“ಭದ್ರೇ ನೀ ಬಾರಮ್ಮೆ ” ಸಾರಿಗೆ ನಿರ್ವಹಕ ತಿಪ್ಪೇಸ್ವಾಮಿ.

by | 22/01/24 | ಕಥೆ.ಕವನ.ಜೀವನ ಚರಿತ್ರೆ

“ಭದ್ರೆ ನೀ ಬಾರಮ್ಮ.”

ಮಲೆನಾಡ ಸೀಮೆಯವಳನ್ನ
ಕರೆದೋಯ್ಯಲು ಬಂದಿರುವೆ
ಬಯಲುಸೀಮೆ ಕಡೆಗೆ l
ತುಂಗೆ ಧಾರೆರೆದುಕೊಡು
ನಿನ್ನ ತಂಗಿ ಭದ್ರೆನಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಚಿಂತಿಸದಿರು ನಾ ಒಬ್ಬಂಟಿಯಂದು
ಅಲ್ಲಿರುವಳು ವೇದಾವತಿ l
ವೇದಾವತಿ ಜೊತೆಗೂಡಿ
ನಲಿನಲಿದು ಹರಿಯು ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ನೋಡಲ್ಲಿ ತಾಯಿ—
ಭೂತಾಯಿ ಬೆತ್ತಳಾಗಿರುವಳು ಅಲ್ಲಿ l
ಹಚ್ಚ ಹಸುರಿನ ಸೀರೆ ಕುಪ್ಪಸ ತೋಡಿಸಿ
ಭೂತಾಯಿ ಒಡಲನ್ನ ತಣಿಸಿ
ಪಶು ಪಕ್ಷಿ ದಾಹ ನೀಗಿಸು ಬಾ l
ಸಿರಿವಂತರ ಮನೆ ಬಿಟ್ಟು
ಬಡ ರೈತರ ಮನೆಬಾಗಿಲಿಗೆ ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಬರಡು ಭೂಮಿಯ ಹೆಸರಳಿಸಲು
ಹಚ್ಚ ಹಸುರಿನ ವನವೆಂದು ಹೆಸರಿಸಲು ಬಾ l
ಭೂತಾಯ ತಣಿಸಿ ಅನ್ನಧಾತನ ಕುಣಿಸಿ
ಬಡವರ ಬವಣೆ ನೀಗಿಸಲು ಬಾ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ಕಣಿವೆ ಮಾರಿಯ ಒಡಲಿಗೆ ಬಾ ಸಾಕು
ಹಸಿರು ತೋರಣಕಟ್ಟಿ ಭಜಭಜಂತ್ರಿ ನುಡಿಸಿ l
ಓಡ್ಡೋಲಗದಲಿ ಕರೆದೊಯ್ಯುವೆ
ಬಯಲು ಸೀಮೆಯ ನಾಡಿಗೆ l
ಬಾ ತಾಯಿ ಬಾ—ಭದ್ರೆ ನೀ ಬಾ—
*
ನೀರಿನ ಬವಣೆ ಗೊತ್ತಮ್ಮ ಎನಗೆ
ಕಳಂಕ ತಾರೆನಮ್ಮ ನಿನಗೆ l
ಹಾದರ ತೋರುವೆ ನಿನಗಮ್ಮ
ಹರಿದು ಬಾ ನೀನಮ್ಮ l
ಬಾ ತಾಯಿ ಬಾ—ಭದ್ರೆ ನೀ ಬಾ—

ಕೆ. ತಿಪ್ಪೇಸ್ವಾಮಿ, ಮಣೆಗಾರ.
K S R T C.
ಚಳ್ಳಕೆರೆ ಘಟಕ. @@@@@@@@@@@@@@@@@@@@@@@@@@@@@@@@@@@@@@@@ಬಯಲುಸೀಮೆಯ ಬರದ ನಾಡು ಚಿತ್ರದುರ್ಗಕ್ಕೆ ಬರುವ ಭದ್ರೆಗೆ ಇರುವ ಎಲ್ಲಾ ಅಡೆತಡೆಗಳನೆಲ್ಲ ದಾಟಿ ಸರಾಗವಾಗಿ ಹರಿಯಲು “ರಾಮಲಲ್ಲಾ”ಪ್ರೇರಣೆ ನೀಡಲಿ, ಭದ್ರ ಮೇಲ್ದಂಡೆ ಯೋಜನೆಯ ಹೋರಾಟಗಾರರ ಮತ್ತು ಬಯಲುಸೀಮೆಯ ಅನ್ನಧಾತರ ಬಹುದಿನಗಳ ಕನಸು ಸಕಾಗೊಳಿಸಲು ನಾಡಿನ ದೊರೆಗೆ ಹಾಗು ಜನ ಪ್ರತಿನಿಧಿಗಳಿಗೆ ಪ್ರಭು ಶ್ರೀರಾಮಚಂದ್ರ ಆಶೀರ್ವಾದ ನೀಡಲಿ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳುತ್ತಾ, ಬಯಲುಸೀಮೆಗೆ ಭದ್ರೆ ಹರಿದು. ನೀರಾವರಿಯ ಮುಂಚೂಣಿ ನಾಯಕ, ನೊಂದವರ ಧ್ವನಿ, ಬಯಲುಸೀಮೆಯ ಭೀಮ ರಾವ್ ಎಂ. ಜಯಣ್ಣನವರ ಕನಸು ನನಸಾಗಲಿ ಎಂದು ಆ ದೇವರಲ್ಲಿ ಬೇಡಿ. ನನ್ನ ಈ ಕವನವನ್ನ ಎಂ. ಜಯಣ್ಣನವರ ಚರಣ ಕಮಲಗಳಿಗೆ ಅರ್ಪಿಸುತ್ತೇನೆ.

ಕೆ. ತಿಪ್ಪೇಸ್ವಾಮಿ, ಮಣೆಗಾರ.

Latest News >>

ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಓ.ಮಂಜುನಾಥ್ ಮಾಳಿಗೆ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು...

ಚಿತ್ರದುರ್ಗದಲ್ಲಿ ನಡೆಯಲಿರುವ ಪತ್ರಿಕಾ ವಿತರಕರ ಹಂಚಿಕೆದಾರರ 4ನೇರಾಜ್ಯಸಮ್ಮೇಳನ ಕಾರ್ಯಕ್ರಮ ಯಶಸ್ವಿಯಾಗಲಿ : ಆಲೂರು ಹನುಮಂತರಾಯಪ್ಪ

ಹಿರಿಯೂರು: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಚಿತ್ರದುರ್ಗ ಜಿಲ್ಲಾ ಪತ್ರಿಕೆ ಹಂಚಿಕೆದಾರರ ಹಾಗೂ ವಿತರಕರ ಸಂಘ (ರಿ) ಇವರುಗಳ...

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅನುಷ್ಟಾನ ಮೌಲ್ಯಮಾಪನ ಸಭೆಜಿಲ್ಲಾ ಮೇಲ್ವಿಚಾರಣಾ ಸಮಿತಿಯಿಂದ ಕ್ರಿಯಾಯೋಜನೆ ಅನುಮೋದನೆ ಕ್ರಮಕ್ಕೆ ಶಿಫಾರಸ್ಸು

ಚಿತ್ರದುರ್ಗ ಸೆ.06: ಪರಿಶಿಷ್ಟ ಜಾತಿ ಹಾಗೂ ಗಿರಿಜನ ಉಪಯೋಜನೆಯಡಿ (ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ) ಜಿಲ್ಲೆಯಲ್ಲಿ ಕೈಗೊಳ್ಳುವ ಎಲ್ಲಾ...

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಸೇವಿಸುವುದು ಅಭ್ಯಾಸಿಸಿ

ಚಿತ್ರದುರ್ಗ ಸೆ.6: ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಕ್ಕಳ ಹಾಗೂ ಗರ್ಭಿಣಿಯರ, ಬಾಣಂತಿಯರ ಆರೋಗ್ಯ ಪೋಷಣ ಮಾಸಾಚರಣೆ ಆಗಬೇಕು. ಮಕ್ಕಳಲ್ಲಿ...

ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆ

ಚಿತ್ರದುರ್ಗ ಸೆ.6: ಯುವ ಜನೋತ್ಸವ ಅಂಗವಾಗಿ ಎಚ್‌ಐವಿ/ ಏಡ್ಸ್ ಜಾಗೃತಿಗಾಗಿ ಮ್ಯಾರಥಾನ್ ಸ್ಪರ್ಧೆಯು ಚಿತ್ರದುರ್ಗ ನಗರದಲ್ಲಿ ಗುರುವಾರ...

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪರಿಶೀಲನೆ

ಚಿತ್ರದುರ್ಗ ಸೆ.06: ನಬಾರ್ಡ್ ಸಂಸ್ಥೆಯ ಡಿಜಿಎಂ ಸಂಜೀವ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಈಚೆಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ...

ಮೊಳಕಾಲ್ಮುರು : ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿ ಶಾಸಕ ಎನ್ ವೈ ಗೋಪಾಲಕೃಷ್ಣ.

ಮೊಳಕಾಲ್ಮೂರು :-ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಗ್ಯಾರೆಂಟಿ ಅನುಷ್ಠಾನ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎನ್ ವೈ....

ಬೆಂಬಲಬೆಲೆಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳ ಸ್ಥಾಪನೆ

ಚಿತ್ರದುರ್ಗ ಸೆ.04: 2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ ನಿಗದಿಪಡಿಸಿರುವ ರೂ.7,280/- (ಪ್ರತಿ ಕ್ವಿಂಟಾಲ್‌ಗೆ)...

ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ – ಕರ್ನಾಟಕ’ ಆಯ್ಕೆಗೆ ನಾಮನಿರ್ದೇಶನ ಆಹ್ವಾನ

ಚಿತ್ರದುರ್ಗ ಸೆ.04: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ...

ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್ 110 ಸಿಸಿ ಯ ಆಕರ್ಷಕ ಸ್ಕೂಟಿ ಮಾರುಕಟ್ಟೆಗೆ ಬಿಡುಗಡೆ.

ಚಿತ್ರದುರ್ಗ: ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿನ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಇಂದು ನೂನವಾಗಿ ಮಾರುಕಟ್ಟೆಗೆ ಆಗಮಿಸಿರುವ ಜುಪಿಟರ್...

ನಿಮಗೆ ವಿದ್ಯಮಾನಗಳ ವಸ್ತುನಿಷ್ಠ
ವಿಶ್ಲೇಷಣೆ ಬೇಕು
ನಮಗೆ ನಿಮ್ಮಂತಹ ಓದುಗರು ಬೇಕು
ಜನತೆಯ ಮಾಧ್ಯಮವನ್ನು ಬೆಂಬಲಿಸಿ ದೇಣಿಗೆ ನೀಡಲು ಈ ಕೆಳಗೆ ಕ್ಲಿಕ್ಕಿಸಿ

0 Comments

Submit a Comment

Your email address will not be published. Required fields are marked *

You cannot copy content of this page