ಚಳ್ಳಕೆರೆ ಮೇ 14 ಬ್ಯಾಂಕ್ ಖಾತೆ, ಪಹಣಿ, ಪಾನ್ ಕಾರ್ಡ್ .ಸಿಮ್ ಕಾರ್ಡ್ . ಬೆಳೆವಿಮೆ,ಬೆಳೆ ಪರಿಹಾರ . ಆಧಾರ್ ಕಾರ್ಡ್ ಜೋಡಣೆ . ಇ-ಕೆವೈಸಿ ಸರಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗಲೂ ನೀಡುವ ಬಯೋಮೆಟ್ರಿಕ್ ಕಡ್ಡಾಯಗೊಳಿಸಿಲಾಗಿದ್ದು ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಯಲ್ಲಿನ ಹಣಕ್ಕೆ ಸೈಬರ್ ಕಳ್ಳರು ಕನ್ನ ಹಾಕುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು ಇದು ಚಳ್ಳಕೆರೆ ನಗರದ ದೊಡ್ಡೇರಿ ವಕೀಲ ಮಲ್ಲಿಕಾರ್ಜುನ ಎಂಬುವರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ 1.30 ಲಕ್ಷ ರೂ, ನೀತೀನ್ 1.80 ಲಕ್ಷ ರೂ ಸೇರಿದಂತೆ ಹಲವರ ಬ್ಯಾಂಕ್ ಖಾತೆಗಳ ಮೇಲೆ ಸೈಬರ್ ಕಳ್ಳರು ಕನ್ನ ಹಾಕುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಕೇವಲ ಚಳ್ಳಕೆರೆಗೆ ಮಾತ್ರ ಸೀಮಿತವಾಗದೆ ರಾಜ್ಯಾದ್ಯಂತ ಸೈಬರ್ ವಂಚಕರ ಹಾವಳಿ ಹೆಚ್ಚಿಗಿದ್ದು ಇದರಿಂದ ಸಾರ್ವಜನಿಕರಲ್ಲಿ ಆತಂಕದ ಮನೆ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವು ಖಾಸಗಿ ಯ್ಯಾಪ್ ಮೂಲಕ ಜನರನ್ನು ಮರಳು ಮಾಡಿ ಕಡಿಮೆ ಹಣ ಹೂಡಿಕೆ ಮಾಡಿದರೆ ಹೆಚ್ಚು ಹಣ ನೀಡುತ್ತೇವೆ ಎಂಬ ಮರಳು ಮಾತಿಗೆ ನಂಬಿ ಬೇಗಾ ಶ್ರೀಮಂತರಾಗ ಬೇಕು . ಹೆಚ್ಚು ಹಣ ಮಾಡಬೇಕು ಎಂಬ ಆಸೆಗೆ ಬಿದ್ದು ಹಣ ಹೂಡಿಕೆ ಮಾಡಿ ಕಳೆದು ಕೊಂಡರೆ ಇನ್ನು ಕೆಲವರು ಆನ್ ಲೈನ್ ಗೇಮ್ ನಲ್ಲಿ ಹಣ ಹಾಕಿ ಕಳೆದು ಕೊಂಡು ಸಾಲದ ದವಡೆಗೆ ಸಿಲುಕಿ ನರಳುವಂತಾಗಿದೆ.
ರಾಜ್ಯಾದ್ಯಂತ ನಾನಾ ರೂಪಗಳಲ್ಲಿ ಆನ್ಲೈನ್ ವಂಚನೆ ಹೆಚ್ಚುತ್ತಿದೆ. ಈಗ ಆಧಾರ್ ಕಾರ್ಡ್ನ ಬೆರಳಚ್ಚು (ಬಯೋಮೆಟ್ರಿಕ್) ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದಾರೆ ಎಂಬ ಬೀತಿ ಜನರಲ್ಲಿ ಕಾಡತೊಡಗಿದೆ. ಸೈಬರ್ ಖದೀಮರು ಸಣ್ಣ ಮೊತ್ತವನ್ನೇ ಸೇಫ್ ಟಾರ್ಗೆಟ್ ಮಾಡಿಕೊಂಡಿದ್ದರು . ಸಣ್ಣ ಮೊತ್ತ ಕಳೆದುಕೊಂಡವರು ಹೆಚ್ಚಾಗಿ ಪೊಲೀಸ್ ಠಾಣೆಗಳಲ್ಲಿ ದೂರು ನೀಡದೆ ಸುಮ್ಮನಾಗುತ್ತಿದ್ದರು ಇದನ್ನೇ ವರದಾನ ಮಾಡಿಕೊಂಡ ಸೈಬರ್ ವಂಚಕರು ದೊಡ್ಡ ಮೊತ್ತಕ್ಕೆ ಕನ್ನ ಹಾಕಲು ಮುಂದಾಗಿದ್ದಾರೆ.
ಈಗಾಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸೈಬರ್ ಕಳ್ಳರ ಹಾವಳಿಗೆ ಕಡಿವಾಣ ಹಾಕಲು ಮುಂದಾಗ ಬೇಕಿದೆ.
0 Comments