 Comments